Hyderabad :ಟ್ರಾಫಿಕ್​​ ಪೊಲೀಸರು ದಂಡ ವಿಧಿಸಿದ್ದಕ್ಕೆ ಬೈಕ್​​ನ್ನೇ ಸುಟ್ಟ ವಾಹನ ಸವಾರ: ವಿಡಿಯೋ ವೈರಲ್​

ಹೈದರಾಬಾದ್​ :Hyderabad : ಸಂಚಾರ ಉಲ್ಲಂಘನೆ ಮಾಡಿದರೆ ಸಂಚಾರಿ ಠಾಣೆ ಪೊಲೀಸರು ದಂಡ ವಿಧಿಸೋದು ಕಾಮನ್​. ಹೀಗಾಗಿ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಟ್ರಾಫಿಕ್​ ರೂಲ್ಸ್​ ಪಾಲನೆ ಮಾಡುವುದು ತುಂಬಾನೇ ಅವಶ್ಯಕವಾಗಿದೆ. ಆದರೆ ಹೈದರಾಬಾದ್​ನ ಅಮೀರ್​ಪೇಟ್​ ಮೆಟ್ರೋ ನಿಲ್ದಾಣದ ಬಳಿಯಲ್ಲಿ ಸಂಚಾರ ಉಲ್ಲಂಘನೆ ಮಾಡಿದ ಕಾರಣಕ್ಕೆ ಬೈಕ್​ ಸವಾರನಿಗೆ ಪೊಲೀಸರು ದಂಡ ವಿಧಿಸಿದ ಪರಿಣಾಮ ಕೋಪಗೊಂಡ 45 ವರ್ಷದ ಬೈಕ್​ ಸವಾರ ತನ್ನ ಬೈಕ್​ನ್ನೇ ಸುಟ್ಟು ಹಾಕಿದಂತಹ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ. ಬೈಕ್​ ಸವಾರ ತನ್ನ ಬೈಕ್​ಗೆ ಬೆಂಕಿ ಹಚ್ಚುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಬೈಕ್​ ಸಬಾರ ನಡುರಸ್ತೆಯಲ್ಲಿ ತನ್ನ ಬೈಕ್​ಗೆ ಬೆಂಕಿ ಹಚ್ಚಿದ ಪರಿಣಾಮ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಬೈಕ್​ಗೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಟ್ರಾಫಿಕ್​ ಪೊಲೀಸರು ಯತ್ನಿಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ವನ್​ ವೇ ರೋಡಿನಲ್ಲಿ ತಪ್ಪಾಗಿ ಬೈಕ್​ ಓಡಿಸುತ್ತಿದ್ದ ಕಾರಣಕ್ಕೆ ಟ್ರಾಫಿಕ್​ ಪೊಲೀಸರು 45 ವರ್ಷದ ವ್ಯಕ್ತಿಗೆ ದಂಡ ವಿಧಿಸಿದ್ದರು. ಈ ವಿಚಾರಕ್ಕಾಗಿ ಪೊಲೀಸರು ಹಾಗೂ ಬೈಕ್​ ಸವಾರನ ನಡುವೆ ಕೆಲ ಕಾಲ ಮಾತಿನ ಜಟಾಪಟಿ ಉಂಟಾಗಿತ್ತು.


ಟ್ರಾಫಿಕ್​ ಪೊಲೀಸರು ತನ್ನ ಬೈಕ್​ನ್ನು ಅಡ್ಡಗಟ್ಟಿ ದಂಡ ವಿಧಿಸಕ್ಕೆ ಕೋಪಗೊಂಡಿದ್ದ 45 ವರ್ಷದ ಬೈಕ್​ ಸವಾರ ನಡುರಸ್ತೆಯಲ್ಲಿಯೇ ಬೆಂಕಿ ಹಚ್ಚಿದ್ದಾನೆ. ಎಂದು ಹೈದರಾಬಾದ್​ನ ಸಂಚಾರ ವಿಭಾಗದ ಜಂಟಿ ಪೊಲೀಸ್​ ಕಮಿಷನರ್​​ ಎ.ವಿ ರಂಗನಾಥ್​ ಹೇಳಿದ್ದಾರೆ.

ಎಸ್.ಆರ್.ನಗರ ಸಂಚಾರ ಪೊಲೀಸ್ ಠಾಣೆಯ ಕರ್ತವ್ಯದಲ್ಲಿದ್ದ ಗೃಹರಕ್ಷಕ ಅಧಿಕಾರಿ ಎಸ್.ಅಶೋಕ್​ರ ಬೈಕ್​​​ ನ್ನು ತಡೆದಿದ್ದಾರೆ. ಪೊಲೀಸರ ಜೊತೆ ವಾದ ವಿವಾದ ನಡೆಸಿದ ಅಶೋಕ್​, ಕೂಡಲೇ ಮನೆ ಒಳಗೆ ಹೋಗಿ ಪೆಟ್ರೋಲ್​​ನ್ನು ತಂದಿದ್ದಾನೆ . ಕೂಡಲೇ ಪೆಟ್ರೋಲ್​ನ್ನು ಬೈಕ್​ಗೆ ಹಾಕಿ ಸುಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Mayank Agarwal to lead Karnataka : ಸೈಯದ್ ಮುಷ್ತಾಕ್ ಅಲಿ ಟಿ20 : ಮನೀಶ್ ಪಾಂಡೆ ಕೈ ತಪ್ಪಿದ ನಾಯಕತ್ವ, ಕರ್ನಾಟಕ ತಂಡಕ್ಕೆ ಮಯಾಂಕ್ ಕ್ಯಾಪ್ಟನ್

ಇದನ್ನೂ ಓದಿ : India flies to Australia for T20 World Cup: ಮಿಷನ್ ವರ್ಲ್ಡ್ ಕಪ್: ಆಸ್ಟ್ರೇಲಿಯಾಗೆ ಹಾರಿದ ಟೀಮ್ ಇಂಡಿಯಾದಲ್ಲಿ ಒಬ್ಬ ಆಟಗಾರ ಮಿಸ್ಸಿಂಗ್

Watch: Hyderabad Man Burns Bike After Fined by Traffic Police for Riding Dangerously

Comments are closed.