ಧರ್ಮಸ್ಥಳದಲ್ಲಿ ಎಸ್‌ಐಟಿ ಉತ್ಕನನ : ಕೆಂಪು ರವಿಕೆ, ಎಟಿಎಂ ಕಾರ್ಡ್‌, ಬ್ಯಾಗ್‌ ಪತ್ತೆ..!

Dharmasthala Case Big Update : ಮಂಗಳೂರು: ಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳದಲ್ಲಿ ನಿನ್ನೆಯಿಂದ ಮೃತದೇಹಗಳ ಉತ್ಕನನ ಕಾರ್ಯ ಆರಂಭಿಸಿದ್ದಾರೆ.

ಈ ವೇಳೆ ಮಹತ್ವದ ವಸ್ತುಗಳು ಪತ್ತೆಯಾಗಿದೆ ಎಂದು ಬಿಎಲ್ಆರ್‌ ಪೋಸ್ಟ್‌ (Blrpost.com) ವರದಿ ಮಾಡಿದ್ದು, ಹಲವು ಅಂಶಗಳನ್ನು ಉಲ್ಲೇಖಿಸಿದೆ. ಎಸ್‌ಐಟಿ ಅಧಿಕಾರಿಗಳು ನಿನ್ನೆ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ ಇರುವ ಸ್ಥಳದಲ್ಲಿ ಉತ್ಕನನ ಕಾರ್ಯ ನಡೆಸಿದ್ದಾರೆ.

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ದೂರುದಾರ ತೋರಿಸಿದ ಮೊದಲ ಸ್ಥಳವನ್ನು ಅಗೆದಿದ್ದಾರೆ.

ಈ ಸ್ಥಳದಲ್ಲಿ ಹರಿದ ಕೆಂಪು ರವಿಕೆ, ಸ್ವಯಂಚಾಲಿತ ಟೆಲ್ಲರ್ ಮೆಷಿನ್ (ಎಟಿಎಂ) ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಗ್ ಮತ್ತು ಇತರ ವಸ್ತುಗಳನ್ನು ಪತ್ತೆ ಮಾಡಿದೆ ಎನ್ನಲಾಗುತ್ತಿದೆ.

ಈ ವಸ್ತುಗಳನ್ನು ತನಿಖೆಯ ಕಾರಣಕ್ಕೆ ಸಂರಕ್ಷಿಸಲಾಗಿದೆ. ಕಾರ್ಡಿನಲ್ಲಿ ಲಕ್ಷಿ ಎಂಬ ಹೆಸರು ಇದೆ. ಆರ್‌ಟಿಐ ದಾಖಲೆಗಳ ಪ್ರಕಾರ 2009ರಲ್ಲಿ ಧರ್ಮಸ್ಥಳದ ಗಂಗೋತ್ರಿ ಅತಿಥಿ ಗೃಹದಲ್ಲಿ ಲಕ್ಷ್ಮೀ ಎಂಬ ಹೆಸರಿನ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

dharmasthala-case-big-update-sit-finds-lady-atm-card-blouse-pan-bag-in-first-spot-kannada-news 1
ಆರ್‌ಟಿಇ ದಾಖಲೆ ಮಾಹಿತಿ ಚಿತ್ರಕೃಪೆ : ಬಿಎಲ್‌ಆರ್‌ ಪೋಸ್ಟ್‌

ಅದೇ ಮಹಿಳೆಯ ವಸ್ತುಗಳೇ ಎಂಬ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಬಿಎಲ್‌ಆರ್‌ ಪೋಸ್ಟ್‌ ತನ್ನ ವರದಿಯಲ್ಲಿ ತಿಳಿಸಿದೆ.

ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಣಬ್ ಮೊಹಂತಿ ಅವರ ನೇತೃತ್ವದ ಎಸ್‌ಐಟಿ ತಂಡ ಮಂಗಳವಾರ ಅಸ್ಥಿಪಂಜರದ ಅವಶೇಷಗಳು ಅಥವಾ ಶವಗಳನ್ನು ಹೊರತೆಗೆಯಲು ಉತ್ಖನನವನ್ನು ಪ್ರಾರಂಭಿಸಿತು. 

