ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ಕೊಟ್ಟ ಖ್ಯಾತ ಸಂಗೀತ ನಿರ್ದೇಶ ನಾದಬ್ರಹ್ಮ ಹಂಸಲೇಖ

ವಿಶ್ವವಿಖ್ಯಾತ ಮೈಸೂರು ದಸರಾ (world Famous Mysore Dasara) ಮಹೋತ್ಸವಕ್ಕೆ ಚಾಲನೆ ದೊರೆತಿದೆ. ನಾಡಿನ ಅದಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ (Hamsalekha) ಅವರು ಪುಷ್ಪಾರ್ಚನೆಯನ್ನು ಮಾಡಲು ಮೂಲಕ ಚಾಲನೆ ನೀಡಿದ್ದಾರೆ.

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ (world Famous Mysore Dasara) ಮಹೋತ್ಸವಕ್ಕೆ ಚಾಲನೆ ದೊರೆತಿದೆ. ನಾಡಿನ ಅದಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ (Hamsalekha) ಅವರು ಪುಷ್ಪಾರ್ಚನೆಯನ್ನು ಮಾಡಲು ಮೂಲಕ ಚಾಲನೆ ನೀಡಿದ್ದಾರೆ.

ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಅರಮನೆ ನಗರಿ ಮೈಸೂರು ನವವಧುವಿನಂತೆ ಸಿಂಗಾರಗೊಂಡಿದೆ. ಇಂದು ನಾಡಹಬ್ಬಕ್ಕೆ ಚಾಲನೆ ದೊರೆತಿದ್ದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಸಂಸದ ಪ್ರತಾಪ್‌ ಸಿಂಹ, ಸಚಿವರಾದ ಕೆ.ಎಚ್ ಮುನಿಯಪ್ಪ, ಕೆಜೆ ಜಾರ್ಜ್‌, ಡಾ.ಎಚ್‌ಸಿ ಮಹದೇವಪ್ಪ ಉಪಸ್ಥಿತರಿದ್ದರು.

Famous music director Nada‌ Brahma Hamsalekha launched the world famous Mysore Dasara Celebration
Image Credit to Original Source

ಶಾಸಕರಾದ ಜಿಟಿ ದೇವೇಗೌಡ, ಜಿಡಿ ಹರೀಶ್‌ ಗೌಡ, ರವಿಶಂಕರ್‌ ಎ ಆರ್.‌, ಅನಿಲ್‌ ಚಿಕ್ಕಮಾದು, ಕೃಷ್ಣಮೂರ್ತಿ ಶ್ರೀವತ್ಸ ತನ್ವಿರ್‌ ಸೇಠ್‌, ಮರಿತಿಬ್ಬೇಗೌಡ, ಮೈಸೂರು ಮೇಯದ್‌ ಶಿವಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

ಅರಮನೆಯ ಅಂಗಳದಲ್ಲಿ ಮೈಸೂರು ಅರಸರಾದ ಯದುವೀರ್‌ ಅವರ ಖಾಸಗಿ ದರ್ಬಾರ್‌ ಕಳೆಗಟ್ಟಿದೆ. ಅಲ್ಲದೇ ಸಂಜೆ ಅರಮನೆ ವೇದಿಕೆಯಲ್ಲಿ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ. ಇಂದಿನಿಂದ ಒಂಬತ್ತು ದಿನಗಳ ಕಾಲ ನವದುರ್ಗೆಯರಿಗೆ ವಿಶೇಷಪೂಜೆ ನಡೆಯಲಿದೆ. ಬೆಳಗ್ಗೆ 3.17 ರಿಂದಲೇ ತಾಯಿ ಚಾಮುಂಡೇಶ್ವರಿಗೆ ಪೂಜೆ, ಪುನಸ್ಕಾರಗಳು ನೆರವೇರಲಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ 4 ದಿನ ವಿದ್ಯುತ್‌ ಕಡಿತ : ಯಾವ ಏರಿಯಾದಲ್ಲಿ, ಯಾವ ದಿನ ಕರೆಂಟ್‌ ಇರಲ್ಲ ? ಇಲ್ಲಿದೆ ಸಂಪೂರ್ಣ ಮಾಹಿತಿ

ಮೈಸೂರು ದಸರಾ ಅಕ್ಟೋಬರ್‌ 15 ರಿಂದ ಆರಂಭಗೊಂಡಿದ್ದು, ಅಕ್ಟೋಬರ್‌ 24ರ ವರೆಗೆ ನಡೆಯಲಿದೆ. ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆಯ ಮೂಲಕ ಚಾಲನೆ ನೀಡಲಾಗಿದೆ. ದಸರಾದಲ್ಲಿ ಜಂಬೂಸವಾರಿ ಪ್ರಮುಖ ಆಕರ್ಷಣೆಯಾಗಿದೆ. ಮೈಸೂರು ನಗರವನ್ನು ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ದೀಪಾಲಂಕಾರ, ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ಆಹಾರ ಮೇಳ, ಕುಸ್ತಿ ದಸರಾದ ಪ್ರಮುಖ ಆಕರ್ಷಣೆಯಾಗಿದೆ.

