ಉಡುಪಿ : ಚುಚ್ಚು ಮದ್ದು ತೆಗೆದುಕೊಂಡ ಮಗು ಸಾವು ..!!!

ಕಾರ್ಕಳ : ಚುಚ್ಚುಮದ್ದು ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಮಗುವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರೆಂಜಾಳದಲ್ಲಿ ನಡೆದಿದೆ.

ನಾಲ್ಕೂವರೆ ವರ್ಷದ ಶ್ರೀಯಾನ್ ಸಾವನ್ನಪ್ಪಿದ ಮಗು.‌ ಎಪ್ರಿಲ್ 7 ರಂದು ಮದ್ಯಾಹ್ನದ ಸಮಯದಲ್ಲಿ ಕಾರ್ಕಳ ತಾಲೂಕಿನ ರೇಂಜಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಕಿಯರು ಮಗುವಿಗೆ ಚುಚ್ಚು ಮದ್ದು ನೀಡಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ ಮಗುವನ್ನು ಮನೆಗೆ ಕರೆದೊಯ್ಯುತ್ತಿದ್ದಂತಯೇ ಬಾಯಲ್ಲಿ ನೊರೆ ಬಂದು ತೀವ್ರ ಅಸ್ವಸ್ಥಗೊಂಡಿತ್ತು.

ಕೂಡಲೇ ಕಾರ್ಕಳದ ರೋಟರಿ ಪೈ ಆಸ್ಪತ್ರೆಗೆ ಮಗುವನ್ನು ದಾಖಲಿ ಸಿದ್ದು ಸಂಜೆಯ ಹೊತ್ತಲ್ಲಿ ಮಗುವ ಸಾವನ್ನಪ್ಪಿರೋದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಕಿ ಯರು ನೀಡಿದ ಚುಚ್ಚು ಮದ್ದಿನ ಅಡ್ಡ ಪರಿಣಾಮದಿಂದಲೇ ಮಗು ಮೃತಪಟ್ಟಿದೆ‌ ಅನ್ನೋ ಆರೋಪ ಕೇಳಿಬಂದಿದ್ದು, ಈ ಕುರಿತು ಮಗುವಿನ ತಂದೆ ಸುಧಾಕರ ಆರ್‌. ಶೆಟ್ಟಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Comments are closed.