ಸೋಮವಾರ, ಎಸ್‌ಐಟಿ ಧರ್ಮಸ್ಥಳದ ಸ್ಥಾನನ ಘಟ್ಟ (ಸ್ನಾನದ ಸ್ಥಳ) ಮತ್ತು ಮುಖ್ಯ ರಸ್ತೆಯ ಬಳಿಯ ಮತ್ತೊಂದು ಸ್ಥಳದಲ್ಲಿ 15 ಸ್ಥಳಗಳಲ್ಲಿ 13 ಸ್ಥಳಗಳನ್ನು ಗುರುತಿಸಿತ್ತು. ಸಾಕ್ಷಿ-ದೂರುದಾರರು 15 ಸ್ಥಳಗಳನ್ನು ಹೆಸರಿಸಿದ್ದಾರೆ.

ಕೆಂಪು ರವಿಕೆ, ಎಟಿಎಂ ಕಾರ್ಡ್‌ ..! 

ಕೆಂಪು ರವಿಕೆ ಮತ್ತು ಇತರ ವಸ್ತುಗಳು 2.5 ಅಡಿ ಆಳದಲ್ಲಿ ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿಯೇ ಸುಮಾರು 8 ಅಡಿಗಳಷ್ಟು ಆಳಕ್ಕೆ ಗುಂಡಿಯನ್ನು ತೋಡಲಾಗಿದೆ. ಈ ವೇಳೆಯಲ್ಲಿ ಮತ್ತೊಂದು ಕಾರ್ಡ್‌ ಲಭ್ಯವಾಗಿದೆ ಎನ್ನಲಾಗುತ್ತಿದೆ. 

ಸುಮಾರು ಎರಡು ಗಂಟೆಗಳ ಕಾಲ ಗುಂಡಿ ಅಗೆಯುವ ಕಾರ್ಯವನ್ನು ನಡೆಸಲಾಗಿದೆ. ಆದರೆ ಎಸ್‌ಐಟಿ ತಂಡಕ್ಕೆ ಯಾವುದೇ ಅಸ್ತಿಪಂಜರ ಲಭ್ಯವಾಗಿಲ್ಲ ಎನ್ನಲಾಗುತ್ತಿದೆ.

ಲಭ್ಯವಾಗಿರುವ ಎಟಿಎಂ ಕಾರ್ಡ್‌ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಗೆ ಸಂಬಂಧಿಸಿದ್ದೇ ? ಅಥವಾ ಬೇರೆಯವರದ್ದಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ. 

2001 ಮತ್ತು 2012 ರ ನಡುವೆ ಧರ್ಮಸ್ಥಳ ಮತ್ತು ಸುತ್ತಮುತ್ತ ಸಾಕಷ್ಟು ಆತ್ಮಹತ್ಯೆ ಪ್ರಕರಣಗಳು ನಡೆದಿದೆ. ಈ ಕುರಿತು ಹಲವು ದಾಖಲೆಗಳನ್ನು ಬೆಳ್ತಂಗಡಿ ಠಾಣೆಯ ಪೊಲೀಸರು ಪಟ್ಟಿ ಮಾಡಿದ್ದಾರೆ.

ಎಸ್ಐಟಿಯ ಹಿರಿಯ ಅಧಿಕಾರಿಗಳು ಹೇಳುವಂತೆ, ಸಿಕ್ಕಿರುವ ದಾಖಲೆಗಳು ಪ್ರಕರಣಕ್ಕೆ ನೇರವಾಗಿ ಸಂಬಂಧಪಟ್ಟಿಲ್ಲದೇ ಇರಬಹುದು.

