Kerala Horror : ಕೇರಳದಲ್ಲಿ ನರಬಲಿ.. ಕೊಂದ್ರು ಬೇಯಿಸಿ ತಿಂದ್ರು

ತಿರುವಂತನಪುರ : Kerala Horror ದೇವರ ನಾಡು ಕೇರಳದಲ್ಲಿ ನಡೆದ ನರಬಲಿ, ನರಮಾಂಸ ಭಕ್ಷಣೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ನಿಧಿ ಆಸೆಗಾಗಿ ಹಾಗೂ ಯವ್ವನವನ್ನ ಹಾಗೇ ಉಳಿಸಿಕೊಳ್ಳಲು ರಾಕ್ಷಸರು ಇಬ್ಬರು ಮಹಿಳೆಯರನ್ನ ವಾಮಾಚಾರ ಮಾಡಿ ಅವರಿಗೆ ಚಿತ್ರ ಹಿಂಸೆ ಕೊಟ್ಟು ಹತ್ಯೆಗೈದ ಪ್ರಕರಣ ಬೆಳಕಿಗೆ ಬಂದಿದೆ.

52 ವರ್ಷದ ಪದ್ಮಾ ಮತ್ತು 50 ವರ್ಷದ ರೋಸ್ಲಿನ್ ಅನ್ನೋ ಮಹಿಳೆಯರನ್ನ ಹತ್ಯೆಗೈಯಲಾಗಿದ್ದು, ಕೇರಳದ ಎರ್ನಾಕುಲಂ ಜಿಲ್ಲೆಯ ಎರಡು ಸ್ಥಗಳಲ್ಲಿ ಈ ಕೃತ್ಯ ಎಸಗಲಾಗಿದೆ ಅಂತಾ ಗೊತ್ತಾಗಿದೆ. ಮಾಂತ್ರಿಕ ಭಗವಲ್ ಸಿಂಗ್ ಈತನ ಪತ್ನಿ ಲೈಲಾ ಕೃತ್ಯ ಎಸಗಿದ್ದು ಇವ್ರಿಬ್ಬರಿಗೂ ಶಫಿ ಎಂಬಾತ ಸಾಥ್ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೂವರು ಆರೋಪಿಗಳನ್ನ ಬಂಧಿಸಿರೋ ಪೊಲೀಸರು ಮೂವರನ್ನೂ ಜೈಲಿಗೆ ಅಟ್ಟಿದ್ದಾರೆ.

ಏನಿದು ಪ್ರಕರಣ : ಭಗವಲ್ ಸಿಂಗ್ ಮಾಂತ್ರಿಕನಾಗಿದ್ದು ಹಣಗಳಿಸಲು, ನಿಧಿ ಆಸೆಗಾಗಿ, ಹಾಗೂ ಯವ್ವನವನ್ನ ಕಾಪಾಡಿಕೊಳ್ಳಲು ಈ ವಾಮಾಚಾರದ ನರಬಲಿ ಮಾಡಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಅಸಲಿಗೆ ಕಾಲಡಿ ಗ್ರಾಮದ ನಿವಾಸಿ ರೋಸ್ಲಿನ್ ಜೂನ್ ನಲ್ಲಿ ನಾಪತ್ತೆಯಾಗಿದ್ಲು. ಕಳೆದ ತಿಂಗಳು ಅಂದ್ರೆ ಸೆಪ್ಟೆಂಬರ್ 26 ರಂದು ಕಡವಂತ್ರ ಅನ್ನೋ ಗ್ರಾಮದಿಂದ ಪದ್ಮಾ ನಾಪತ್ತೆಯಾಗಿದ್ಲು. ಸೆ. 26ರಂದು ಕಡವಂತ್ರದಿಂದ ಪದ್ಮಾ ನಾಪತ್ತೆಯಾಗಿದ್ದ ಸಂದರ್ಭದಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಕಾಲಡಿಯಿಂದ ರೋಸ್ಲಿನ್ ಇದೇ ರೀತಿ ನಾಪತ್ತೆ ಆಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಪದ್ಮಾ ಅವರ ಮೊಬೈಲ್ ಸಿಗ್ನಲ್ ತಿರುವಲ್ಲಾನಲ್ಲಿ ಟ್ರ್ಯಾಕ್ ಮಾಡಿದ್ದಾರೆ. ಇದಾದ ಬಳಿಕ ಹೆಚ್ಚಿನ ತನಿಖೆ ಕೈಗೊಂಡ ಪೊಲೀಸರಿಗೆ ತಿರುವಲ್ಲಾದಲ್ಲಿ ಇಬ್ಬರು ಮಹಿಳೆಯರ ದೇಹಗಳು ಕತ್ತು ಸೀಳಿ, ತುಂಡು ತುಂಡಾಗಿ ಕತ್ತರಿಸಿ ಹೂತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಈ ಮೂವರ ಮೇಲೆ ಅನುಮಾನವಿತ್ತು. ಬಂಧಿಸಿ ವಿಚಾರಣೆ ನಡೆಸಿದಾಗ ಭಗವಲ್ ಸಿಂಗ್, ಲೈಲಾ ಮತ್ತು ಶಫಿ ಮಾಡಿದ ಕುಕೃತ್ಯ ಬಯಲಾಗಿದೆ. ಪದ್ಮಾ ಮತ್ತು ರೋಸ್ಲಿನ್ ಳನನ್ನ ಮೂವರು ಕೊಂದು ಮನೆ ತುಂಬಾ ರಕ್ತ ಸಿಂಪಡಿಸಿ ನರ ಭಕ್ಷಣೆ ಮಾಡಿದ್ದಾರೆ ಅನ್ನೋ ಬೆಚ್ಚಿ ಬೀಳಿಸೋ ಸಂಗತಿ ಬಯಲಾಗಿದೆ.

