‘ವೈಲ್ಡ್ ಕರ್ನಾಟಕಕ್ಕೆ ‘ಹಿನ್ನಲೆ ಧ್ವನಿ ನೀಡಿದ್ದಾರೆ ಈ ಸ್ಟಾರ್ ನಟರು

0

ಬೆಂಗಳೂರು : ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗುವ ವೈಲ್ಡ್ ಕರ್ನಾಟಕ ಕಾರ್ಯಕ್ರಮ ಅನ್ನೋ ವಿಭಿನ್ನ ಕಾರ್ಯಕ್ರಮ ಪ್ರಸಾರವಾಗಲಿದ್ದು, ಕಾರ್ಯಕ್ರಮಕ್ಕೆ ಸ್ಟಾರ್ ನಟರು ಧ್ವನಿಯಾಗಲಿದ್ದಾರೆ.

ವನ್ಯ ಜೀವಿಗಳ ರಕ್ಷಣೆ ಜಾಗೃತಿ ಮೂಡಿಸುವ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರದ ಮೂಲಕ ರಾಜ್ಯ ಪ್ರಾಣಿ ಸಂರಕ್ಷಣೆ, ನಾಡಿನಲ್ಲಿರುವ ಅಪರೂಪದ ವನ್ಯ ಜೀವಿಗಳ ಕಥೆ ಇದಾಗಿದೆ. ಈ ಕಾರ್ಯಕ್ರಮ ಜೂನ್ 5 ರಂದು ರಾತ್ರಿ 8 ಗಂಟೆಗೆ ಡಿಸ್ಕವರಿ ಚಾನಲ್ ನಲ್ಲಿ ಪ್ರಸಾರವಾಗಲಿದ್ದು, ಕನ್ನಡ ಭಾಷೆಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕ, ನಟ ವೃಷಭ್ ಶೆಟ್ಟಿ ಹಿನ್ನೆಲೆ ಧ್ವನಿ ನೀಡಿದ್ದಾರೆ.

ಕಿರಿಕ್ ಪಾರ್ಟಿ, ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ರಿಕ್ಕಿ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ವೃಷಭ್ ಶೆಟ್ಟಿ ಅವರು ಇದೀಗ ದಟ್ಟ ಕಾಡು, ಕಾಡುಪ್ರಾಣಿಗಳ ಕಥೆ ಹೇಳೊದಕ್ಕೆ ಹೊರಟಿದ್ದಾರೆ.

ಈಗಾಗಲೇ ಕಾರ್ಯಕ್ರಮದ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು, ವೃಷಭ್ ಶೆಟ್ಟಿ ಅವರ ಅಪರೂಪದ ಧ್ವನಿಯಲ್ಲಿ ಮೂಡಿಬಂದಿರುವ ಕಾರ್ಯಕ್ರಮದ ಪ್ರೋಮೋ ಸಾಕಷ್ಟು ಕುತೂಹಲ ಮೂಡಿಸಿದೆ.

https://www.instagram.com/p/CApTU2fgYxZ/

ಖ್ಯಾತ ನಿರೂಪಕ ಸರ್ ಡೆವಿಡ್ ಎಥೆನ್ ಬರ್ಗ್ ಆಂಗ್ಲ ಭಾಷೆಯಲ್ಲಿ ನಡೆಸಿ ಕೊಡುವ ಕಾರ್ಯಕ್ರಮವನ್ನು ತಮಿಳು ಹಾಗು ತೆಲುಗು ಭಾಷೆಯಲ್ಲಿ ನಟ ಪ್ರಕಾಶ್ ರಾಜ್ ಅವರ ನಡೆಸಿಕೊಡಲಿದ್ದಾರೆ.

https://www.instagram.com/p/CApX_EZALZI/

ಅಲ್ಲದೇ ಹಿಂದಿ ಭಾಷೆಯಲ್ಲಿಯೂ ಕಾರ್ಯಕ್ರಮ ಪ್ರಸಾರವಾಗಲಿದ್ದು, ರಾಜಕುಮಾರ್ ರಾವ್ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

https://www.instagram.com/p/CApUvaWANtS/
Leave A Reply

Your email address will not be published.