ಮಾದಕ ವ್ಯಸನ, ಅನೈತಿಕ ಸಂಬಂಧ : ಪತ್ನಿಯನ್ನೇ ಕೊಲೆಗೈದು ದೇಹವನ್ನು ತುಂಡರಿಸಿದ ಪತಿ

ಸೀತಾಪುರ : Man killing wife Cutting body : ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ದಾ ವಾಕರ್ ಕೊಲೆ ಪ್ರಕರಣ ಬೆನ್ನಲ್ಲೇ ಮತ್ತೊಂದು ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪತ್ನಿ ಅನೈತಿಕ ಸಂಬಂಧ ಹೊಂದಿರುವುದರ ಜೊತೆಗೆ ನಿತ್ಯವೂ ಮಾದಕ ವಸ್ತುಗಳನ್ನು ಸೇವನೆ ಮಾಡಿ ಕಿರಿಕಿರಿ ಮಾಡುತ್ತಿದ್ದಾಳೆ. ಇದರಿಂದ ಕೆರಳಿದ ಪತಿಯೋರ್ವ ತನ್ನ ಸಹಚರನ ಜೊತೆ ಸೇರಿ ಪತ್ನಿಯನ್ನು ಕೊಲೆ ಗೈದಿದ್ದಾನೆ. ನಂತರ ಪತ್ನಿಯ ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ್ದ. ಆದರೆ ಇದೀಗ ಪೊಲೀಸರ ಕೈಯಲ್ಲಿ ಬಂಧಿಯಾಗಿದ್ದಾನೆ.

ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ರಾಮ್‌ಪುರ ಕಲಾನ್ ಪ್ರದೇಶದ ಪೊಲೀಸ್ ಠಾಣೆ ವ್ಯಾಪ್ತಿಯ ಗುಲಾರಿಹಾದಿಂದ ಜ್ಯೋತಿ ಅಲಿಯಾಸ್ ಸ್ನೇಹ ಎಂಬಾಕೆಯೇ ಮೃತ ಮಹಿಳೆ ಯಾಗಿದ್ದಾಳೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಕಜ್ ಮೌರ್ಯ ಹಾಗೂ ದುರ್ಜನ್ ಪಾಸಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಪೊಲೀಸರು ಮಹಿಳೆಯ ದೇಹದ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊಲೆಯಾಗಿರುವ ಜ್ಯೋತಿ ಅಲಿಯಾಸ್ ಸ್ನೇಹ ಆರೋಪಿಗಳಲ್ಲಿ ಒಬ್ಬನಾಗಿರುವ ಪಂಕಜ್ ಮೌರ್ಯ ಎಂಬಾತನ ಪತ್ನಿ. ಆರೋಪಿ ತನ್ನ ಸಹಚರನೊಬ್ಬನ ಜೊತೆ ಸೇರಿ ಪತ್ನಿಯನ್ನು ಕೊಂದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಜ್ಯೋತಿ ಅಲಿಯಾಸ್ ಸ್ನೇಹಾ ನಿತ್ಯ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದಳು ಎಂದು ಆರೋಪಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.

Man killing wife Cutting body : ಅನೈತಿಕ ಸಂಬಂಧ ಆರೋಪ

ಹತ್ತು ವರ್ಷಗಳ ಹಿಂದೆ ಪಂಕಜ್ ಮೌರ್ಯ ಹಾಗೂ ಜ್ಯೋತಿಗೆ ಮದುವೆಯಾಗಿತ್ತು. ಆದರೆ ಕಳೆದ ಹಲವು ದಿನಗಳಿಂದಲೂ ಆಕೆ ಬೇರೊಬ್ಬ ಪುರುಷನ ಜೊತೆಗೆ ಅನೈತಿಕ ಸಂಬಂಧ ವನ್ನು ಹೊಂದಿದ್ದಳು. ಇದರಿಂದಾಗಿ ಆಕೆ ಆತನ ಮನೆಯಲ್ಲಿಯೇ ಇರುತ್ತಿದ್ದಳು. ಇದರಿಂದಾಗಿ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಇದೇ ಕಾರಣಕ್ಕೆ ತಾನು ಆಕೆಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಇನ್ನು ಪಂಕಜ್ ಮೌರ್ಯಗೆ ಸಹಕಾರ ಮಾಡಿ ಆರೋಪದ ಹಿನ್ನೆಲೆಯಲ್ಲಿ ಆತನ ಸ್ನೇಹಿತನನ್ನೂ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸ್ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಳು (SWAT) ಮತ್ತು ರಾಂಪುರ ಪೊಲೀಸರ ಜಂಟಿ ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ : ಕೊನೆಗೂ ಹೇಳಿದಂತೆ ಮಾಡಿಯೇ ಬಿಟ್ಟ ಅಫ್ತಾಬ್; 2 ವರ್ಷಗಳ ಹಿಂದೆಯೇ ಪತ್ರದಲ್ಲಿ ಅಫ್ತಾಬ್ ಕ್ರೂರತೆಯನ್ನು ಬಿಚ್ಚಿಟ್ಟಿದ್ದ ಶೃದ್ಧಾ

ಇದನ್ನೂ ಓದಿ : Firecracker Explosion : ಪಟಾಕಿ ಸ್ಪರ್ಧೆಯ ವೇಳೆ ಅವಘಡ : ಪಟಾಕಿ ಸ್ಪೋಟದಿಂದ 30ಕ್ಕೂ ಅಧಿಕ ಮಂದಿಗೆ ಗಾಯ

Man killing wife Cutting body into pieces in Sitapur Uttar Pradesh

Comments are closed.