56 ತುಂಡುಗಳಾಗಿ ಕತ್ತರಿಸಿದ್ರು: ಈ ಮೂವರು ಆರೋಪಿಗಳು ಮಹಿಳೆಯರಿಗೆ ಅದ್ಯಾವ ಮಟ್ಟಿಗೆ ಚಿತ್ರ ಹಿಂಸೆ ಕೊಟ್ಟಿದ್ದಾರೆ ಅನ್ನೋದು ಸಹ ತನಿಖೆಯಲ್ಲಿ ಬಯಲಾಗಿದೆ. ಇಬ್ಬರನ್ನೂ ಬೇರೆ ಬೇರೆ ತಿಂಗಳಲ್ಲಿ ಅಪರಿಸಿದ್ದರೂ, ಇಬ್ಬರಿಗೂ ಒಂದೇ ರೀತಿಯ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ ಅನ್ನೋದು ಸಂಗತಿ ಹೊರಬಿದ್ದಿದೆ. ಇಬ್ಬರು ಮಹಿಳೆಯರ ಕತ್ತು ಸೀಳಿ ನರಬಲಿ ಕೊಟ್ಟು ತುಂಡು ತುಂಡುಗಳಾಗಿ ಕತ್ತರಿಸಿದ್ದರು. 56 ತುಂಡುಗಳಾಗಿ ಮಹಿಳೆಯರನ್ನ ತುಂಡು ಮಾಡಿದ್ದರು. ನರಬಲಿ ಬಳಿಕ ದೇಹವನ್ನು ಬೇಯಿಸಿ ತಿಂದಿದ್ದರು. ಬೇರೆ ಬೇರೆ ಪ್ರದೇಶದಲ್ಲಿ ಮಹಿಳೆಯರ ಶವ ಹೂತಿದ್ದರು. ನರಬಲಿಯಾದ ರೋಸ್ಲಿನ್ ಹಾಗೂ ಪದ್ಮಾ ಅವರನ್ನು ಕತ್ತು ಹಿಸುಕಿ ಸಾಯಿಸುವುದಕ್ಕೂ ಮೊದಲು ಅವರಿಗೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ. ಮಹಿಳೆಯರ ಸ್ತನಗಳನ್ನು ಕತ್ತರಿಸಿ, ರಕ್ತ ಹರಿಯುವಂತೆ ಮಾಡಲಾಗಿದ್ದು, ಬಳಿಕ ಒಂದು ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಲಾಗಿದೆ. ಮಹಿಳೆಯರ ದೇಹದ ಭಾಗಗಳು ಒಟ್ಟು 3 ಹೊಂಡಗಳಲ್ಲಿ ಪತ್ತೆಯಾಗಿರುವುದಾಗಿ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ನರ ಮಾಂಸ ಭಕ್ಷಣೆ : ಯೌವ್ವನ ಉಳಿಯಬೇಕು ಎಂದು ಮೃತದೇಹಗಳ ಮಾಂಸ ಬೇಯಿಸಿ ತಿಂದಿರುವ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಹೀಗೆ ನರಮಾಂಸ ಭಕ್ಷಣೆ ಮಾಡಿದ್ರೆ ವೃದ್ಧಾಪ್ಯ ಬರದಂತೆ ಮಾಡಬಹುದೆಂದು ಆರೋಪಿಗಳು ಭಾವಿಸಿದ್ದರಂತೆ. ಅಲ್ಲದೇ ಹಣಕಾಸಿನ ಸಮಸ್ಯೆ ನಿವಾರಿಸಿಕೊಳ್ಳಲು ಬಲಿ ಕೊಟ್ಟರೆ ಸಮೃದ್ಧಿ ಸಿಗುತ್ತೆ ಎಂದು ನಂಬಿಕೆ ಇಟ್ಟುಕೊಂಡಿದ್ದರಂತೆ. ಹೀಗಾಗಿ  ವಾಮಾಚಾರ ನಡೆಸಿ ಇಬ್ಬರು ಮಹಿಳೆಯರ ಬಲಿ ನೀಡಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇದು ಮಾನವನ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಆತ್ಮ ಸಾಕ್ಷಿ ಇರುವವರು ಇಂತಹ ಕೃತ್ಯದಲ್ಲಿ ಭಾಗಿಯಾಗಿರಬಾರದು. ಮೂಢನಂಬಿಕೆಗಾಗಿ ಜನರನ್ನು ಕೊಲ್ಲುವುದು ಕೇರಳದಲ್ಲಿ ಊಹೆಗೂ ನಿಲುಕದ ಅಪರಾಧವಾಗಿದೆ ಎಂದಿದ್ದಾರೆ.

ಇದನ್ನೂ ಓದಿ : Hijab Verdict Today: ಸುಪ್ರೀಂಕೋರ್ಟ್ ನಲ್ಲಿ ಇಂದು ಹಿಜಾಬ್ ಭವಿಷ ನಿರ್ಧಾರ ಸಾಧ್ಯತೆ..?

Kerala Horror Human sacrifice in Kerala Demons who killed and cooked and ate

Comments are closed.