ನಿತ್ಯ ಭವಿಷ್ಯ : 25-07-2020

0

ಮೇಷರಾಶಿ
ತಾಯಿಗೆ ಅನಾರೋಗ್ಯ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಶತ್ರುಗಳು ಅಚ್ಚರಿ ಪಡುವಂತಹ ರೀತಿಯಲ್ಲಿ ವಿಜಯಲಕ್ಷ್ಮೀ ಒಲಿಯುವಳು ಕೆಲಸದಲ್ಲಿ ಅಧಿಕಾರಿವರ್ಗಕ್ಕೆ ಮುಂಭಡ್ತಿ ಇದೆ. ಧಾನ್ಯಗಳ ವ್ಯವಹಾರದಲ್ಲಿ ರಖಂ ವ್ಯಾಪಾರಿಗಳಿಗೆ ಆದಾಯವು ಹೆಚ್ಚಲಿದೆ. ಮಕ್ಕಳಿಂದ ದಾಂಪತ್ಯದಲ್ಲಿ ಸಮಸ್ಯೆ, ಇಲ್ಲ ಸಲ್ಲದ ಅಪವಾದ ನಿಂದನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ವೃಷಭರಾಶಿ
ಮಾನಸಿಕ ವೇದನೆ-ಆತಂಕ, ಶತ್ರುಗಳ ದಮನ, ಕೈಗೆ ಎಟಕದ ಕಾರ್ಯಗಳು ಕೂಡಾ ಕೈಗೂಡಲಿವೆ. ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಉದ್ಯೋಗಿ ವರ್ಗಕ್ಕೆ ಮೇಲಧಿಕಾರಿಗಳ ಕಿರಿಕಿರಿ ಇದೆ. ಕನ್ಯಾಮಣಿಗಳಿಗೆ ಕಂಕಣಭಾಗ್ಯ ಒದಗಿ ಬಂದು ಸಂತಸವಾಗಲಿದೆ. ಪಿತ್ರಾರ್ಜಿತ ಆಸ್ತಿ ತಗಾದೆ, ವ್ಯವಹಾರದಲ್ಲಿ ಹಿನ್ನಡೆ, ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಗೊಂದಲ.

ಮಿಥುನರಾಶಿ
ಮಕ್ಕಳೊಂದಿಗೆ ವೈಮನಸ್ಸು, ಬಂಧುಗಳಿಂದ ಕಿರಿಕಿರಿ, ಸ್ತ್ರೀಯರಿಂದ ಅವಮಾನ, ಬಹುದಿನಗಳ ಬೇಡಿಕೆಯಾದ ವಾಹನ ಮನೆಗೆ ಬರಲಿದೆ. ವಿದೇಶಯಾತ್ರಾದ ಕನಸು ಸದ್ಯದಲ್ಲೇ ನನಸಾಗಲಿದೆ. ಮಡದಿಗೆ ಪ್ರವಾಸದ ಆಸೆ ಕೈಗೂಡಲಿದೆ. ನೌಕರ ವರ್ಗಕ್ಕೆ ವರ್ಗಾವಣೆಯ ಪ್ರಸಂಗವಿದೆ. ಗೌರವಕ್ಕೆ ಧಕ್ಕೆ, ಪ್ರಯಾಣದಲ್ಲಿ ಸಮಸ್ಯೆ, ಸ್ಥಳ-ಉದ್ಯೋಗ ಬದಲಾವಣೆಯಿಂದ ಸಮಸ್ಯೆ.

ಟಕರಾಶಿ
ಕೆಲಸ ಕಾರ್ಯ ಜೀವನಕ್ಕೆ ಸ್ಪೂರ್ತಿ ಪ್ರಾಪ್ತಿ, ಬಂಧುಗಳಿಗೆ ಸಹಾಯಹಸ್ತ ನಿಮಗೆ ಸಮಸ್ಯೆ ತಂದೀತು. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ರಾಜಕೀಯದಲ್ಲಿ ಅಲ್ಲೋಲಕಲ್ಲೋಲವಿದ್ದರೂ ಅಪಜಯಬಾರದು. ಕಫ‌ ಬಾಧೆ, ಶೀತ ಪ್ರಕೋಪ ದೇಹಕ್ಕೆ ಶ್ರಮ ಕೊಡಲಿದೆ‌. ಪಿತ್ರಾರ್ಜಿತ ಆಸ್ತಿ ತಗಾದೆ, ರಾಜಕೀಯ ವ್ಯಕ್ತಿಗಳಿಂದ ಸಮಸ್ಯೆ, ಹಣಕಾಸು ಮೋಸ, ನೀವಾಡುವ ಮಾತಿಂದ ತಾಯಿಗೆ ನೋವು, ಕೌಟುಂಬಿಕ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಸಿಂಹರಾಶಿ
ಅನಿರೀಕ್ಷಿತ ಖರ್ಚುವೆಚ್ಚಗಳು ಹೆಚ್ಚಲಿವೆ. ಸಿನಿಮಾ ಪ್ರಪಂಚ, ಕಲಾ ಜಗತ್ತಿನ ದುಡಿಮೆಯವರಿಗೆ ಉತ್ತಮ ಅಭಿವೃದ್ಧಿ ಇದೆ. ಬಂಧುಗಳ ಆಗಮನ ನೆಮ್ಮದಿ ದೊರಕಲಿದೆ. ಶ್ರಮಕ್ಕೆ ತಕ್ಕಫ‌ಲ ಸಿಗಲಿದೆ. ಶೌರ್ಯ ಪ್ರದರ್ಶನಕ್ಕೆ ಮುಂದಾಗುವಿರಿ, ಹಳೇ ನೆನಪು ಕಾಡುವುದು, ಪತ್ರ ವ್ಯವಹಾರಗಳಲ್ಲಿ ಒಪ್ಪಂದ, ಆತುರ ನಿರ್ಧಾರದಿಂದ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಗೊಂದಲ.

