Car Accident : ಚಿತ್ರದುರ್ಗದಲ್ಲಿ ಭೀಕರ ಅಪಘಾತ : ಕುಂದಾಪುರ ಮೂಲದ ಮೂವರ ದುರ್ಮರಣ

ಚಿತ್ರದುರ್ಗ : ಕಾರು ಮರಕ್ಕೆ ಢಿಕ್ಕಿಯಾಗಿ (Car Accident 3 Death) ಕುಂದಾಪುರ ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಜೋಡಿ ಶ್ರೀರಂಗಾಪುರದ ಬಳಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಕುಂದಾಪುರದ ನಿವಾಸಿಗಳಾದ ಗೀತಾ (32 ವರ್ಷ ), ಶಾರದಾ (60 ವರ್ಷ ) ಮತ್ತು ಬಾಲಕಿ ಧೃತಿ (05 ವರ್ಷ ) ಎಂಬವರೇ ಮೃತ ದುರ್ದೈವಿಗಳು. ಕುಂದಾಪುರದಿಂದ ಒಂದೇ ಕುಟುಂಬದ ಆರು ಮಂದಿ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ತಡರಾತ್ರಿಯ ವೇಳೆಯಲ್ಲಿ ಕಾರು ಚಿತ್ರದುರ್ಗ ಜಿಲ್ಲೆಯ ಜೋಡಿ ಶ್ರೀರಂಗಾಪುರದ ಬಳಿಯಲ್ಲಿ ತೆರಳುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿಯಾಗಿದೆ.

ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉಳಿದಂತೆ ಕಾರಿನಲ್ಲಿದ್ದ ನಾಗೇಶ (65 ವರ್ಷ ), ದಯಾನಂದ (66 ವರ್ಷ ), ಸುಧೀಂದ್ರ (35 ವರ್ಷ) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು,ಗಾಯಾಳುಗಳನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿಲಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

ಇದನ್ನೂ ಓದಿ : ಹುಂಡೈ ಬಾಯ್ಕಾಟ್‌ಗೆ ಅಭಿಯಾನ; ಪಾಕಿಸ್ತಾನದ ಹುಂಡೈ ಘಟಕದ ವಿರುದ್ಧ ಆಕ್ರೋಶ, ದೇಶವಿರೋಧಿಯಾಯಿತೇ ಹುಂಡೈ?

ಇದನ್ನೂ ಓದಿ : ಲತಾ ಮಂಗೇಶ್ಕರ್​​ ಪಾರ್ಥೀವ ಶರೀರಕ್ಕೆ ಶಾರೂಕ್​ ಉಗುಳಿದ್ದಾರೆಂದು ಹೇಳಿ ಪೇಚಿಗೆ ಸಿಲುಕಿದ ಬಿಜೆಪಿ ನಾಯಕ

(car accident in Chitra Durga, 3 persons death of a Kundapur based)

Comments are closed.