udaipur rajasthan : ಪೊಲೀಸರ ನಿರ್ಲಕ್ಷ್ಯದಿಂದಲೇ ನಡೆಯಿತಾ ಕನ್ಹಯ್ಯಲಾಲ್ ಹತ್ಯೆ : ವರದಿಗಳಲ್ಲಿ ಬಯಲಾಯ್ತು ಶಾಕಿಂಗ್ ಮಾಹಿತಿ
ರಾಜಸ್ಥಾನ : udaipur rajasthan : ರಾಜಸ್ಥಾನದಲ್ಲಿ ನಡೆದಿರುವ ಹಿಂದೂ ವ್ಯಕ್ತಿಯ ಕೊಲೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದಾರೆ ಎಂಬ ಒಂದೇ ಕಾರಣಕ್ಕೆ ಟೇಲರ್ ಕನ್ಹಯ್ಯ ಕುಮಾರ್ ಎಂಬಾತನನ್ನು ದುಷ್ಕರ್ಮಿಗಳು ಕತ್ತು ಸೀಳಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಅಲ್ಲದೇ ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟು ನೂಪುರ್ ಶರ್ಮಾ ಹಾಗೂ ಪ್ರಧಾನಿ ಮೋದಿಯನ್ನೂ ಕೊಲೆ ಮಾಡೋದಾಗಿ ಬೆದರಿಕೆಯೊಡ್ಡಿದ್ದರು. ಈ ಎಲ್ಲಾ ಆರೋಪಿಗಳನ್ನು ಪೊಲೀಸರು ರಾಜ್ ಸಮುಂದ್ ಜಿಲ್ಲೆಯ ಭೀಮಾ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಮೃತಪಟ್ಟಿರುವ ಕನ್ಹಯ್ಯ ಲಾಲ್ ಪುತ್ರ 8 ವರ್ಷದ ಬಾಲಕ ಅಕಸ್ಮಾತ್ ಆಗಿ ನೂಪುರ್ ಶರ್ಮಾ ಪರವಾದ ಪೋಸ್ಟ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ ಎಂದು ಹೇಳಲಾಗ್ತಿದೆ. ಆದರೆ ಇದೀಗ ತಿಳಿದುಬಂದಿರುವ ಹೊಸ ಮಾಹಿತಿಯ ಪ್ರಕಾರ ಮೃತ ಕನ್ಹಯ್ಯ ಲಾಲ್ಗೆ ದುಷ್ಕರ್ಮಿಗಳು ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದಕ್ಕಾಗಿ ನಿನ್ನನ್ನು ಕೊಲೆ ಮಾಡುತ್ತೇವೆಂದು ಜೂನ್ 17ರಂದೇ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಇದರಿಂದ ಭಯಗೊಂಡಿದ್ದ ಕನ್ಹಯ್ಯ ಲಾಲ್ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ತಮಗೆ ಭದ್ರತೆ ಬೇಕೆಂದು ಕೇಳಿಕೊಂಡಿದ್ದರು. ಆದರೆ ಪೊಲೀಸರು ಟೇಲರ್ನ ಮಾತನ್ನು ನಿರ್ಲ್ಯಕ್ಷಿಸಿದ್ದಾರೆ. ಪರಿಣಾಮ ಘನಘೋರ ದುರಂತ ಸಂಭವಿಸಿದೆ.
ಟೈಲರಿಂಗ್ ಕೆಲಸ ಮಾಡುತ್ತಿದ್ದ ಕನ್ಹಯ್ಯಲಾಲ್ ಉದಯಪುರದ ಧನ್ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ. ತಮ್ಮ ಅಂಗಡಿಯಲ್ಲಿ ಕನ್ಹಯ್ಯ ಟೇಲರಿಂಗ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಂಗಡಿಗೆ ಬಟ್ಟೆ ಹೊಲಿಸುವ ನೆಪದಲ್ಲಿ ಎಂಟ್ರಿ ನೀಡಿದ ದುಷ್ಕರ್ಮಿಗಳು ಕನ್ಹಯ್ಯ ಶಿರಚ್ಛೇದ ಮಾಡಿದ್ದಾರೆ. ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟು ಪ್ರಧಾನಿ ಮೋದಿ ಹಾಗೂ ನೂಪುರ್ ಶರ್ಮಾರಿಗೆ ಕೊಲೆ ಬೆದರಿಕೆಯನ್ನು ಹಾಕಿದ್ದರು .
ವಿಡಿಯೋದಲ್ಲಿ ಹಂತಕರು ರಕ್ತ ಸಿಕ್ತವಾದ ಕತ್ತಿಯನ್ನು ಹಿಡಿದು ನಗು ಮೊಗದಲ್ಲಿ, ಮೊಹಮ್ಮದ್ ರಿಯಾಜ್ ಅನ್ಸಾರಿ ಎಂಬ ನಾನು ಹಾಗೂ ಇವರು ಮೊಹಮ್ಮದ್ ಭಾಯ್ ಇವನ ತಲೆ ಕತ್ತರಿಸಿದ್ದೇವೆ. ನಾವು ಬದುಕಿದರೂ ನಿಮಗಾಗಿ , ಸತ್ತರೂ ನಿಮಗಾಗಿ ಎಂದು ಹೇಳುತ್ತಾರೆ .
ಇದನ್ನು ಓದಿ : Roger Binny Outrage Against Manish Pandey : ಮನೀಶ್ ಪಾಂಡೆ ವಿರುದ್ಧ ಕೆಎಸ್ಸಿಎ ಅಧ್ಯಕ್ಷ ಬಿನ್ನಿ ಕೆಂಡಾಮಂಡಲ
ಇದನ್ನೂ ಓದಿ : India Vs New Zealand : ನವೆಂಬರ್ನಲ್ಲಿ ನ್ಯೂಜಿಲೆಂಡ್ ಟೂರ್: ಕಿವೀಸ್ ವಿರುದ್ಧ ಟಿ20, ಏಕದಿನ ಸರಣಿ ಆಡಲಿದೆ ಟೀಮ್ ಇಂಡಿಯಾ
heavy tension in udaipur rajasthan two accused killed man by slitting his throat threats to kill pm modi
Comments are closed.