ಕೊರೊನಾದಿಂದ ಮೃತ ಯುವಕ ಅಂತ್ಯಕ್ರಿಯೆಗೆ ವಿರೋಧ : ಸ್ವತಃ ಅಂಬುಲೆನ್ಸ್ ಚಲಾಯಿಸಿ ಶವ ಸಾಗಿಸಿದ ಶಾಸಕ ರೇಣುಕಾಚಾರ್ಯ

ದಾವಣಗೆರೆ : ಯುವಕನೊರ್ವ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ. ಆದರೆ ಗ್ರಾಮಸ್ಥರು ಮೃತದೇಹವನ್ನು ಗ್ರಾಮಕ್ಕೆ ತರದಂತೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಸಿಎಂ ಆಪ್ತ ಕಾರ್ಯದರ್ಶಿ ಹಾಗೂ ಶಾಸಕ ರೇಣುಕಾಚಾರ್ಯ ಅವರೇ ಖುದ್ದು ಅಂಬುಲೆನ್ಸ್ ಚಲಾಯಿಸಿ ಶವ ಸಾಗಾಟ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆಯ ಹೊನ್ನಾಳಿಯಲ್ಲಿ ಆಂಧ್ರಪ್ರದೇಶ ಮೂಲದ ಕುಟುಂಬ ವೊಂದು ನೆಲೆಸಿತ್ತು‌. ಕುಟುಂಬದ ಯುವಕನೋರ್ವ ಕೊರೊನಾ ಸೋಂಕಿಗೆ ತುತ್ತಾಗಿದ್ದ. ರೇಣುಕಾಚಾರ್ಯ ಯುವಕನ ಆರೋಗ್ಯವನ್ನು ವಿಚಾರಿಸಿಕೊಂಡು ಬಂದಿದ್ದರು. ಆದರೆ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಆದರೆ ಯುವಕನ ಅಂತ್ಯಕ್ರೀಯೆ ನಡೆಸಲು ಯುವಕನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ಸರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಶಾಸಕ ರೇಣುಕಾಚಾರ್ಯ ಅವರೇ ಖುದ್ದು, ಆಂಬುಲೆನ್ಸ್ ಚಲಾಯಿಸಿಕೊಂಡು ಹೊನ್ನಾಳಿಯ ಸ್ಮಶಾನಕ್ಕೆ ಶವವನ್ನು ಕೊಂಡೊಯ್ದು ಶವಸಂಸ್ಕಾರ ಮಾಡಿಸಿದ್ದಾರೆ. ಈ ಮೂಲಕ ಶಾಸಕರ ಕಾರ್ಯ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.

https://youtu.be/zeZKQjkKYlU

Comments are closed.