ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

8 ನೇ ಶತಮಾನದಲ್ಲಿ ಆಧುನಿಕತೆಗೆ ಮಾದರಿಯಾಗಿದ್ದ ಗ್ರಾಮದಲ್ಲೀಗ ಒಬ್ಬ ಮನುಷ್ಯನು ವಾಸಿಸುವುದಿಲ್ಲ. ಇಡೀ ಗ್ರಾಮವೇ ಪಾಳುಬಿದ್ದಿದೆ. ಈ ಗ್ರಾಮದ ಹೆಸರು ಕೇಳಿದ್ರೆ ಇಡೀ ರಾಜಸ್ತಾನವೇ ಬೆಚ್ಚಿಬೀಳುತ್ತೆ. ರಾತ್ರಿ ಹೊತ್ತಲ್ಲಿ ಈ ಗ್ರಾಮಕ್ಕೆ ಹೊದವರು ತಿರುಗಿ ಬಂದ ಮಾತೇ ಇಲ್ಲ. ಹಲವು ಭಯಾನಕ ಸಂಗತಿಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ಈ ಗ್ರಾಮವೇ ರಾಜಸ್ತಾನದ ಕುಲಧಾರ (secret kuladhara village ).

ಸುಮಾರು 18 ನೇ ಶತಮಾನ (1762 ರಿಂದ 1820 )ರ ಕಾಲದಲ್ಲಿ ಜೈಸಲ್‌ ಮೇರ್ ನಲ್ಲಿ ಮಹಾರಾವಲ್‌ 2ನೇ ಮೂಲ್‌ ರಾಜ್‌ ಸಿಂಗ್‌ ಆಡಳಿತ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಅವರ ಮಂತ್ರಿಯಾಗಿದ್ದ ಜ್ಸಾಲೀಂ ಸಿಂಗ್ ಪಾಪಾಕೃತ್ಯದಿಂದಾಗಿ ಈ ಕುಲಧಾರ ಗ್ರಾಮಕ್ಕೆ (secret kuladhara village )ಗ್ರಾಮವೇ ಬರಿದಾಗಿ ಹೋಗಿದೆ.

ಮಹಾಮಂತ್ರಿಯಾಗಿದ್ದ ಜ್ಸಾಲೀಂ ಸಿಂಗ್‌ ಪ್ರಜೆಗಳಿಗೆ ಹಿಂಸೆ ನೀಡುತ್ತಿದ್ದ, ಅಲ್ಲದೇ ಸುಂದರ ಯುವತಿಯರು ಈ ಜ್ಸಾಲೀಂ ಸಿಂಗ್‌ ನ ಕಣ್ಣಿಗೆ ಬಿದ್ದರಂತೂ ಮುಗಿದೇ ಹೊಯ್ತು. ನಂತರ ಆ ಯುವತಿಯ ಪರಿವಾರವೇ ಬಂದು ಜ್ಸಾಲೀಂ ಸಿಂಗ್‌ ಬಳಿ ಹುಡುಗಿಯನ್ನು ಒಪ್ಪಿಸಿ ಹಿಂತಿರುಗಬೇಕು. ಇಲ್ಲವಾದ್ರೆ ಆ ಯುವತಿಯ ಪರಿವಾರವೇ ರಾತ್ರೋರಾತ್ರೀ ಆ ಊರನ್ನೇ ಖಾಲಿ ಮಾಡಬೇಕಾದ ಪರಿಸ್ಥಿತಿಯಿತ್ತು.

