ನಿನ್ನೆ ಪ್ರೇಮ‌ ವಿವಾಹ, ಇಂದು ಪೋಷಕರು ಆತ್ಮಹತ್ಯೆ ..!!

ರಾಮನಗರ : ಅವರಿಬ್ಬರೂ ಪ್ರೀತಿ ಪೋಷಕರ ವಿರೋಧದ ನಡುವೆ ಯೇ ಮದುವೆಯಾಗಿದ್ದರು. ಎಲ್ಲವೂ ಸರಿಯಾಯ್ತು ಅನ್ನೋ ಹೊತ್ತಲ್ಲೇ ನವ ವಧುವರರಿಗೆ ಬರಸಿಡಿಲೇ ಬಂದೆರಗಿದೆ. ಅಂತರ್ಜಾತಿ ವಿವಾಹದಿಂದ ಮನನೊಂದ ಪೋಷಕರು ಇಂದು ನೇಣಿಗೆ ಕೊರಳೊಡ್ಡಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತೆಂಕನಹಳ್ಳಿದೊಡ್ಡಿ ಗ್ರಾಮದ ರಮೇಶ್​ (50‌ ವರ್ಷ ) ಹಾಗೂ ಶೈಲಜಾ (42 ವರ್ಷ ) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ಪೋಷಕರು.  ಮೃತ ರಮೇಶ್ ಅವರ ಪುತ್ರಿ ಶಿಲ್ಪ ತಮ್ಮದೇ ಗ್ರಾಮದ ಪುನೀತ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಇಬ್ಬರ ಮದುವೆಗೆ ಪೋಷಕರ ವಿರೋಧ ಎದುರಾಗಿತ್ತು‌. ಆದ್ರೂ ಪ್ರೇಮಿಗಳು ನಿನ್ನೆ ಮದುವೆಯಾಗಿದ್ದಾರೆ.

ಶಿಲ್ಪಾ ಅವರ ತಂದೆ ಹಲವು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಗಳ ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯ್ತಿಯನ್ನೂ ಕೂಡ ಮಾಡಿಸಿದ್ದಾರೆ. ಆದರೂ ಪೋಷಕರ ವಿರೋಧ ನಡುವಲ್ಲೇ ಪ್ರೇಮ ವಿವಾಹವಾಗಿರುವ ವಿಷಯ ‌ತಿಳಿದು ಶಿಲ್ಪಾ ತಂದೆ ರಮೇಶ್ ಹಾಗೂ ತಾಯಿ ಶೈಲಜಾ ತೋಟದಲ್ಲಿರುವ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ‌.

ಪ್ರೇಮಿಗಳು ಒಂದೇ ಗ್ರಾಮದವರಾಗಿದ್ದ ಕಾರಣಕ್ಕೆ ಗ್ರಾಮಸ್ಥರು ಗುಟ್ಟಾಗಿ ಅಂತ್ಯಕ್ರೀಯ ಮಾಡಿ ಮುಗಿಸಲು ಮುಂದಾಗಿದ್ದರು. ಆದರೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಂ.ಕೆ.ದೊಡ್ಡಿ ಠಾಣೆಯ ಪೊಲೀಸರು ಪ್ರಕರಣ‌ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Comments are closed.