newlywed bride :ಆರತಕ್ಷತೆ ಕಾರ್ಯಕ್ರಮದಲ್ಲಿ ಬಿಗ್​ ಟ್ವಿಸ್ಟ್​ : ವಧು ಅವಳಲ್ಲ ಅವನು ಎಂದು ತಿಳಿದು ಶಾಕ್ ​

newlywed bride : ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಬಹುಮುಖ್ಯ ಕ್ಷಣ. ಅದರಲ್ಲೂ ಪ್ರೀತಿಸಿ ಮದುವೆಯಾಗುವವರಂತೂ ಸಾಕಷ್ಟು ದಿನಗಳಿಂದ ಈ ಮಹತ್ವದ ದಿನಕ್ಕಾಗಿ ಕನಸು ಕಾಣುತ್ತಿರ್ತಾರೆ.ಜೊತೆಯಾಗಿ ಭವಿಷ್ಯದ ಕನಸು ಕಾಣುವುದು ಪ್ರೇಮಿಗಳ ಕೆಲಸ. ಆದರೆ ಓಡಿಶಾದಲ್ಲಿ ತಾನು ಪ್ರೀತಿಸಿದ ಯುವತಿ ಅಸಲಿಗೆ ಯುವಕ ಎಂದು ತಿಳಿದು ಶಾಕ್​ ಆಗಿದ್ದಾನೆ. ಆದರೆ ಈ ವಿಚಾರ ಗೊತ್ತಾಗುವಷ್ಟರಲ್ಲಿ ಈ ಜೋಡಿಯ ಮದುವೆಯೇ ಮುಗಿದು ಹೋಗಿತ್ತು.

ಓಡಿಶಾದ (odisha) ಭದ್ರಕ್​ ಜಿಲ್ಲೆಯ ಬಸುದೇವಪುರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಾಸಿಯಾ ಎಂಬ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ಸಂಭವಿಸಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಅಲೋಕ್​ ಕುಮಾರ್​ ಮಿಸ್ತ್ರಿ ಎಂಬಾತ ಫೇಸ್​ಬುಕ್​ನಲ್ಲಿ ಕೇಂದ್ರಪಾಡ ಜಿಲ್ಲೆಯ ಜಂಬೂ ಮೆರೈನ್​ ಪೊಲೀಸ್​ ಠಾಣಾ ವ್ಯಾಪ್ತಿಯ ರಾಮನಗರ ಗ್ರಾಮದ ಬಿಸ್ವನಾಥ್​​ ಮಂಡಲ್​ ಪುತ್ರಿ ಮೇಘನಾ ಮಂಡಲ್​ ಜೊತೆ ಸ್ನೇಹ ಬೆಳಸಿದ್ದ. ಕೇವಲ 15 ದಿನಗಳಲ್ಲಿ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ.

ಮೇ 24ರಂದು ಮೇಘನಾಳನ್ನು ಭೇಟಿಯಾಗಲು ಜಾಜ್​ಪುರ ಜಿಲ್ಲೆಯ ಚಂಡಿಖೋಲ್​ಗೆ ಬಂದಿದ್ದ ಅಲೋಕ್​ ಕುಮಾರ್​ ಆಕೆಯನ್ನು ಬಸುದೇವಪುರದಲ್ಲಿರುವ ತನ್ನ ತಾಯಿಯ ಚಿಕ್ಕಪ್ಪನ ಮನೆಗೆ ಕರೆದುಕೊಂಡು ಹೋಗಿದ್ದ. ಇಲ್ಲಿ ಇವರಿಬ್ಬರಿಗೂ ಮದುವೆಯನ್ನು ಮಾಡಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಆದರೆ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯಲ್ಲಿ ವಧುವಿನ ಪರಿಚಯಸ್ಥರೊಬ್ಬರು ಆಕೆಯನ್ನು ಮೇಘನಾದ್​ ಎಂದು ಕರೆದಿದ್ದಾರೆ. ಇದರಿಂದ ಗೊಂದಲಕ್ಕೊಳಗಾದ ಅಲೋಕ್​​ ಹಾಗೂ ಆತನ ಕುಟುಂಬಸ್ಥರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಬಳಿಕ ವಧು ಸಾಕಷ್ಟು ಸ್ಪಷ್ಟನೆ ನೀಡಿದರೂ ಸಹ ಅನುಮಾನಗೊಂಡ ಅಲೋಕ್​ ಹಾಗೂ ಆತನ ಕುಟುಂಬಸ್ಥರು ಮಹಿಳೆಯನ್ನು ವಿವಸ್ತ್ರಗೊಳಿಸಿ ನೋಡಿದಾಗ ಇದು ಅವಳಲ್ಲ, ಅವನು ಎಂದು ತಿಳಿದಿದೆ. ಇದರಿಂದ ಕೋಪಗೊಂಡ ಅಲೋಕ್​ ಸಂಬಂಧಿಗಳು ಮೇಘನಾದ್​ನ ಉದ್ದನೆಯ ಕೂದಲನ್ನು ಕತ್ತರಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿಯನ್ನೂ ನೀಡಿದ್ದಾರೆ. ಪೊಲೀಸರು ಮೇಘನಾದ್​ನನ್ನು ರಕ್ಷಿಸಿ ಕುಟುಂಬಸ್ಥರ ಕೈಗೆ ಒಪ್ಪಿಸಿದ್ದಾರೆ.

ಇದನ್ನು ಓದಿ : Sruthi Hariharan : ಸಾಲು ಸಾಲು ಸಿನಿಮಾದಲ್ಲಿ ಶ್ರುತಿ ಹರಿಹರನ್ : ಲೂಸಿಯಾ ಚೆಲುವೆಯ ಗ್ರ್ಯಾಂಡ್ ಕಮ್ ಬ್ಯಾಕ್

ಇದನ್ನೂ ಓದಿ : IPL 2022 Eliminator : RCB vs LSG ಪಂದ್ಯ : ಇಲ್ಲಿದೆ ಪ್ರಬಲ ಪ್ಲೇಯಿಂಗ್‌ XI

newlywed bride turns out to be man in odisha

Comments are closed.