ಆದರೆ ಸಹಾಯಕ ಆಯುಕ್ತರು ಲಭ್ಯವಾಗುವ ಎಲ್ಲಾ ವಸ್ತುಗಳನ್ನು ಸಂಗ್ರಹಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಸ್ತುಗಳನ್ನು ಸಂರಕ್ಷಿಸಲಾಗಿದೆಯಂತೆ.  

ಅಷ್ಟೇ ಅಲ್ಲಾ ಲಭ್ಯವಾಗಿರುವ ವಸ್ತುಗಳ ಕುರಿತು ತನಿಖೆಯನ್ನೂ ನಡೆಸಲಾಗುತ್ತದೆ. ಇಂದೂ ಕೂಡ ಮೃತ ದೇಹಗಳನ್ನು ಮಣ್ಣು ಮಾಡಿದ ಸ್ಥಳದಲ್ಲಿ ಅಗೆಯುವ ಕಾರ್ಯವನ್ನು ಮುಂದುವರಿಸಲಾಗಿದೆ. 

Also Read : ಧರ್ಮಸ್ಥಳ : ಅನಾಥ ಶವ ಹೂತಿರುವ 13 ಜಾಗ ಮಹಜರು, ಮುಂದೇನಾಗುತ್ತೆ ಪ್ರಕರಣ ?

ಕರ್ನಾಟಕ ಸರ್ಕಾರವು ಜುಲೈ 19 ರಂದು SIT ಅನ್ನು ರಚಿಸಿದ್ದು, DGP ಪ್ರಣಬ್ ಮೊಹಂತಿ ಅವರನ್ನು ಅದರ ಮುಖ್ಯಸ್ಥರನ್ನಾಗಿ ನೇಮಿಸಿದೆ. ಜೊತೆಗೆ 20 ಸದಸ್ಯರ ತಂಡವನ್ನು ರಚಿಸಿದ ನಂತರ ತನಿಖೆ ತೀವ್ರಗೊಂಡಿತು.

ದೂರುದಾರರು ಜುಲೈ 3 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೃತದೇಹಗಳನ್ನು ಹೂಳಲು ಒತ್ತಾಯಿಸಲಾಗಿದೆ ಎಂದು ಆರೋಪಿಸಿ ವರದಿ ಸಲ್ಲಿಸಿದ್ದರು.

ಜುಲೈ 4 ರಂದು ಎಫ್‌ಐಆರ್ ದಾಖಲಿಸಲಾಯಿತು. ಅವರ ವಕೀಲರ ಕಾನೂನು ಮನವಿಯ ಮೇರೆಗೆ, ರಾಜ್ಯ ಸರಕಾರ ಎಸ್‌ಐಟಿಯನ್ನು ಸ್ಥಾಪಿಸಿತು.

1995 ರಿಂದ 2014 ರವರೆಗೆ ವಿವಿಧ ಇಲಾಖೆಗಳಲ್ಲಿ ನೈರ್ಮಲ್ಯ ಕಾರ್ಯಕರ್ತನಾಗಿ ಧರ್ಮಸ್ಥಳ ದೇವಾಲಯ ಸಂಸ್ಥೆಯಲ್ಲಿ ಕೆಲಸ ಮಾಡಿದ ದೂರುದಾರರು ಶವಗಳನ್ನು ಮಣ್ಣು ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. 

ದೂರುದಾರನ ಮಾಹಿತಿಯನ್ನು ಆಧರಿಸಿ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ ಒಂದು ಸ್ಥಳದ ಮಣ್ಣು ತೆಗೆಯಲಾಗಿದ್ದು, ಉಳಿದ ಸ್ಥಳಗಳ ಉತ್ಕನನ ನಡೆಯಬೇಕಾಗಿದೆ. 

Also Read : ಪಿಎಂ ಕಿಸಾನ್ ಯೋಜನೆ : ಕರ್ನಾಟಕದ 5 ಲಕ್ಷ ರೈತರಿಗೆ ಸಿಗಲ್ಲ ಹಣ

Dharmasthala Case Big Update : SIT finds lady ATM card, blouse, PAN, bag in first spot

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories