ಬಿಗ್ ಬಾಸ್ ನಿಂದ ಹೊರಬಂದ ವೈಷ್ಣವಿಗೆ ಕಾದಿತ್ತು ಸಪ್ರೈಸ್…! ಏನದು ? ಇಲ್ಲಿದೆ ಡಿಟೇಲ್ಸ್…!!

ಕನ್ನಡ ಬಿಗ್ ಬಾಸ್ ಸೀಸನ್ 8 ರಲ್ಲಿ ಗಮನ ಸೆಳೆದ ಇಬ್ಬರು ಸ್ಪರ್ಧಿಗಳ ಪೈಕಿ ಒಬ್ಬರು ಅಗ್ನಿ ಸಾಕ್ಷಿ ಸನ್ನಿಧಿ ಖ್ಯಾತಿಯ ವೈಷ್ಣವಿ. ತಮ್ಮ ರಿಯಾಲಿಟಿ ಗೆ ಹತ್ತಿರವಾದ ವರ್ತನೆಯಿಂದ ಮನಸೆಳೆದ ವೈಷ್ಣವಿಗೆ ಬಿಬಿಯಿಂದ ಹೊರಬರುತ್ತಿದ್ದಂತೆ ಸಪ್ರೈಸ್ ಎದುರಾಗಿದೆಯಂತೆ.

ಬಿಗ್ ಬಾಸ್ ಮನೆಯಲ್ಲಿದ್ದಾಗ ವೈಷ್ಣವಿ, ತಮಗೂ ಮದುವೆಯಾಗೋ ಆಸೆ ಇದೆ. ಮದುವೆ ಮತ್ತು ಪ್ರೀತಿಯೊಂದೇ ನಮ್ಮ ಭಾವನೆಗಳನ್ನು ಶೇರ್ ಮಾಡಿಕೊಳ್ಳಲು ಸೂಕ್ತವಾದ ಸಂಬಂಧ ಎಂದಿದ್ದರು.

ಅಷ್ಟೇ ಅಲ್ಲ‌ ನನ್ನ ಸ್ನೇಹಿತರಿಗೆಲ್ಲ ಬಾಯ್ ಪ್ರೆಂಡ್ ಗರ್ಲ್ ಪ್ರೆಂಡ್ ಇದ್ದಾರೆ. ನನಗೂ ಕಮಿಟ್ ಆಗಿರೋಕೆ ಇಷ್ಟ.ಆದರೆ ಯಾರು ಲವ್ವರ್ ಇಲ್ಲ ಎಂದಿದ್ದರು. ಈ ಎಲ್ಲ ಮಾತುಕತೆ ಫಲವಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದ ವೈಷ್ಣವಿಗೆ ಸಪ್ರೈಸ್ ಎದುರಾಗಿದೆ.

ಆಕೆಯ ಮೇಲ್ ಹಾಗೂ ಇನ್ ಸ್ಟಾಗ್ರಾಂ ಸೇರಿದಂತೆ ಎಲ್ಲೆಡೆ ಬರಿ ಮದುವೆ ಪ್ರಪೋಷಲ್ ಗಳೇ ತುಂಬಿಕೊಂಡಿದೆಯಂತೆ. ಅಷ್ಟೇ ಅಲ್ಲದೇ ವೈಷ್ಣವಿಗೂ ತಾನು ಮದುವೆ ಬಗ್ಗೆ ಎಷ್ಟು ಮಾತಾಡಿದೆ ಎಂಬುದು ಅರ್ಥವಾಗಿದೆಯಂತೆ.

ಎಲ್ಲ ಪ್ರಪೋಸಲ್ ನೋಡಿದ ವೈಷ್ಣವಿ ಸೂಕ್ತ ಕಾಲದಲ್ಲಿ ಮದುವೆ ಯಾಗುತ್ತೇನೆ ಮತ್ತು ಸರಿಯಾದ ಸಂದರ್ಭದಲ್ಲಿ ಹೆಚ್ಚಿನ ವಿವರ ನೀಡುವುದಾಗಿ ಹೇಳಿದ್ದಾರೆ.

ಸದ್ಯ ವೈಷ್ಣವಿ ಅಭಿನಯದ ಬಹುಕೃತ ವೇಷ ಸಿನಿಮಾದ ಒಂದು ಹಾಡಿನ ಶೂಟಿಂಗ್ ಬಾಕಿ ಉಳಿದಿದ್ದು, ಶೂಟಿಂಗ್ ಬಳಿಕ ಕೊರೋನಾ ಅಲೆ ಅಬ್ಬರದ ಬಳಿಕ ರಿಲೀಸ್ ಆಗಲಿದೆ.

Comments are closed.