ನಿತ್ಯಭವಿಷ್ಯ : 06-03-2020

0

ಮೇಷರಾಶಿ
ಉದ್ಯೋಗ ಬದಲಾವಣೆಯ ಅವಕಾಶಗಳು ಒದಗಿ ಬರಲಿವೆ, ದೇಹಾರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಸಂಚಾರದಲ್ಲಿ ಜಾಗ್ರತೆ. ತಾಯಿಯಿಂದ ಲಾಭ, ಸಾಂಸಾರಿಕವಾಗಿ ನೆಮ್ಮದಿ ತೋರಿ ಬಂದರೂ ಸಮಾಧಾನವಿರದು. ಉದ್ಯೋಗದಲ್ಲಿ ಸಂಕಷ್ಟ, ಅನಾರೋಗ್ಯ ಸಮಸ್ಯೆ.

ವೃಷಭರಾಶಿ
ಉದ್ಯೋಗ ಸ್ಥಳದಲ್ಲಿ ಅಪಮಾನ.ಆರ್ಥಿಕ, ವಿದ್ಯಾ ಕ್ಷೇತ್ರದಲ್ಲಿ ಶಿಕ್ಷಕ ವರ್ಗದವರಿಗೆ ಕಾರ್ಯಒತ್ತಡಗಳಿಂದ ಕೋಪತಾಪಗಳು ಹೆಚ್ಚಲಿವೆ. ಕೌಟುಂಬಿಕ ಸಮಸ್ಯೆ ಬಗೆಹರಿಯುವುದು, ಸಂತಾನ ದೋಷಗಳಿಂದ ಮುಕ್ತಿ, ಅವಿವಾಹಿತರ ವೈವಾಹಿಕ ಪ್ರಸ್ತಾವಗಳಲ್ಲಿ ಮುಜುಗರದ ವಾತಾವರಣ ಸೃಷ್ಟಿಸಲಿದೆ. ಕಿರು ಸಂಚಾರವಿದೆ.

ಮಿಥುನರಾಶಿ
ಉದ್ಯೋಗ ಬದಲಾವಣೆಯ ನಿರ್ಧಾರಗಳಿಗೆ ತಕ್ಕ ಅವಕಾಶಗಳು ಒದಗಿ ಬಂದಾವು. ಗೊಂದಲಗಳಿಂದ ಅವಕಾಶಗಳನ್ನು ಕೈಚೆಲ್ಲುವಿರಿ. ಪಿತ್ರಾರ್ಜಿತ ಆಸ್ತಿ ಕುರಿತು ಗೊಂದಲ ಆತಂಕ, ಅನಗತ್ಯ ಮಾತಿನಿಂದ ಜಗಳ ಮನಸ್ತಾಪ, ಭಾವನಾತ್ಮಕ ಹಳೆಯ ವಿಚಾರಗಳ ಬಗ್ಗೆ ಮರೆತು ಬಿಡುವುದು ಅಗತ್ಯವಿದೆ. ದೂರ ಸಂಚಾರದಲ್ಲಿ ಜಾಗ್ರತೆ ಇರಲಿ.

ಕಟಕರಾಶಿ
ಸ್ವಂತ ವ್ಯಾಪಾರ ಉದ್ದಿಮೆಯಲ್ಲಿ ನಷ್ಟ. ಖರ್ಚುವೆಚ್ಚಗಳಲ್ಲಿ ಹೆಚ್ಚಿನ ನಿಯಂತ್ರಣವಿರಲಿ. ಸರಕಾರಿ ಕೆಲಸಕಾರ್ಯಗಳು ಅಡೆತಡೆಗಳಿಂದ ಮುನ್ನಡೆಯುಲಿವೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಮಾಡಿದ್ದಲ್ಲಿ ಮುನ್ನಡೆಗೆ ಸಾಧಕವಾದೀತು., ಬಂಧುಗಳಿಂದ ಕೋರ್ಟ್ ಮೆಟ್ಟಿಲು, ಸ್ವಯಂ ಅಪರಾಧಗಳಿಂದ ಮಕ್ಕಳಿಂದ ದೂರ.

