ಮಂಗಳವಾರ, ಏಪ್ರಿಲ್ 29, 2025
Homedistrict Newsಎಗ್ಗಿಲ್ಲದ ಕಾಮಗಾರಿಯಿಂದ ಗುಡ್ಡ ಕುಸಿತದ ಅಪಾಯದಲ್ಲಿ ತಲಕಾವೇರಿ- ಭಾಗಮಂಡಲ?

ಎಗ್ಗಿಲ್ಲದ ಕಾಮಗಾರಿಯಿಂದ ಗುಡ್ಡ ಕುಸಿತದ ಅಪಾಯದಲ್ಲಿ ತಲಕಾವೇರಿ- ಭಾಗಮಂಡಲ?

- Advertisement -

ಡಿಕೇರಿ : ಕಳೆದ ಮೂರು ವರ್ಷಗಳಿಂದಲೂ ವರುಣನ ಅವಕೃಪೆಗೆ ಪಾತ್ರವಾಗುತ್ತಿರುವ ಕೊಡಗು ಜಿಲ್ಲೆಯಲ್ಲೀಗ ಮತ್ತೊಂದು ಆತಂಕ ಎದುರಾಗಿದೆ. ತಲಕಾವೇರಿ – ಭಾಗಮಂಡಲ ಪ್ರದೇಶದಲ್ಲಿನ ಗುಡ್ಡಗಳನ್ನು ಕಡಿದು ಕಾಮಗಾರಿ ನಡೆಯುತ್ತಿರುವುದರಿಂದಾಗಿ ಜನರು ಭೂ ಕುಸಿತವಾಗುವ ಭೀತಿಯಲ್ಲಿದ್ದು, ತಲಕಾವೇರಿ ಹಾಗೂ ಭಾಗ ಮಂಡಲ ಅಪಾಯಕ್ಕೆ ಸಿಲುಕಿದೆ.

ಭಾಗಮಂಡಲ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿವೆ. ತಲಕಾವೇರಿ ಸಂರಕ್ಷಿತ ಅರಣ್ಯ ಪ್ರದೇಶದ ಒಳಗಡೆ ಇದು ಬರುತ್ತದೆ. ಈ ಎರಡೂ ಪ್ರದೇಶಗಳಲ್ಲಿ ಯಾವುದೇ ಕಾಮಗಾರಿಯನ್ನು ನಡೆಸುವುದಕ್ಕೆ ನಿಷೇಧವಿದೆ. ಆದರೆ ಕಾನೂನನ್ನು ಮೀರಿ ಈ ಪ್ರದೇಶಗಳಲ್ಲಿ ಕಾನೂನನ್ನೂ ಮೀರಿ ಎಗ್ಗಿಲ್ಲದೇ ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ. ಅದ್ರಲ್ಲೂ ಆದೇಶಗಳನ್ನೇ ಉಲ್ಲಂಘಿಸಿ ನೀತಿ ನಿಯಮಗಳನ್ನು ಮೀರಿ ಅಕ್ರಮ ಕಾಮಗಾರಿಗಳು ಹಂತ ಹಂತದಲ್ಲಿ ನಡೆದಿದೆ. ಕಟ್ಟಡ ಕಾಮಗಾರಿಗಳ ನಿರ್ಮಾಣಕ್ಕಾಗಿ ನೈಸರ್ಗಿಕ ಗುಡ್ಡಗಳನ್ನು ಕೊರೆಯಲಾಗಿದ್ದು ಬೃಹತ್ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಭಾಗಮಂಡಲ- ತಲಕಾವೇರಿ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ 50ಕ್ಕೂ ಅಧಿಕ ಕಟ್ಟಡಗಳು ತಲೆಯೆತ್ತಿವೆ. ಬಹುತೇಕ ಅಕ್ರಮ ಹಾಗೂ ಕಾನೂನು ಬಾಹಿರ. ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಈ ಪ್ರದೇಶಗಳು ಸೂಕ್ಷ್ಮ ಪ್ರದೇಶಗಳು. ಕೊಡಗಿನಲ್ಲಿ 2018 ಹಾಗೂ 19ರಲ್ಲಿ ನಡೆದ ಘಟನೆಗಳು ನಮ್ಮ ಕಣ್ಣ ಮುಂದಿವೆ. ಕೊಡಗಿನ ಸುತ್ತಮುತ್ತಲೇ ಗುಡ್ಡಗಳು ಜರಿದು ಬಿದ್ದಿವೆ. ಈಗ ಈ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ನೋಡಿದಾಗ ಗುಡ್ಡಗಳು ಜರಿದು ಬೀಳುವ ಪ್ರಸಂಗಗಳು ಅತಿಯಾಗಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.
ಸಂರಕ್ಷಿತ ಪ್ರದೇಶಗಳಲ್ಲಿ ಅಕ್ರಮವಾಗಿ ಕಟ್ಟಡಗಳ ನಿರ್ಮಾಣವೇ ಇಂದು ಕೊಡಗಿಗೆ ಅಪಾಯವನ್ನು ತಂದೊಡ್ಡಿದೆ.

ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿರುವುದನ್ನು ನೋಡಿದ್ರೆ ತಲಕಾವೇರಿ- ಭಾಗಮಂಡಲ ಪ್ರದೇಶ ಅಪಾಯಕ್ಕೆ ಸಿಲುಕುವುದು ಗ್ಯಾರಂಟಿ. ಇನ್ನಾದರೂ ಸರಕಾರ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ನಿಶ್ಚಿತ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular