Shivamogga riot case: ಶಿವಮೊಗ್ಗ ಗಲಾಟೆ ಪ್ರಕರಣ : ಚಾಕು ಇರಿತಕ್ಕೊಳಗಾದ ಪ್ರೇಮ್​ ಸಿಂಗ್​ ಸ್ಥಿತಿ ಗಂಭೀರ

ಶಿವಮೊಗ್ಗ : Shivamogga riot case: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನಿವಾಸಿ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಶಿವಮೊಗ್ಗ ನಗರವು ರಣಾರಂಗವಾಗಿ ಬದಲಾಗಿದೆ. ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಇರಬೇಕಿದ್ದ ಮಲೆನಾಡ ಹೆಬ್ಬಾಗಿಲು ಇಬ್ಬರು ಯುವಕರಿಗೆ ಚಾಕು ಇರಿತದ ಪ್ರಕರಣದ ಬಳಿಕ ಕಾದ ಕೆಂಡವಾಗಿದೆ. ವೀರ ಸಾರ್ವಕರ್​ ಫೋಟೋ ವಿಚಾರವಾಗಿ ನಡೆದ ಗಲಾಟೆಯಿಂದಾಗಿ ಶಿವಮೊಗ್ಗ ನಗರವೀಗ ಬಿಕೋ ಎನ್ನುತ್ತಿದೆ.


ವೀರ ಸಾವರ್ಕರ್​ ಫೋಟೋವನ್ನು ತೆರವುಗೊಳಿಸಿ ಟಿಪ್ಪು ಸುಲ್ತಾನನ ಫೋಟೋವನ್ನು ಅಳವಡಿಸಲು ಮುಂದಾದ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ಮುಸ್ಲಿಂ ಸಂಘಟನೆಗಳ ನಡುವೆ ಉಂಟಾದ ವಾಗ್ವಾದವು ವಿಕೋಪಕ್ಕೆ ತಿರುಗಿದ ಬೆನ್ನಲ್ಲೇ ಶಿವಮೊಗ್ಗದ ಅಶೋಕ್​ ನಗರ ಬಡಾವಣೆಯಲ್ಲಿ ಪ್ರವೀಣ್​ ಕುಮಾರ್​ ಹಾಗೂ ಗಾಂಧಿ ಬಜಾರ್​ನಲ್ಲಿ ಪ್ರೇಮ್​ ಸಿಂಗ್​ ಎಂಬವರ ಮೇಲೆ ಚಾಕು ಇರಿತವಾಗಿದ್ದು ಇಬ್ಬರನ್ನೂ ಮೆಗ್ಗಾನ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಪ್ರೇಮ್​ ಸಿಂಗ್​ ಎಂಬವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಶಿವಮೊಗ್ಗದಲ್ಲಿ ಚಾಕು ಇರಿತಕ್ಕೆ ಒಳಗಾದ ಪ್ರೇಮ್​ ಸಿಂಗ್​ ಗಾಂಧಿ ಬಜಾರ್​ನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗಿದೆ. ಶಿವಮೊಗ್ಗದಲ್ಲಿ ಈ ರೀತಿ ಧರ್ಮ ಸಂಘರ್ಷ ಆರಂಭಗೊಂಡಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಪ್ರೇಮ್​ ಸಿಂಗ್​ ಅಂಗಡಿಯ ಬಾಗಿಲನ್ನು ಮುಚ್ಚಿ ಮನೆ ಕಡೆಗೆ ತೆರಳಲು ಮುಂದಾಗಿದ್ದರಂತೆ. ಆದರೆ ಈ ವೇಳೆಗೆ ಸರಿಯಾಗಿ ಅಂಗಡಿ ಬಳಿಗೆ ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಬಂದ ದುಷ್ಕರ್ಮಿಗಳು ಪ್ರೇಮ್​ ಸಿಂಗ್​ಗೆ ಚಾಕುವಿನಿಂದ ಇರಿದು ಎಸ್ಕೇಪ್​ ಆಗಿದ್ದಾರೆ.

ರಕ್ತದ ಮಡುವಿನಲ್ಲಿದ್ದ ಪ್ರೇಮ್​ ಸಿಂಗ್​​ರನ್ನು ಕೂಡಲೇ ಮೆಗ್ಗಾನ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರೇಮ್​ ಸಿಂಗ್​ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.


ವೀರ ಸಾವರ್ಕರ್​​ ಗಲಾಟೆ ವಿಚಾರವಾಗಿ ನಡೆದ ಗಲಭೆಯಿಂದಾಗಿ ಶಿವಮೊಗ್ಗ ನಗರದಲ್ಲಿ ಸೆಕ್ಷನ್​ 144 ಜಾರಿಯಾಗಿದ್ದು ಶಿವಮೊಗ್ಗ ನಗರ ಸಂಪೂರ್ಣ ಸ್ತಬ್ಧವಾಗಿದೆ. ಶಿವಮೊಗ್ಗದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್​ ಆಗಿದ್ದು ಶಿವಮೊಗ್ಗ ನಗರ ಬಿಕೋ ಎನ್ನುತ್ತಿದೆ. ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದ ಅಂಗಡಿಗಳನ್ನು ಖುದ್ದು ಪೊಲೀಸರೇ ಬಂದ್​ ಮಾಡಿಸಿದ್ದಾರೆ. ನಗರದ ಎಲ್ಲಾ ಕಡೆಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್​ ಕೈಗೊಂಡಿದ್ದು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ.

ಇದನ್ನು ಓದಿ : araga jnanendra jeep accident : ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಾವಲು ವಾಹನ ಅಪಘಾತ

ಇದನ್ನೂ ಓದಿ : Shivamogga riot case: ಶಿವಮೊಗ್ಗದಲ್ಲಿ ಸಾವರ್ಕರ್​ ಫೋಟೋ ವಿವಾದ : ರಾಜ್ಯ ಸರ್ಕಾರಕ್ಕೆ ನನ್ನ ಧಿಕ್ಕಾರ ಎಂದ ಪ್ರಮೋದ್​ ಮುತಾಲಿಕ್​​

Shivamogga riot case: Prem Singh, who was stabbed with a knife, is in critical condition

Comments are closed.