ಸಿಂಹರಾಶಿ
ಅನಗತ್ಯ ಮಾತಿಂದ ಕುಟುಂಬದಲ್ಲಿ ವಾಗ್ವಾದ. ಆರ್ಥಿಕವಾಗಿ ಸಾಲಬಾಧೆ ನಿವಾರಣೆಯಾಗಿ ಸಮಾಧಾನವಾದೀತು. ಸ್ನೇಹ, ಸಂಗಾತಿ, ಪಾಲುದಾರಿಕೆ, ವ್ಯವಹಾರಕ್ಕಾಗಿ ಅಧಿಕ ಖರ್ಚು, ಅವಿವಾಹಿತರ ಪ್ರಯತ್ನಬಲ ಸಾರ್ಥಕವಾದೀತು. ಸೋಮಾರಿತನ, ಆಲಸ್ಯ, ಯಾವುದೇ ವಿಚಾರವನ್ನು ಸಮಾಧಾನಚಿತ್ತದಿಂದ ಆಲಿಸಿಕೊಳ್ಳಿರಿ. ರಾಜಿ ಮಾಡಿಕೊಳ್ಳುವ ಮನಸ್ಸಿರಲಿ.

ಕನ್ಯಾರಾಶಿ
ಪ್ರಯತ್ನಬಲದಿಂದ ಸಮಸ್ಯೆಗಳು ಹಂತ ಹಂತವಾಗಿ ಉಪಶಮನ ಗೊಂಡಾವು. ಬಂದ ಅವಕಾಶವನ್ನು ಸದುಪಯೋಗಿಸಿಕೊಂಡಲ್ಲಿ ಮುನ್ನಡೆಗೆ ಅವಕಾಶ ವಿರುತ್ತದೆ. ಮನಸ್ಸು ತಪ್ಪುದಾರಿಗೆ ಎಳೆದೀತು ಜಾಗ್ರತೆ, ಚರ್ಮ, ನರ, ಆಹಾರ ವ್ಯತ್ಯಾಸದಿಂದ ಸಮಸ್ಯೆ, ಮಿತ್ರರೇ ಶತ್ರುಗಳಾಗುವರು, ದಾಯಾದಿ ಕಲಹಗಳಿಂದ ಮುಕ್ತಿ.

ತುಲಾರಾಶಿ
ಅನಿರೀಕ್ಷಿತ ಅದೃಷ್ಟದ ಬೆಂಬಲ ನಿಮಗೆ ಸಿಗಲಿದೆ. ಬರಹಗಾರರು, ಐಟಿ-ಬಿಟಿ, ವಿದ್ಯಾಶಾಲೆ ನಡೆಸುವವರಿಗೆ ಉತ್ತಮ ಹೆಸರು ಪ್ರಾಪ್ತಿ, ಸರ್ಪ ಸಂಬಂಧಿ ಗಾಬರಿಯಾಗುವ ಕನಸು ಬೀಳಬಹುದು. ಸಾಂಸಾರಿಕವಾಗಿ ಬಂದ ಸವಾಲುಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕಾದೀತು. ತಮ್ಮ ಉತ್ತಮ ಚಿಂತನೆಗಳತ್ತ ದೃಷ್ಟಿ ಇರಲಿ. ಶುಭದಿನ

ವೃಶ್ಚಿಕರಾಶಿ
ವಾಹನ ಖರೀದಿ, ಸ್ಥಿರಾಸ್ತಿ, ಕಟ್ಟಡ ನಿರ್ಮಾಣ, ಹೊಸ ಉಪಕರಣ ಖರೀದಿ, ನಿಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಬಂಧುಗಳು ನಿಮಗೆ ಸಿಗಲಿದ್ದಾರೆ. ಧನಾಗಮನದ ಅಭಿವೃದ್ಧಿ ಗೋಚರಕ್ಕೆ ಬರಲಿದೆ. ವಿದ್ಯಾರ್ಥಿಗಳು ವಿದ್ಯಾಬಲವನ್ನು ಸಂಪಾದಿಸಲಿದ್ದಾರೆ. ದಿನಾಂತ್ಯ ಶುಭ. ದುಶ್ಚಟಗಳಿಂದ ಮಾನಸಿಕ ವೇದನೆ, ಮನೆಯ ವಾತಾವರಣ ಕಲುಷಿತ.

