Ghulam Nabi Azad : ಯಶಸ್ವಿ ನಾಯಕನಾಗುವ ಯಾವುದೇ ಆಸಕ್ತಿ ರಾಹುಲ್ ಗಾಂಧಿಗಿಲ್ಲ:ರಾಜೀನಾಮೆ ಬಳಿಕ ಗುಲಾಂ ನಬಿ ಆಜಾದ್ ಮೊದಲ ಪ್ರತಿಕ್ರಿಯೆ
ದೆಹಲಿ : Ghulam Nabi Azad : ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಮೊಟ್ಟ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.ದೆಹಲಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ನನ್ನನ್ನು ಬಲವಂತವಾಗಿ ನನ್ನ ಮನೆಯಿಂದ ಹೊರಹೋಗುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಗುಲಾಂ ನಬಿ ಆಜಾದ್ 2021ರ ಆರಂಭದಲ್ಲಿ ರಾಜ್ಯಸಭಾ ಸದಸ್ಯರಾಗಿ ನಿವೃತ್ತರಾದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಭಾಷಣದ ಸುತ್ತ ನಡೆದ ಚರ್ಚೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಜಿ 23 ಗುಂಪಿಗೆ ಸೇರಿದಾಗಿನಿಂದ ಕಾಂಗ್ರೆಸ್ ಪಕ್ಷವು ಅವರೊಂದಿಗೆ ಸಮಸ್ಯೆಯನ್ನು ಹೊಂದಿತ್ತು ಎಂದು ಹೇಳಿದ್ದಾರೆ.
ಮೋದಿ ಒಂದು ನೆಪ ಮಾತ್ರ. ಕಾಂಗ್ರೆಸ್ನವರಿಗೆ ಜಿ 23 ಪತ್ರ ಬರೆದಾಗಿನಿಂದ ನನ್ನೊಂದಿಗೆ ಸಮಸ್ಯೆಯಿತ್ತು. ಯಾರಾದರೂ ನಮಗೆ ಪತ್ರ ಬರೆಯಬೇಕು. ತಮ್ಮ ಪ್ರಶ್ನಿಸಬೇಕು, ಈ ರೀತಿ ಯಾವುದು ಕಾಂಗ್ರೆಸ್ನವರಿಗೆ ಬೇಕಾಗಿರಲಿಲ್ಲ. ಕಾಂಗ್ರೆಸ್ನಲ್ಲಿ ಈವರೆಗೆ ಅದೆಷ್ಟೋ ಸಭೆಗಳು ನಡೆದಿಲ್ಲ. ಆದರೆ ಯಾವೊಂದು ಸಲಹೆಯನ್ನೂ ಕಾಂಗ್ರೆಸ್ ಸ್ವೀಕರಿಸುತ್ತಿರಲಿಲ್ಲ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಪಕ್ಷಕ್ಕಾಗಿ ರಕ್ತ ಕೊಟ್ಟಿದ್ದಕ್ಕೆ (ಜಿ 23) ಪತ್ರ ಬರೆದ 6 ದಿನ ಮೊದಲು ಮತ್ತು ನಂತರ ನಿದ್ದೆ ಮಾಡಿಲ್ಲ, ಇಂದು ಅಲ್ಲಿನ ಜನ ನಿಷ್ಪ್ರಯೋಜಕರಾಗಿದ್ದಾರೆ… ನಮ್ಮ ಬಗ್ಗೆಯೇ ಗೊತ್ತಿಲ್ಲದ ಇಂತಹ ವಕ್ತಾರರು ಕಾಂಗ್ರೆಸ್ಗೆ ಇರುವುದು ಬೇಸರ ತಂದಿದೆ. ..,” ಎಂದು ಬೇಸರ ವ್ಯಕ್ತಪಡಿಸಿದರು.
30 ವರ್ಷಗಳ ಹಿಂದೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮೇಲೆ ನನಗಿದ್ದ ಗೌರವ, ಇಂದಿರಾ ಗಾಂಧಿ ಕುಟುಂಬದ ಮೇಲೂ ಇರುವ ಗೌರವ ಒಂದೇ ಆಗಿದೆ. ವೈಯಕ್ತಿಕವಾಗಿ ನಾನು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ಅವರನ್ನು ಯಶಸ್ವಿ ನಾಯಕನನ್ನಾಗಿ ಮಾಡಲು ನಾವು ತುಂಬಾನೇ ಪ್ರಯತ್ನಿಸಿದೆವು. ಆದರೆ ರಾಹುಲ್ಗೆ ಯಶಸ್ವಿ ನಾಯಕನಾಗುವ ಯಾವುದೇ ಆಸಕ್ತಿಯಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: BIG BREAKING NEWS : ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್ : ‘ಜಿಯೋ 5G ಸೇವೆ’ ಘೋಷಿಸಿದ ಮುಕೇಶ್ ಅಂಬಾನಿ |Reliance AGM 2022
ಇದನ್ನೂ ಓದಿ: ಕೇವಲ ರೂ.799ಕ್ಕೆ One Plus Nord wired earphone
Forced to leave my home; Rahul Gandhi not interested in becoming a successful leader: Ghulam Nabi Azad
Comments are closed.