ಶಿವಮೊಗ್ಗ : KS Eshwarappa : ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗುಡುಗಿದ್ದಾರೆ. ರಾಜ್ಯ ಸರ್ಕಾರವನ್ನು ಸಿದ್ದರಾಮಯ್ಯ ಸಮರ್ಥವಾಗಿ ಟೀಕೆ ಮಾಡ್ತಿದ್ದಾರೆ ಅಂತಾ ರಾಜ್ಯದ ಜನತೆಗೆ ಎನಿಸುತ್ತಿಲ್ಲ. ಗಂಟಲಿನಿಂದ ಜೋರಾಗಿ ವಾಗ್ದಾಳಿ ನಡೆಸಿದಾಕ್ಷಣ ಅದನ್ನು ಜನರು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಂಚೆಯಿಂದಲೂ ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಬಿಚ್ಚಿಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಇಲ್ಲಿಯವರೆಗೆ ಒಂದೇ ಒಂದು ದಾಖಲೆಯನ್ನು ಕೊಟ್ಟಿಲ್ಲ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಯಾವೊಬ್ಬ ಕಾಂಗ್ರೆಸ್ಸಿಗರು ಈ ಕೆಲಸ ಮಾಡಿಲ್ಲ. 40 ಪರ್ಸೆಂಟ್ ಸರ್ಕಾರ ಎಂದು ಕೆಂಪಣ್ಣ ಆರೋಪ ಮಾಡಿದ್ದರು. ಒಂದು ಇಲಾಖೆ, ಒಂದು ಮಂತ್ರಿಯ ಬಗ್ಗೆ ಒಂದೇ ಒಂದು ದಾಖಲೆಯನ್ನು ಸಹ ಕೊಡಲಿಲ್ಲ. ಸುಮ್ಮನೇ ಬೊಂಬಡ ಹೊಡೆದರೆ ಅದಕ್ಕೆ ಯಾವುದೇ ಅರ್ಥ ಇರೋದಿಲ್ಲ. ಕೆಂಪಣ್ಣ ಕಾಂಗ್ರೆಸ್ನ ಏಜೆಂಟ್ ಎಂಬ ಭಾವನೆ ರಾಜ್ಯದ ಜನತೆಗೆ ಮೂಡಿದೆ ಎಂದು ಈಶ್ವರಪ್ಪ ಗುಡುಗಿದ್ದಾರೆ.
ಇನ್ನು ಸದನಕ್ಕೆ ಈಶ್ವರಪ್ಪ ಗೈರಾಗಿರುವ ವಿಚಾರವಾಗಿಯೂ ಇದೇ ವೇಳೆ ಸ್ಪಷ್ಟನೆ ನೀಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ನನಗೆ ಕಾಲು ನೋವಿನಿಂದಾಗಿ ಅಧಿವೇಶನಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಷಟಲ್ ಆಡುತ್ತಿದ್ದ ಸಂದರ್ಭದಲ್ಲಿ ಕಾಲಿಗೆ ಸ್ವಲ್ಪ ಗಾಯವಾಗಿದೆ. ನನಗೆ ಹೆಚ್ಚಾಗಿ ಓಡಾಡಲು ಆಗೋದಿಲ್ಲ. ಇದೊಂದೆ ಕಾರಣದಿಂದಾಗಿ ನಾನು ಸದನಕ್ಕೆ ಹೋಗಿಲ್ಲ ಅಷ್ಟೇ . ಅದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶ ಇದರ ಹಿಂದಿಲ್ಲ. ನೀವು ಹುಡುಕಿದರೂ ಸಿಗೋದಿಲ್ಲ ಎಂದು ಹೇಳಿದರು.
ಬೋಟ್ನಲ್ಲಿ ಸಿದ್ದರಾಮಯ್ಯ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಣೆ ಮಾಡಿದ ವಿಚಾರವಾಗಿಯೂ ಮಾತನಾಡಿದ ಅವರು, ಸಿದ್ದರಾಮಯ್ಯ ಬೋಟ್ನಲ್ಲಿ ಹೋಗಿದ್ದನ್ನು ನಾನೂ ನೋಡಿದೆ. ಅಲ್ಲಿ ಎಷ್ಟು ಅಡಿ ನೀರಿತ್ತು..? ಒಂದೂವರೆ ಅಡಿ ನೀರಿತ್ತು. ಆ ನೀರಲ್ಲಿ ನನ್ನ ಮೊಮ್ಮಗ ನಡೆದುಕೊಂಡು ಹೋಗಿ ಬಿಡ್ತಾನೆ. ವಿಪಕ್ಷ ನಾಯಕನಾಗಿ ನಾನು ನೆರೆ ವೀಕ್ಷಣೆ ಮಾಡಿದೆ ಎಂಬುದನ್ನು ತೋರಿಸಲು ಈ ನಾಟಕ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನು ಓದಿ : Virat Kohli Instagram Post : “ಯಾರ ಭಾವನೆಗಳನ್ನೂ ನೋಯಿಸದಿರಿ..” ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂ ಪೋಸ್ಟ್ನ ಅರ್ಥ ಏನು ?
ಇದನ್ನೂ ಓದಿ : TV artist Mandya Ravi :ಕಿರುತೆರೆ ಕಲಾವಿದ ಮಂಡ್ಯ ರವಿ ಸಾವು ವದಂತಿ ಬಗ್ಗೆ ತಂದೆಯಿಂದ ಸ್ಪಷ್ಟನೆ
Former minister KS Eshwarappa outraged against Siddaramaiah
Comments are closed.