Yeddyurappa should resign :ಸಂಸದೀಯ ಸ್ಥಾನಕ್ಕೆ ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ನೀಡಬೇಕು : ಯತ್ನಾಳ್​ ಆಗ್ರಹ

ಬೆಂಗಳೂರುYeddyurappa should resign :ಕಾಂಗ್ರೆಸ್​ನವರಿಗೆ ಎಲ್ಲಿ ಯತ್ನಾಳ್​ ಸಿಎಂ ಆಗಿ ಬರ್ತಾರೋ ಎಂಬ ಭಯವಿದೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ. ವಿಧಾನಸೌಧದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾದರೆ ಒಬ್ಬರು ಜೈಲಿಗೆ ಹೋಗಬೇಕು, ಕಾಡಿಗೆ ಮತ್ತೊಬ್ಬರು ಹೋಗಬೇಕಾಗುತ್ತದೆ. ಕಾಂಗ್ರೆಸ್​ಗೆ ಬೊಮ್ಮಾಯಿ ಭಯವಿಲ್ಲ. ಅವರಿಗೆ ಯಡಿಯೂರಪ್ಪ ಭಯ ಕೂಡ ಇಲ್ಲ. ಕಾಂಗ್ರೆಸ್​​ಗೆ ನನ್ನ ಭಯವಿದೆ. ತಿಹಾರ್​ ಜೈಲಿನಲ್ಲಿ ಯಾವ ಬಂಡೆನೂ ಇಲ್ಲ, ಪಂಡೆನೂ ಇಲ್ಲ ಎಂದು ಹೇಳಿದ್ದಾರೆ.


ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ವಿರುದ್ಧ ಎಫ್​ಐಆರ್​​ಗೆ ಕೋರ್ಟ್​ ಆದೇಶ ನೀಡಿರುವ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಯಾರು ಎಷ್ಟೇ ದೊಡ್ಡ ರಾಜಾಹುಲಿಯಾದರೂ ಸಹ ಕಾನೂನಿನ ಮುಂದೆ ತಲೆಬಾಗಲೇಬೇಕು. ಹಿಂದೊಮ್ಮೆ ಎಲ್​.ಕೆ ಅಡ್ವಾಣಿ ಮೇಲೆ ಆರೋಪ ಕೇಳಿ ಬಂದಿತ್ತು. ಆಗ ತಮ್ಮ ಸ್ಥಾನಕ್ಕೆ ಎಲ್​.ಕೆ ಅಡ್ವಾಣಿ ರಾಜೀನಾಮೆ ನೀಡಿದ್ದರು.ಇವರೇನು ಎಲ್​.ಕೆ ಅಡ್ವಾಣಿ. ವಾಜಪೇಯಿಗಿಂತಾ ದೊಡ್ಡವರಾ..? ಇವರೂ ಎಲ್​.ಕೆ ಅಡ್ವಾಣಿ ರೀತಿಯಲ್ಲಿ ವರ್ತಿಸಬೇಕು. ಆರೋಪ ಎದುರಾಗಿದೆ ಎಂದ ಮೇಲೆ ರಾಜಹುಲಿಯಾಗಲಿ ಅಥವಾ ಇನ್ಯಾರೇ ಆಗಿರಲಿ ಸಂಸದೀಯ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ .

ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ಸಲ್ಲಿಸಿದ್ದ ದೂರಿನ ಅನ್ವಯ ಹೈಕೋರ್ಟ್ ಬಿಎಸ್ಐ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಆದೇಶ ನೀಡಿದೆ , ಈ ಹಿಂದೆ ಸಾಮಾಜಿಕ ಕಾರ್ಯಕರ್ತ ಟಿ,ಜೆ ಅಬ್ರಾಹಂ ಸಲ್ಲಿಸಿದ್ದ ಅರ್ಜಿಯನ್ನು 2021ರ ಜುಲೈ ತಿಂಗಳಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದು ಮಾಡಿತ್ತು. ಆದರೆ ವಿಶೇಷ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಅಬ್ರಾಹಂ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನು ಓದಿ : crores spent on various hospitality programs :ತಲೆತಿರುಗಿಸುತ್ತೆ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮದ ವೇಳೆ ಸರ್ಕಾರದಿಂದಾದ ಖರ್ಚು

ಇದನ್ನೂ ಓದಿ : Asad Rauf died : ಮಾಜಿ ಐಸಿಸಿ ಅಂಪೈರ್, ಪಾಕಿಸ್ತಾನದ ಅಸಾದ್ ರೌಫ್ ಹೃದಯಾಘಾತದಿಂದ ನಿಧನ

BS Yeddyurappa should resign : Yatnal

Comments are closed.