ಹೀಗಿರುವಾಗ ಒಂದು ದಿನ ಕುಲಧಾರ ಗ್ರಾಮದ ಮುಖ್ಯಸ್ಥನ ಸುಂದರ ಮಗಳು ಜ್ಸಾಲೀಂ ಸಿಂಗ್‌ ಕಣ್ಣಿಗೆ ಬೀಳುತ್ತಾಳೆ. ನಂತರ ಮಂತ್ರಿಯ ಕಾಟ ತಾಳಲಾರದೆ ಕುಲಧಾರ ಮುಖ್ಯಸ್ಥನ ಕುಟುಂಬ ಹಾಗೂ ಅಲ್ಲಿನ ಇಡೀ ಗ್ರಾಮದ ಜನರೇಲ್ಲರು ಈ ಮಂತ್ರಿಯಿಂದ ತಮ್ಮನ್ನು ತಾವು ರಕ್ಷಿಸಿ ಕೋಳ್ಳಲು ಗ್ರಾಮವನ್ನೇ ತೋರೆಯುವ ನಿರ್ಧರವನ್ನು ಮಾಡಿದರು. ಒಂದು ದಿನ ರಾತ್ರಿ ಇಡೀ ಕುಲಧಾರ ಗ್ರಾಮವೇ (secret kuladhara village ) ಕಣ್ಣಿರು ಇಡುತ್ತಾ ಮಂತ್ರಿ ಜ್ಸಾಲೀಂ ಸಿಂಗ್‌ ಗೆ ಹಿಡಿ ಶಾಪ ಹಾಕುತ್ತಾ ಅತ್ತು ಕರೆದು ಅಲ್ಲಿನ ಗ್ರಾಮ ದೇವತೆಯನ್ನು ನೆನೆದು ಸುರಂಗ ಮಾರ್ಗಮೂಲಕ ಊರು ತೊರೆಯಲು ನಿರ್ದಾರ ಮಾಡಿ ಅರ್ಧ ಸುರಂಗದಲ್ಲಿ ಇರುವಾಗಲೇ ಭೂಕಂಪ ಸಂಭವಿಸುತ್ತದೆ. ಈ ಸುರಂಗದೊಳಗೆ ಇದ್ದ ಜನರೆಲ್ಲ ಮೃತಪಡುತ್ತಾರೆ.

ಅಂದು ಮೃತಪಟ್ಟ ಜನರು ಇಂದು ಕುಲಧಾರದಲ್ಲಿ (secret kuladhara village )ಆತ್ಮಗಳಾಗಿ ಸಂಚರಿಸುತ್ತಿದ್ದಾರೆ. ಗೆಜ್ಜೆ ಶಬ್ಧ, ಚೀರಾಟ, ನರಳಾಟ ಇದೇ ಜನರು ಕೂಗೂ ಇಂದಿಗೂ ಅಲ್ಲಿ ಕೇಳುತ್ತದೆ ಅನ್ನುವುದು ಅಲ್ಲಿನ ಆಸುಪಾಸಿನ ಗ್ರಾಮದ ಜನರ ನಂಬಿಕೆ. ಈ ಭೂತ ಪ್ರೇತದ ವಿಚಾರದ ಬಗ್ಗೆ ಸತ್ಯಂಶ ತಿಳಿಯಲು ಒಂದು ಯುವಕರ ತಂಡ ಕುಲಧಾರದಲ್ಲಿ ಒಂದು ರಾತ್ರಿ ಉಳಿಯಲು ಹಾಗೂ ನೆಗೆಟಿವ್‌ ಎನರ್ಜಿ ಡಿಟೆಟಟ್ಕರ್ ರಿಂದ ಪತ್ತೆ ಹಚ್ಚಲು ಸಿದ್ಧವಾಯಿತು.

ಇದನ್ನೂ ಓದಿ : ಕೈಲಾಸ ಪರ್ವತವನ್ನೇರಿದ್ರೆ ಹೆಚ್ಚುತ್ತಂತೆ ವಯಸ್ಸು : ಕೈಲಾಸ ರಹಸ್ಯ ನಿಮಗೆ ಗೊತ್ತಾ

ಈ ತಂಡದ ಹಲವು ಸದಸ್ಯರಿಗೆ ಚಿತ್ರ ವಿಚಿತ್ರ ಸಂಗತಿಗಳು ಎದುರಾದವು. ರಾತ್ರಿ ಗೆಜ್ಜೆಯ ಶಬ್ಧ ಕೇಳಿತು ಅಲ್ಲದೇ ಹೆಂಗಸರು ಮಕ್ಕಳ ಒಡಾಟವನ್ನು ಈ ತಂಡದ ಕೆಲ ಸದಸ್ಯರು ಕಂಡಂತೆ ಆಯಿತು. ಅಲ್ಲದೇ ನಮ್ಮನು ಯಾರೋ ಹಿಂಬಾಲಿಸಿದ ರೀತಿ ಅನಿಸಿತು. ನಮ್ಮ ಭುಜದ ಮೇಲೆ ಕೈ ಇಟ್ಟಂತೆ ಹಾಗೂ ವಿಚಿತ್ರ ನರಳಾಟಗಳು ಇಲ್ಲಿ ತೋರಿ ಬಂತು ಎಂದು ಈ ತಂಡದ ಸದಸ್ಯರು ತಿಳಿಸಿದರು ಅಲ್ಲದೇ ಇಲ್ಲಿ ನೆಗೆಟಿವ್‌ ಎನರ್ಜಿ ಇರುವುದು ಅವರ ಉಪಕರಣದ ಮೂಲಕ ಸತ್ಯ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Tirupathi Secrets : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

secret kuladhara village went dark night not came back

Comments are closed.