ನ್ಯಾರಾಶಿ
ಅಧಿಕವಾದ ಉಷ್ಣ ಬಾಧೆ, ಚೀಟಿ ವ್ಯವಹಾರಗಳಲ್ಲಿ ನಷ್ಟ, ವಾಹನ ಅಪಘಾತವು ಸ್ವಲ್ಪದರಲ್ಲೇ ತಪ್ಪಿ ಅಪಾಯದಿಂದ ಪಾರಾಗಲಿದ್ದೀರಿ. ಕಳ್ಳಕಾಕರ ಭೀತಿಯು ಸಮಸ್ಯೆ ತರಲಿದೆ. ತಂದೆ ಮಕ್ಕಳೊಳಗೆ ಆಸ್ತಿಯಾ ವಿಚಾರದಲ್ಲಿ ಯಾ ವ್ಯವಹಾರದ ವಿಚಾರದಲ್ಲಿ ಘರ್ಷಣೆ ಇದೆ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಮೋಸ ಹೋಗುವ ಸಾಧ್ಯತೆ, ಅನಗತ್ಯ ವಿಚಾರಗಳಿಂದ ನಿದ್ರಾಭಂಗ, ಸ್ತ್ರೀ ಒತ್ತಡಕ್ಕೆ ಸಿಲುಕುವಿರಿ.

ತುಲಾರಾಶಿ
ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಶುಭಕಾರ್ಯ ಹತ್ತಿರಬಂದು ತಪ್ಪಲಿದೆ. ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರವಿದೆ. ತಾತ್ಕಾಲಿಕ ವೃತ್ತಿಯವರಿಗೆ ವೇತನದಲ್ಲಿ ಕಡಿತವಿದೆ. ಕೃಷಿಕಾರ್ಯದಲ್ಲಿ ವಿಳಂಬವು ಆಗಲಿದೆ. ಆತ್ಮ ಸಂಕಟ, ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಅನುಕೂಲ, ಮಿತ್ರರಿಂದ ಸಹಕಾರ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ.

ವೃಶ್ಚಿಕರಾಶಿ
ಉದ್ಯೋಗ ಸ್ಥಳದಲ್ಲಿ ಅನುಮಾನ, ಚಿನ್ನ, ಬೆಳ್ಳಿ ಕೆಲಸಗಾರರಿಗೆ ಆದಾಯವು ವೃದ್ಧಿಯಾಗಲಿದೆ. ಕಳೆದುಕೊಂಡ ಕೆಲಸವು ಪುನಃ ದೊರಕಲಿದೆ. ಯೋಗ್ಯ ವಯಸ್ಕರಿಗೆ ಕಂಕಣಭಾಗ್ಯದ ಯೋಗವಿದೆ. ಹಿರಿಯರಿಗೆ ಯಾತ್ರಾದಿಗಳಿಂದ ಸಮಾಧಾನ ಸಿಗಲಿದೆ. ಮೇಲಾಧಿಕಾರಿಗಳಿಂದ ದರ್ಪ, ಒತ್ತಡದಿಂದ ನಿದ್ರಾಭಂಗ, ಅನ್ಯರ ತಪ್ಪಿನಿಂದ ಅಪವಾದ, ಆರೋಗ್ಯದ ಬಗ್ಗೆ ಕಾಳಜಿ, ತಾಳ್ಮೆಯಿಂದ ಕಾರ್ಯ ಪ್ರಗತಿ.

