ಮನೆ‌ ಮಾರಾಟಕ್ಕೆ ಮುಂದಾದ್ರು ರಮೇಶ್ ಜಾರಕಿಹೊಳಿ ..! ಸಂಕಷ್ಟಕ್ಕೆ ಕಾರಣವಾಯ್ತಾ ಮನೆಯ ವಾಸ್ತು..?

ಬೆಂಗಳೂರು : ಮಾಜಿ‌ ಸಚಿವ ರಮೇಶ್ ಜಾರಕಿಹೊಳಿಗೆ ಸಿಡಿ ಸಂಕಷ್ಟ ಎದುರಾಗಿದೆ. ಸಚಿವ ಸ್ಥಾನವನ್ನು ಕಳೆದುಕೊಂಡು ರಾಜಕಾರಣದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಇದರ ಬೆನ್ನಲ್ಲೇ ಜಾರಕಿಹೊಳಿ ತಮ್ಮಿಷ್ಟದ ಮನೆಯನ್ನೇ ಮಾರಾಟಕ್ಕಿಟ್ಟಿದ್ದಾರೆ. ಸದಾಶಿವ ನಗರದಲ್ಲಿರುವ ಮನೆಯಲ್ಲಿನ ವಾಸ್ತು ದೋಷವೇ ಇಂದಿನ ಸ್ಥಿತಿಗೆ ಕಾರಣ‌ ಅನ್ನೋ ಕುರಿತ ಚರ್ಚೆಗಳು ಶುರುವಾಗಿದೆ.

ಈಗಾಗಲೇ ರಮೇಶ್ ಜಾರಕಿಹೊಳಿ ಸದಾಶಿವ ನಗರದಲ್ಲಿರುವ ಮನೆ ಬದಲಿಸಿ ಮಲ್ಲೇಶ್ವರದ ಮಂತ್ರಿ ಅಪಾರ್ಟ್ ಮೆಂಟ್ ಗೆ ಶಿಫ್ಟ್ ಆಗಲು ಚಿಂತಿಸಿದ್ದು, ಈ ತಿಂಗಳಲ್ಲಿ ವಾಸಸ್ಥಾನ ಬದಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಸದಾಶಿವನಗರದಲ್ಲಿ ಸಾಹುಕಾರ್ ರಮೇಶ್ ಜಾರಕಿಹೊಳಿ ಕಳೆದೊಂದೂವರೆ ವರ್ಷದ ಹಿಂದೆ ತಮ್ಮ ಪ್ರತಿಷ್ಟೆಗಾಗಿ ಬರೋಬ್ಬರಿ 30 ಕೋಟಿ ರೂಪಾಯಿ ನೀಡಿ ಮನೆಯೊಂದನ್ನು ಖರೀದಿಸಿದ್ದಾರೆ. ಆದ್ರೀಗ ಸಂಕಷ್ಟದಿಂದ ಹೊರಬರಲು ಅದೇ ಮನೆಯನ್ನೇ ಮಾರೋದಕ್ಕೆ ಮುಂದಾಗಿದ್ದಾರೆ.

ಮನೆಯನ್ನು ಪ್ರವೇಶಿಸಿದ ದಿನದಿಂದಲೂ ರಮೇಶ್ ಜಾರಕಿಹೊಳಿ ಅವರಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಮನೆಯ ವಾಸ್ತು ಪರಿಶೀಲಿಸಿದಾಗ ದೋಷ ಇರುವುದಾಗಿ ಜ್ಯೋತಿಷಿಗಳು ಹೇಳಿದ್ದು, ಮನೆ ಬದಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

Comments are closed.