Famous music director Nada‌ Brahma Hamsalekha launched the world famous Mysore Dasara Celebration
Image Credit to Original Source

ಮೈಸೂರು ದಸರಾದ ಮೊದಲ ದಿನ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವ, ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ, ಸ್ಕೌಟ್ಸ್‌ ಆಂಡ್ ಗೈಡ್ಸ್‌ ಮೈದಾನದಲ್ಲಿ ಆಹಾರ ಮೇಳ, ಸೆನೆಟ್‌ ಭವನದಲ್ಲಿ ಯೋಗ ದಸರಾ, ದೇವರಾಜ ಅರಸು ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ, ಸಯ್ಯಾಜಿರಾವ್‌ ರಸ್ತೆಯಲ್ಲಿ ದೀಪಲಂಕಾರ, ವಸ್ತು ಪ್ರದರ್ಶನ, ಅಖಿಲ ಭಾರತ ಹಾಗೂ ರಾಜ್ಯಮಟ್ಟದ ಚಿತ್ರ ಶಿಲ್ಪಕಲಾ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ : ಪತಿ ತನ್ನ ಪತ್ನಿಯ ಪೋನ್‌ ಸಂಭಾಷಣೆ ರೆಕಾರ್ಡ್‌ ಮಾಡುವುದು ಅಪರಾಧ : ಹೈಕೋರ್ಟ್‌ ಮಹತ್ವದ ತೀರ್ಪು

ಇಂದು ಸಂಜೆ 7  ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಇಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ.ಪದ್ಮಮೂರ್ತಿ ಅವರಿಗೆ ಸಂಗೀತ ವಿದ್ವಾನ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ದಸರಾ ಆಕರ್ಷಣೆ ಜಂಬೂ ಸವಾರಿ

ನಾಡಹಬ್ಬ ದಸರಾದಲ್ಲಿ ಜಂಬೂ ಸವಾರಿ ಪ್ರಮುಖ ಆಕರ್ಷಣೆ ಆಗಲಿದೆ. ಅರಮನೆ ಆವರಣದಿಂದ ಹೊರಡುವ ಜಂಬೂ ಸವಾರಿ ಮೆರವಣಿಗೆಯು ಬನ್ನಿ ಮಂಟಪದ ವರೆಗೆ ಸಾಗುತ್ತದೆ. ಜಂಬೂ ಸವಾರಿಗಾಗಿ ಈಗಾಗಲೇ ಗಜಪಡೆ ತಾಲೀಮು ನಡೆಸಿವೆ.

ಇದನ್ನೂ ಓದಿ : ನಿಮ್ಮ ಹೆಣ್ಣು ಮಗಳ ಮದುವೆಗೆ ಸಿಗುತ್ತೆ 25 ಲಕ್ಷ ರೂ. : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ

ಈ ಬಾರಿ ಅಭಿಮನ್ಯು ನೇತೃತ್ವದಲ್ಲಿಯೇ ಜಂಬೂ ಸವಾರಿ ನಡೆಯಲಿದೆ. ವಿಜಯ, ವರಲಕ್ಷ್ಮೀ, ಅರ್ಜುನ, ಧನಂಜಯ, ಮಹೇಂದ್ರ, ಭೀಮ ಸೇರಿ ಹಲವರು ಆನೆಗಳು ಈಗಾಗಲೇ ಮೈಸೂರಿನ ಅರಣ್ಯ ಭವನದಲ್ಲಿ ಬೀಡುಬಿಟ್ಟಿದೆ. ಅದ್ರಲ್ಲೂ ರೋಹಿತ್‌ ಹಾಗೂ ಕಂಜನ್‌, ಲಕ್ಷ್ಮೀ, ಹಿರಣ್ಯ ಆನೆಗಳಿಗೆ ಇದು ಮೊದಲ ದಸರಾ ಆಗಿದೆ.

Famous music director Nada‌ Brahma Hamsalekha launched the world famous Mysore Dasara Celebration

Comments are closed.