ಚಿಕ್ಕಮಗಳೂರು : ಜನರು ಕೊರೊನಾ ಟೆನ್ಶನಲ್ಲಿದ್ದಾರೆ. ಆದರೆ ಚಿಕ್ಕಮಗಳೂರಿಗರು ಮಾತ್ರ ಅರೆ ಕ್ಷಣ ಕೊರೊನಾವನ್ನೇ ಮರೆತಿದ್ರು. ಯಾಕೆಂದ್ರೆ ರಸ್ತೆಯಲ್ಲಿ ಮದ್ಯ ತುಂಬಿದ ಲಾರಿ ಮಗುಚಿಬಿದ್ದಿದ್ದು, ಜನರು ಹೊತ್ತೊಯ್ದಿದ್ದಾರೆ.
ಚಿಕ್ಕಮಗಳೂರಿನ ತರೀಕೆರೆಯ ಎಂ.ಸಿ.ಹಳ್ಳಿ ಬಳಿ ಬೆಂಗಳೂರಿಂದ ಶಿವಮೊಗ್ಗಕ್ಕೆ ಮದ್ಯ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿಯಲ್ಲಿದ್ದ ಮದ್ಯದ ಬಾಟಲಿ ಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದೆ. ಅಪಘಾತ ನಡೆದ ಕೆಲವೇ ಕ್ಷಣಗಳಲ್ಲಿ ಸೇರಿದ ಜನ ಕೊರೋನಾ ಅನ್ನುವ ಮಹಾಮಾರಿ ಇದೆ ಅನ್ನುವುದನ್ನು ಮರೆತು ಲಾರಿಯೇರಿ ಮದ್ಯದ ಬಾಟಿ ತೆಗೆದು ಕೊಂಡು ಹೋಗಿದ್ದಾರೆ.
ಇನ್ನು ಅಪಘಾತದ ಸುದ್ದಿ ಕೇಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ರೆ ಬೆಂಗಳೂರಿನಿಂದ ತುಂಬಿಸಿಕೊಂಡು ಬಂದಿದ್ದ ಮದ್ಯದ ಪೈಕಿ ಅರ್ಧ ಪಾಲು ಎಂ.ಸಿ. ಹಳ್ಳಿ ಮನೆ ಸೇರಿಕೊಂಡಿತ್ತು. ಕೊನೆಗೆ ಲಘುವಾಗಿ ಲಾಠಿ ಬೀಸಿದ ಪೊಲೀಸರು ಜನರನ್ನು ಚದುರಿಸಿದ್ದಾರೆ.