ಧನಸ್ಸುರಾಶಿ
ತಂದೆಯಿಂದ ಆಕಸ್ಮಿಕ ಲಾಭ, ರಾಜಕೀಯ ವ್ಯಕ್ತಿಗಳಿಗೆ ಅನುಕೂಲ, ಕೆಲಸಗಾರರಿಗೆ ಲಾಭ, ಹಣಕಾಸಿನ ವ್ಯವಹಾರದಲ್ಲಿ ಅಪಚಾರವಾದೀತು. ಆದಾಯಕ್ಕೂ ಮೀರಿ ಖರ್ಚು ಬರುವುದರಿಂದ ತಲೆ ಬಿಸಿ ತಪ್ಪಲಾರದು. ರಾಜಕೀಯದಲ್ಲಿ ಪದಚ್ಯುತಿಯ ಯೋಗವಿದೆ. ಶತ್ರು ಪಲಾಯನ ಮಾಡುವರು. ಧಾರ್ಮಿಕ ಕ್ಷೇತ್ರದವರಿಗೆ ಅನಿರೀಕ್ಷಿತ ಶುಭ ಫಲ, ಮೇಲಾಧಿಕಾರಿಗಳ ಜೊತೆ ವಾಗ್ವಾದ.

ಮಕರರಾಶಿ
ಅನೀರಿಕ್ಷಿತ ವಾದ-ವಿವಾದ, ಸೋಲು ನಷ್ಟ ನಿರಾಸೆ, ಪ್ರವಾಸದ ಮೇಲೆ ಪ್ರವಾಸ ಕಂಡು ಬಂದೀತು. ಅನಿರೀಕ್ಷಿತ ಧನ ಸಂಪತ್ತು ಕೈಗೆ ಬಂದೀತು. ವಿದ್ಯಾ ಲಾಭದಲ್ಲಿ ವಿದ್ಯಾರ್ಥಿಗಳಿಗೆ ಹರುಷ ತಂದೀತು. ಹಣದ ವಿಚಾರದಲ್ಲಿ ಮನಸ್ತಾಪವು ಕಂಡು ಬರಲಿದೆ. ಉದ್ಯೋಗದಲ್ಲಿ ತೊಂದರೆ, ಒತ್ತಡಕ್ಕೆ ಸಿಲುಕುವಿರಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.

ಕುಂಭರಾಶಿ
ಸಾಲ ಬಾಧೆ, ಚೀಟಿ ವ್ಯವಹಾರದಲ್ಲಿ ಸಮಸ್ಯೆ, ವಿದ್ಯಾರ್ಥಿಗಳಿಗೆ ಹಾಳು ವ್ಯಸನದಿಂದ ಅಭ್ಯಾಸದಲ್ಲಿ ಹಿನ್ನಡೆ. ಬಂಧುಗಳು ಒಬ್ಬೊಬ್ಬರಾಗಿ ದೂರವಾದಾರು. ನೌಕರ ವರ್ಗಕ್ಕೆ ವರ್ಗಾವಣೆಯ ಸಂಭವವಿದೆ. ಹಿರಿಯರಿಗೆ ಅಪತ್ಕಾಲವಿದೆ. ಜಾಗ್ರತೆ ವಹಿಸುವುದು ಅಗತ್ಯ. ದಾಂಪತ್ಯದಲ್ಲಿ ಸಂಶಯ-ವಾಗ್ವಾದ, ಪಾಲುದಾರಿಕೆಯಲ್ಲಿ ಉತ್ತಮ ಬೆಳವಣಿಗೆ, ಉತ್ತಮ ಅವಕಾಶಗಳು ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ಮೀನರಾಶಿ
ಪ್ರೇಮ ವಿವಾಹಕ್ಕೆ ಅಡೆತಡೆ, ಮಕ್ಕಳಿಗಾಗಿ ಖರ್ಚು, ದೂರದ ಬಂಧುಗಳ ಸಮಾಗಮ ನೆಂಟಸ್ತಿಕೆಯ ಸಾಮೀಪ್ಯ ಪಡೆಯಬಹುದು. ವೈದ್ಯಕೀಯ ವೃತ್ತಿ ನಿರತರಿಗೆ ಅಪವಾದ ಭಯವಿದೆ. ಆದಾಯಕ್ಕೆ ಕೊರತೆ ಕಾಣದು. ಹಿರಿಯರಿಗೆ ಆರೋಗ್ಯದಲ್ಲಿ ಜಾಗ್ರತೆ ಮಾಡಿರಿ. ಸಾಲ ಮಾಡುವ ಪರಿಸ್ಥಿತಿ, ಪ್ರತಿಭೆಗೆ ತಕ್ಕ ಮನ್ನಣೆ ಲಭಿಸುವುದಿಲ್ಲ, ಸಂತಾನ ದೋಷ, ಮಕ್ಕಳಿಂದ ಎಡವಟ್ಟು, ಕುಟುಂಬದಲ್ಲಿ ಆತಂಕದ ವಾತಾವರಣ.

Leave A Reply

Your email address will not be published.