ಒಡಿಶಾ : Kohinoor : ಬ್ರಿಟನ್ನ ರಾಣಿ ಎರಡನೇ ಎಲೆಜಬೆತ್ ಅಂದಾಕ್ಷಣ ಭಾರತೀಯರಿಗೆ ಮೊದಲು ನೆನಪಾಗುವುದೇ ಕೊಹಿನೂರ್ ವಜ್ರ. ಬ್ರಿಟೀಷರ ಕಾಲದಲ್ಲಿ ಭಾರತದ ಈ ಅತ್ಯಂತ ಬೆಲೆಬಾಳುವ ವಜ್ರವೊಂದು ಎರಡನೇ ಎಲೆಜಬೆತ್ ಪಾಲಾಗಿತ್ತು. ಭಾರತವು ಇದು ನಮಗೆ ಸೇರಿದ ವಜ್ರ ಎಂದು ಹೇಳಿದ್ದರೂ ಸಹ ಅದು ಬ್ರಿಟನ್ ರಾಣಿಯ ಕಿರೀಟದಲ್ಲಿ ಭದ್ರವಾಗಿದೆ. ಕೊಹಿನೂರ್ ವಜ್ರವು ಕರ್ನಾಟಕಕ್ಕೆ ಸೇರಿದೆ ಎಂದು ಈಗಾಗಲೇ ಸಾಕಷ್ಟು ವರದಿಗಳು ಹೇಳಿವೆ. ಈ ನಡುವೆ ಇದೀಗ ಒಡಿಶಾ ಮೂಲದ ಸಂಘಟನೆಯೊಂದು ಕೊಹಿನೂರ್ ವಜ್ರವು ಪುರಿ ಜಗನ್ನಾಥನಿಗೆ ಸೇರಿದ್ದು ಎಂದು ವಾದಿಸಿದೆ.
ಒಡಿಶಾ ಮೂಲದ ಸಂಘಟನೆಯೊಂದು ಇಂತದ್ದೊಂದು ವಾದವನ್ನು ಮಾಡಿದೆ. ಹಿಂದೂ ದೇವರಾದ ಪುರಿ ಜಗನ್ನಾಥನಿಗೆ ಸೇರಿದ ಈ ಕೊಹಿನೂರು ವಜ್ರವನ್ನು ಬ್ರಿಟೀಷರು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಬ್ರಿಟನ್ಗೆ ಲೂಟಿ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಅಂದಿನಿಂದ ಅದು ಬ್ರಿಟನ್ ರಾಣಿಯ ಕಿರೀಟದಲ್ಲಿದೆ ಎಂದು ಹೇಳಿದೆ.
ಕಳೆದ ವಾರ ಬ್ರಿಟನ್ನ ರಾಣಿ ಎರಡನೇ ಎಲೆಜಬೆತ್ ನಿಧನರಾಗಿದ್ದಾರೆ. ಎರಡನೇ ಎಲೆಜಬೆತ್ ನಿಧನದ ಬಳಿಕ ಟ್ವಿಟರ್ನಲ್ಲಿ ಕೊಹಿನೂರ್ ಟ್ರೆಂಡ್ ಕೂಡ ಜೋರಾಗಿದೆ. ಈ ಅಮೂಲ್ಯವಾದ ವಜ್ರವನ್ನು ಬ್ರಿಟೀಷರು ಭಾರತಕ್ಕೆ ಹಿಂದಿರುಗಿಸುವ ಸಂದರ್ಭ ಬಂದಿದೆ ಎಂದು ಅನೇಕರು ಆಗ್ರಹಿಸಿದ್ದರು. ಇದೀಗ ಮತ್ತೊಂದು ಹೊಸ ವಾದ ಸೃಷ್ಟಿಯಾಗಿದ್ದು , ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾದ ಶ್ರೀ ಜಗನ್ನಾಥ ಸೇನೆಯು ವಜ್ರವನ್ನು ಮರಳಿ ತರಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಧ್ಯಸ್ಥಿಕೆಯನ್ನು ಬಯಸಿದೆ.
ಬ್ರಿಟನ್ನ ರಾಣಿ ಎರಡನೆ ಎಲೆಜಬೆತ್ ಕಳೆದ ವಾರ ಸ್ಕಾಟಿಷ್ ಹೈಲ್ಯಾಂಡ್ಸ್ನಲ್ಲಿರುವ ಬಾಲ್ಮೋರಲ್ನಲ್ಲಿರುವ ತನ್ನ ವೆಕೇಷನ್ ಹೋಮ್ನಲ್ಲಿ ನಿಧನರಾಗಿದ್ದಾರೆ. ಇದಾದ ಬಳಿಕ ಎಲೆಜಬೆತ್ ಪುತ್ರ ಪ್ರಿನ್ಸ್ ಚಾರ್ಲ್ಸ್ ಸಿಂಹಾಸನವನ್ನು ಅಲಂಕರಿಸಿದ್ದಾರೆ. ನಿಯಮಗಳ ಪ್ರಕಾರ ರಾಣಿ ಎಲೆಜಬೆತ್ ನಿಧನದ ಬಳಿಕ ಈ ಕಿರೀಟವು ಪ್ರಿನ್ಸ್ ಚಾರ್ಲ್ಸ್ ಪತ್ನಿ ಕ್ಯಾಮಿಲ್ಲಾಗೆ ಸೇರುತ್ತದೆ. ಏಕೆಂದರೆ ಈಗ ಅವರು ರಾಣಿ ಪತ್ನಿಯಾಗಿದ್ದಾರೆ.
ಪುರಿ ಮೂಲದ ಸಂಸ್ಥೆಯು ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಪತ್ರದಲ್ಲಿ 12ನೆ ಶತಮಾನದ ಪ್ರಸಿದ್ಧ ಪುರಿ ದೇವಸ್ಥಾನಕ್ಕೆ ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ನೀವು ಸಹಕರಿಸಿಬೇಕೆಂದು ಕೋರಲಾಗಿದೆ.
ಇದನ್ನು ಓದಿ : ICC T20 World Cup India Team: ಭಾರತ ಟಿ20 ವಿಶ್ವಕಪ್ ತಂಡದಲ್ಲೊಬ್ಬ “ಕೋಟಾ” ಪ್ಲೇಯರ್
ಇದನ್ನೂ ಓದಿ : Dinesh Karthik: 12 ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಆಡಲಿದ್ದಾರೆ ಡಿಕೆ ; ನಾಲ್ಕೇ ಶಬ್ದಗಳಲ್ಲಿ ಖುಷಿ ಹಂಚಿಕೊಂಡ ಕಾರ್ತಿಕ್
Kohinoor belonged to Lord Jagannath’: Odisha organisation after Queen’s death
Comments are closed.