Mukesh Ambani at Guruvayur temple : ಭಾವಿ ಸೊಸೆ ಜೊತೆ ಮುಕೇಶ್ ಅಂಬಾನಿ ಟೆಂಪಲ್ ರನ್

ಕೇರಳ : Mukesh Ambani at Guruvayur temple :ರಿಲಯನ್ಸ್‌ ಇಂಡಸ್ಟ್ರಿ ಲಿಮಿಟೆಡ್‌ ಚೇರ್ಮನ್‌ ಮುಕೇಶ್ ಅಂಬಾನಿ ದೇಶದ ವಿವಿಧ ಪ್ರಮುಖ ದೇವಾಲಯಗಳ ಯಾತ್ರೆ ಕೈಗೊಂಡಿದ್ದಾರೆ. ಅದ್ರಲ್ಲೂ ತಮ್ಮ ಭಾವಿ ಸೊಸೆ ಜೊತೆ ದೇವಾಲಯಗಳಿಗೆ ತೆರಳುತ್ತಿರೋದು ವಿಶೇಷವಾಗಿದೆ.

ಶುಕ್ರವಾರ ಆಂಧ್ರದ ತಿರುಪತಿ ದೇವಸ್ಥಾನಕ್ಕೆ ತೆರಳಿದ್ದ ಮುಕೇಶ್ ಅಂಬಾನಿ ಶನಿವಾರ ಕೇರಳದ ಗುರುವಾಯುರು ದೇವಸ್ಥಾನಕ್ಕೂ ಭೇಟಿ  ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು. ಅಷ್ಟೇ ಅಲ್ಲ ತಿರುಪತಿ ದೇಗುಲಕ್ಕೆ ನೀಡಿದ ದೇಣಿಗೆಯಂತೆ ಗುರುವಾಯುರು ದೇವಸ್ಥಾನಕ್ಕೆ 1ಕೋಟಿ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಶುಕ್ರವಾರ ಆಂಧ್ರಪ್ರದೇಶದ ತಿರುಪತಿ ದೇಗುಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಮಾಡಿದ್ದರು. ತನ್ನ ಕಿರಿಯ ಪುತ್ರ ಅನಂತ್‌ ಅಂಬಾನಿಯವರ ಭಾವಿ ಪತ್ನಿ ರಾಧಿಕಾ ಮರ್ಚಂಟ್‌ ಮತ್ತು ಇತರರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದ ಮುಖೇಶ್ ತಿರುಪತಿ ದೇವಸ್ಥಾನಕ್ಕೆ 1.5 ಕೋಟಿ ರೂಪಾಯಿ ದೇಣಿಗೆ ನೀಡಿದ್ರು.

ಶನಿವಾರ ಗುರುವಾಯುರು ದೇಗುಲದಲ್ಲಿ ಕೃಷ್ಣನ ದರ್ಶನ ಪಡೆದ ಬಳಿಕ ದೇವಾಲಯದ ಆನೆಗಳಾದ ಚಿಂತಾಮರಾಕ್ಸನ್‌ ಮತ್ತು ಬಲರಾಮನ್‌ಗೆ ಆಹಾರ ತಿನ್ನಿಸಿದ್ದಾರೆ. ಗರ್ಭಗುಡಿಯಲ್ಲಿರುವ ದೇವರಿಗೆ ತುಪ್ಪವನ್ನೂ ಅರ್ಪಿಸಿದ್ದಾರೆ. ಮುಖೇಶ್‌ ಅಂಬಾನಿ ದೇಗುಲಕ್ಕೆ ನೀಡಿರೋ 1.5 ಕೋಟಿ ರೂಪಾಯಿ ದೇಗುಲದ ಇತಿಹಾಸದಲ್ಲಿಯೇ ಪಡೆದ ದೊಡ್ಡ ಮೊತ್ತದ ದೇಣಿಗೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಅಲ್ಲದೇ ಈ ದೇಣಿಗೆಯನ್ನ ಭಕ್ತರ ಅನ್ನದಾನಕ್ಕೆ ಬಳಸುವಂತೆ ಮುಖೇಶ್ ಕೋರಿಕೊಂಡಿದ್ದಾರೆಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಅಲ್ದೆ ಗುರುವಾಯುರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೂ ನೆರವು ನೀಡೋದಾಗಿ ಮುಕೇಶ್ ಅಂಬಾನಿ ತಿಳಿಸಿದ್ದಾರೆಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಮುಕೇಶ್‌ ಅಂಬಾನಿಯವರ ಈ ದೇಗುಲಗಳ ದರ್ಶನದ ಹಿಂದೆ ಏನಾದರೂ ಕಾರಣವಿದೆಯೇ? ವಿಶೇಷವಾಗಿ ತನ್ನ ಭಾವಿ ಸೊಸೆ ಜತೆ ಕೈಗೊಂಡಿರುವ ಈ ಯಾತ್ರೆಯು ಸದ್ಯದಲ್ಲಿ ಅನಂತ್‌ ಅಂಬಾನಿ ಮತ್ತು ರಾಧಿಕ ಮರ್ಚೆಂಟ್‌ ಮದುವೆ ನಡೆಯಬಹುದಾದ ಸೂಚನೆಯೇ? ಇತ್ಯಾದಿ ಪ್ರಶ್ನೆಗಳೂ ಎದ್ದಿವೆ.

ಇದನ್ನೂ ಓದಿ : ಬಂಗಾರ ಪ್ರಿಯರಿಗೆ ಕಹಿಸುದ್ದಿ : ಚಿನ್ನದ ಬೆಲೆಯಲ್ಲಿ ಬಾರೀ ಏರಿಕೆ

ಇದನ್ನೂ ಓದಿ : Hassan : ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಮಾರಾಮಾರಿ

Mukesh Ambani at Guruvayur temple- handed over a cheque for Rs 1.51 crore for annadana

Comments are closed.