ಧನಸ್ಸುರಾಶಿ
ಮಾನಸಿಕ ಸಮಾಧಾನ ಕಂಡು ಬರಲಿದೆ.ಉದ್ಯೋಗ ಬದಲಾವಣೆಯಿಂದ ತೊಂದರೆ, ಸ್ನೇಹಿತರೊಡನೆ ವ್ಯವಹಾರ ಚರ್ಚೆ, ಪತ್ರ ವ್ಯವಹಾರ, ಮಾತಿನಲ್ಲಿ ಸಮಾಧಾನವಿರಲಿ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಆರ್ಥಿಕವಾಗಿ ಚಿಂತೆಬೇಡ.ನಿರ್ಧಾರಗಳಿಂದ ನಷ್ಟ,

ಮಕರರಾಶಿ
ವೃತ್ತಿರಂಗದಲ್ಲಿ ಮುನ್ನಡೆ ಸಮಾಧಾನ ತರುತ್ತದೆ. ಧೀರ್ಘಕಾಲದ ಹಣ ಮರುಪಾವತಿ, ಉದ್ಯೋಗ ಬದಲಾವಣೆಯ ನಿರ್ಧಾರ ನಿಶ್ಚಿತ ರೂಪದಲ್ಲಿದೆ. ಆರ್ಥಿಕವಾಗಿ ಶನಿಯ ಬೆಂಬಲ ತುಸು ಚೇತರಿಕೆಯನ್ನು ತಂದು ಕೊಡಲಿದೆ. ಖರ್ಚಿನಲ್ಲಿ ಜಾಗ್ರತೆ.ತಂದೆ ಬಂಧುಗಳಿಂದ ಕಲಹಗಳು, ಮಾತಿನಲ್ಲಿ ಹಿಡಿತವಿರಲಿ, ಅಪಬ್ರಹ್ಮಿತ ಮಾತುಗಳಾಡುವಿರಿ.

ಕುಂಭರಾಶಿ
ನೀರು ಮತ್ತು ಆಹಾರ ವ್ಯತ್ಯಾಸ, ಆಗಾಗ ಸಂಚಾರಗಳು ದೇಹಾರೋಗ್ಯವನ್ನು ಹಾಳು ಮಾಡೀತು. ಬಂಧು ಬಳಗದವರ ಆಗಮನವು ಮನೆಯಲ್ಲಿ ಸಂತಸದ ವಾತಾವರಣವನ್ನು ತಂದು ಕೊಡಲಿದೆ. ಸಣ್ಣಪುಟ್ಟ ಸಮಸ್ಯೆಗಳು ದೇಹದಲ್ಲಿ ಕಂಡು ಬಂದಾವು.ಬಹುಪತ್ನಿತ್ವಕ್ಕೆ ಬಲಿಯಾಗುವಿರಿ, ದ್ವಿಚಕ್ರ ವಾಹನ ಚಾಲಕರಿಗೆ ಎಚ್ಚರಿಕೆ.

ಮೀನರಾಶಿ
ದಾಪಂತ್ಯ ಸಂಶಯಗಳಿಂದ ನಿದ್ರಾಭಂಗ, ಸ್ನೇಹಿತರಿಂದ ಮೋಸ ಮತ್ತು ನಷ್ಟ, ಮಕ್ಕಳು ದೂರವಾಗುವರು. ಆತ್ಮಸ್ಥೈರ್ಯದಿಂದ ಪ್ರಯತ್ನಬಲದಿಂದ ಮುನ್ನಡೆಯಿರಿ. ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಬರಲಿವೆ. ಯೋಗ್ಯ ವಯಸ್ಕರು ಪ್ರಯತ್ನಬಲಕ್ಕೆ ಒತ್ತು ನೀಡಿದ್ದಲ್ಲಿ ಕಂಕಣಬಲವು ನಿಶ್ಚಿತ

Leave A Reply

Your email address will not be published.