Saligrama: ಗಿರಿ ಫ್ರೆಂಡ್ಸ್(ರಿ ) ಚಿತ್ರಪಾಡಿ – ಸಾಲಿಗ್ರಾಮ: “ಮನೆಗೊಂದು ಮಕ್ಕಳ ಹೆಸರಲ್ಲಿ ಗಿಡ ನೆಡುವ “ವಿನೂತನ ಕಾರ್ಯಕ್ರಮ
ಗಿರಿ ಫ್ರೆಂಡ್ಸ್(ರಿ ) (giri friends) ಚಿತ್ರಪಾಡಿ – ಸಾಲಿಗ್ರಾಮ (Saligrama) ಇವರ ನೇತೃತ್ವದಲ್ಲಿ “ಮನೆಗೊಂದು ಮಕ್ಕಳ ಹೆಸರಲ್ಲಿ ಗಿಡ ನೆಡುವ “ವಿನೂತನ ಕಾರ್ಯಕ್ರಮದ ಆಯೋಜನೆ ಮಾಡಲಾಯಿತು. ಈ ಕಾರ್ಯಕ್ರಮದ ಪ್ರಯುಕ್ತ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯರು, ಸರ್ವ ಸದಸ್ಯರು ಸಾಲಿಗ್ರಾಮ (saligrama) ಚಿತ್ರಪಾಡಿ (Chitrapadi) ಗ್ರಾಮದ ಪ್ರತಿಯೊಂದು ಮನೆಗೂ ತೆರಳಿ ಗಿಡವನ್ನು ನೀಡಿ, ಪರಿಸರ ಸಂರಕ್ಷಣೆಯ ಕುರಿತು, ಗಿಡ ಮರವೇ ಭೂಮಿ ಯ ಮೇಲಿನ ಸ್ವರ್ಗ, ಗಿಡ ಮರದ ಜೊತೆಗೆ ಇರುವ ಅವಿನಾಭಾವ ಸಂಬಂಧ ಮುಂದುವರಿಯುವ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾಗಿರುವ ದಿನೇಶ ಆಚಾರ್, ಕಾರ್ಯದರ್ಶಿ ರಾಜೇಶ್ ಪೂಜಾರಿ, ಗೌರವಾಧ್ಯಕ್ಷರಾದ ರವಿ ಪೂಜಾರಿ, ಸಂಚಾಲಕರಾದ ಸತ್ಯನಾರಾಯಣ, ನಾಗೇಂದ್ರ ಆಚಾರ್, (Nagendra Achar) ವಿಶ್ವನಾಥ ನಾವುಡ, ರಾಘವೇಂದ್ರ ಆಚಾರ್ ಜಡ್ಡಿನ ಮನೆ ,ಕಡಾವು ಗಜೇಂದ್ರಾಚಾರ್, ಮಂಜುನಾಥ ಆಚಾರ್ , ರಾಮ ನಾಯರಿ, ದಿನಕರ, ಉದಯ್, ರಮೇಶ್, ರಾಘವೇಂದ್ರ, ಪ್ರಕಾಶ್, ಅಕ್ಷಯ್, ನಿಶಾಂತ್, ಆಮೋದ, ಲಕ್ಷ್ಮೀಶ, ಚಿರಾಗ್, ಸುರೇಶ ಅಮರ್ , ಕೃಷ್ಣ ಸುನೀಲ್ ಕುಂದರ್, ಸುಭ್ರಮಣ್ಯ, ರಘುರಾಮ್ ಮತ್ತು ಸರ್ವ ಸದಸ್ಯರ ಸಹಕಾರದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮ ಕ್ಕೆ ನೀಲಾವರ ಫಾರೆಸ್ಟ್ ರಾಗಿರುವ ಶ್ರೀ ಸತೀಶ್ ಶೆಟ್ಟಿ, ರಕ್ತ ಚಂದನ, ಮತ್ತು ಹರೀಶ್ ಫಾರೆಸ್ಟರ್ ಬ್ರಹ್ಮಾವರ (Brahmavar) ಇವರು ಸಂಸ್ಥೆಗೆ ಗಿಡ ವನ್ನು ನೀಡಿ ಸಹಕಾರ ನೀಡಿದರು.
ಇದನ್ನು ಓದಿ :deep sea fishing : ಮೀನುಗಾರರಿಗೆ ಮತ್ತೆ ಆಘಾತ : ಆಳ ಸಮುದ್ರ ಮೀನುಗಾರಿಕೆಗೆ ಆಗಸ್ಟ್ 11ರವರೆಗೆ ನಿರ್ಬಂಧ
Comments are closed.