ಕಾರು – ಕೋಳಿ ಸಾಗಾಟದ ಲಾರಿ ಢಿಕ್ಕಿ : ನವ ವಿವಾಹಿತೆ‌ ಸಾವು, ಮೂವರು ಗಂಭೀರ

ನೆಲಮಂಗಲ : ವ್ಯಾಗನರ್ ಕಾರು ಹಾಗೂ ಕೋಳಿ ಸಾಗಾಟ‌ ಲಾರಿ ನಡುವೆ ಢಿಕ್ಕಿಯಾಗಿ ನವವಿವಾಹಿತೆ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯ ಗೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚಿಕ್ಕಬುಡ್ನೂರು ಗ್ರಾಮದ ದಾರದಕಕ್ಕು ನಿವಾಸಿ ಗೋಪಿಕ್ ಅವರ ಪತ್ನಿ ಧನುಷಾ (23ವರ್ಷ) ಎಂಬವರೇ ಸಾವನ್ನಪ್ಪಿದ ದುರ್ದೈವಿ.

ಕಳೆದೊಂದು ತಿಂಗಳ ಹಿಂದೆಯಷ್ಟೇ ಧನುಷಾ ಹಾಗೂ ಗೋಪಿಕ್ ವಿವಾಹ‌ ನಡೆದಿತ್ತು. ದಂಪತಿಗಳು ದಾರದಕುಕ್ಕು ಮನೆಯಲ್ಲಿಯೇ ಉಳಿದುಕೊಂಡಿದ್ದರು. ಬೆಂಗಳೂರಿನ‌ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ತೆರಳುವ ವೇಳೆಯಲ್ಲಿ ನೆಲಮಂಗಲ ತಲುಪುತ್ತಿದ್ದಂತೆ ಕಾರಿಗೆ ಕೋಳಿ ಸಾಗಾಟದ ಲಾರಿ ಢಿಕ್ಕಿಯಾಗಿದೆ.

ಢಿಕ್ಕಿಯ ತೀವ್ರತೆಗೆ ಧನುಷಾ ಸಾವನ್ನಪ್ಪಿದರೆ, ಪತಿ ಗೋಪಿಕ್, ಸಂಬಂಧಿಕರು ಸೇರಿದಂತೆ ಒಟ್ಟು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.