ಕೋವಿಡ್ ನಿಂದ ಮೃತಪಟ್ಟ ಶಿಕ್ಷಕ, ಉಪನ್ಯಾಸಕರ ವರದಿ ಕೊಡಿ : ಅಧಿಕಾರಿಗಳಿಗೆ ಸಚಿವ ಸುರೇಶ್ ಕುಮಾರ್ ಸೂಚನೆ

ಬೆಂಗಳೂರು:  ಉಪಚುನಾವಣೆ ಹಾಗೂ ಕೋವಿಡ್ ಕರ್ತವ್ಯದಲ್ಲಿ ನಿರತರಾಗಿದ್ದು, ಕೋವಿಡ್ ವೈರಸ್  ಸೋಂಕಿನಿಂದ ಮೃತಪಟ್ಟ ಶಿಕ್ಷಕರು‌ ಮತ್ತು ಉಪನ್ಯಾಸಕರ ವಿವರಗಳನ್ನು ಸಲ್ಲಿಸುವಂತೆ ಸಚಿವ ಸುರೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

2021ರ‌ ಎಪ್ರೀಲ್ ನಿಂದ ಇಲ್ಲಿಯವರೆಗೆ ಕೋವಿಡ್ ಕಾರಣದಿಂದ ಮೃತಪಟ್ಟ ಶಿಕ್ಷಕರು, ಉಪನ್ಯಾಸಕರ ಸಂಪೂರ್ಣ ವಿವರಗಳನ್ನು, ಸಾವಿಗೆ ಖಚಿತ ಕಾರಣ ಸಹಿತ ವರದಿಯನ್ನು ನೀಡುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಪದವಿಪೂರ್ವ ಶಿಕ್ಷಣ ನಿರ್ದೇಶಕ ರಿಗೆ ಸಚಿವರು ಸೂಚನೆಯನ್ನು ನೀಡಿದ್ದಾರೆ.

https://kannada.newsnext.live/vaishnavi-bigshock-after-comeout-bigboss-show/amp/

ಉಪಚುನಾವಣೆ ಹಾಗೂ ಕೋವಿಡ್ ಕರ್ತವ್ಯ ನಿರ್ವಹಿಸಿದ ಹಲವು ಶಿಕ್ಷಕರು ಹಾಗೂ ಪದವಿಪೂರ್ವ ಉಪನ್ಯಾಸಕರು ಕೋವಿಡ್ ಸೋಂಕಿ ನಿಂದ ಸಾವನ್ನಪ್ಪಿ ದ್ದಾರೆ ಎಂಬ ಕುರಿತು ವರದಿ ಬಿತ್ತರವಾದ ಬೆನ್ನಲ್ಲೇ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Comments are closed.