Rahul Gandhi is actually a blessing for BJP : ‘ರಾಹುಲ್​ ಬಿಜೆಪಿ ಪಾಲಿಗೆ ವರದಾನವಿದ್ದಂತೆ’ : ಆಸ್ಸಾಂ ಸಿಎಂ ವ್ಯಂಗ್ಯ

ಗುವಾಹಟಿ : Rahul Gandhi is actually a blessing for BJP : ಕಾಂಗ್ರೆಸ್​ ಪಕ್ಷದಲ್ಲಿದ್ದ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್​​ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದು ಪಕ್ಷದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಮ್ಮ ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್​ ರಾಹುಲ್​ ನಡೆಯಿಂದ ಬೇಸರಗೊಂಡು ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಈ ವಿಚಾರವಾಗಿ ಇಂದು ಗುವಾಹಟಿಯಲ್ಲಿ ಪ್ರತಿಕ್ರಿಯಿಸಿದ ಆಸ್ಸಾಂನ ಸಿಎಂ ಹಿಮವಂತ್​ ಬಿಸ್ವಾ ಶರ್ಮಾ ರಾಹುಲ್​ ಗಾಂಧಿ ಬಿಜೆಪಿ ಪಾಲಿಗೆ ನಿಜಕ್ಕೂ ವರದಾನವಿದ್ದಂತೆ ಎಂದು ವ್ಯಂಗ್ಯವಾಡಿದ್ದಾರೆ .


ಗುಲಾಂ ನಬಿ ಆಜಾದ್​ ರಾಜೀನಾಮೆ ನೀಡಿರುವ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಗುಲಾಂ ನಬಿ ಆಜಾದ್​ರ ರಾಜೀನಾಮೆ ಪತ್ರ ಹಾಗೂ 2015ರಲ್ಲಿ ನಾನು ಬರೆದ ಪತ್ರಗಳನ್ನು ನೀವು ಓದಿದರೆ ನಿಮಗೆ ಸಾಕಷ್ಟು ಸಾಮ್ಯತೆಗಳು ಕಾಣಬಹುದು. ಕಾಂಗ್ರೆಸ್​ನಲ್ಲಿ ರಾಹುಲ್​ ಒಬ್ಬ ಅಪ್ರಬುದ್ಧ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಈ ಬಗ್ಗೆ ಸೋನಿಯಾ ಗಾಂಧಿ ಕಾಳಜಿ ವಹಿಸುತ್ತಿಲ್ಲ. ಕಾಂಗ್ರೆಸ್​ ಪಕ್ಷದ ಮೂಲಕ ಸೋನಿಯಾ ಗಾಂಧಿ ಕೇವಲ ತನ್ನ ಪುತ್ರನಿಗೆ ಪ್ರಚಾರ ನೀಡಲು ಯತ್ನಿಸುತ್ತಿದ್ದಾರೆ . ಆದರೆ ಇದೊಂದು ವ್ಯರ್ಥ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.


ಸೋನಿಯಾ ಗಾಂಧಿ ಈ ರೀತಿ ಮಾಡುತ್ತಿರೋದ್ರಿಂದ ಪಕ್ಷದಲ್ಲಿ ನಿಷ್ಠಾವಂತರು ಒಬ್ಬೊಬ್ಬರಾಗಿಯೇ ತೊರೆಯುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಕೇವಲ ಗಾಂಧಿಗಳು ಮಾತ್ರ ಉಳಿಯುವ ದಿನ ಶೀಘ್ರದಲ್ಲಿಯೇ ಸಮೀಪಿಸಲಿದೆ ಎಂದು ನಾನು ಈ ಹಿಂದೆ ಭವಿಷ್ಯ ನುಡಿದಿದ್ದೆ.ಬಿಜೆಪಿ ಪಾಲಿಗೆ ರಾಹುಲ್​ ಗಾಂಧಿ ನಿಜಕ್ಕೂ ಒಂದು ಆಶೀರ್ವಾದವಿದ್ದಂತೆ ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್​ನ ಎಲ್ಲಾ ಹುದ್ದೆಗಳು ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ಗುಲಾಂ ನಬಿ ಆಜಾದ್​ ಇಂದು ರಾಜೀನಾಮೆ ನೀಡಿದ್ದು ರಾಹುಲ್​ ಗಾಂಧಿ ಅಪ್ರಬುದ್ಧ ನಾಯಕತ್ವ ಇದಕ್ಕೆ ಕಾರಣ ಎಂದು ರಾಜೀನಾಮೆ ಪತ್ರದಲ್ಲಿ ಬಹಿರಂಗವಾಗಿ ತಿಳಿಸಿದ್ದಾರೆ.


ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ 5 ಪುಟಗಳ ರಾಜೀನಾಮೆ ಪತ್ರ ಸಲ್ಲಿಸಿರುವ ಗುಲಾಂ ನಬಿ ಆಜಾದ್​ ಸೋನಿಯಾ ಗಾಂಧಿ ಕೇವಲ ನಾಮಕಾವಸ್ಥೆಗೆ ಪಕ್ಷದ ಅಧ್ಯಕ್ಷೆಯ ಸ್ಥಾನದಲ್ಲಿದ್ದಾರೆ. ಪಕ್ಷದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ರಾಹುಲ್​ ಗಾಂಧಿ ಅಥವಾ ಅವರ ಭದ್ರತಾ ಸಿಬ್ಬಂದಿ ಹಾಗೂ ಪಿಎಗಳು ತೆಗೆದುಕೊಳ್ತಿದ್ದಾರೆ ಎಂದು ಆರೋಪಿಸಿದ್ದರು.

ಇತ್ತ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್​ ನಾಯಕರಾದ ಗುಲಾಂ ಮೊಹಮ್ಮದ್​ ಸರೂರಿ, ಹಾಜಿ ಅಬ್ದುಲ್​ ರಶೀದ್​, ಮೊಹಮ್ಮದ್​ ಅಮಿನ್​ ಭಟ್​, ಗುಲ್ಜಾರ್​​ ಅಹ್ಮದ್​ ವಾನಿ, ಚೌಧರಿ ಅಕ್ರಂ ಮೊಹಮ್ಮದ್​ ಹಾಗೂ ಸಲ್ಮಾನ್​ ನಿಜಾಮಿ ಅವರು ಗುಲಾಂ ನಬಿ ಆಜಾದ್​​ ನಿರ್ಧಾರವನ್ನು ಬೆಂಬಲಿಸಿ ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ .

ಇದನ್ನು ಓದಿ : BIG BREAKING : ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವಕ್ಕೆ ಗುಲಾಂ ನಬಿ ಆಜಾದ್​ ರಾಜೀನಾಮೆ

ಇದನ್ನೂ ಓದಿ : Another jolt to Congress: ಕಾಂಗ್ರೆಸ್​ಗೆ ಮತ್ತಷ್ಟು ಆಘಾತ: ಗುಲಾಂ ನಬಿ ಆಜಾದ್​ ಬೆನ್ನಲ್ಲೇ ಮತ್ತೆ ಐವರು ‘ಕೈ’ ನಾಯಕರಿಂದ ರಾಜೀನಾಮೆ

Rahul Gandhi is actually a blessing for BJP: Himanta Biswa on Ghulam Nabi Azad quitting Congress

Comments are closed.