ರಾಜ್ಯ ರಾಜಕೀಯಕ್ಕೆ ಪ್ರತಾಪ್‌ ಸಿಂಹ; ಸುಳಿವು ನೀಡಿದ ಮಾಜಿ ಸಂಸದ

Pratap Simha to Karnataka Politics: ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ರಾಜ್ಯ ರಾಜಕೀಯಕ್ಕೆ ಮರಳುವ ಇಚ್ಛೆಯನ್ನು ಹೊರಹಾಕಿದ್ದಾರೆ. ಮೈಸೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಈಗ ಕೇಂದ್ರ ರಾಜಕೀಯದಲ್ಲಿ ಇಲ್ಲ, ರಾಜ್ಯದಲ್ಲಿಯೇ ಇರಬೇಕಲ್ಲವೇ?” ಎನ್ನುವ ಮೂಲಕ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದ ಮೇಲೆ ಕಣ್ಣು, ಸಿದ್ಧತೆ ಆರಂಭ:
ಮೈಸೂರಿನ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಲು ಈಗಿನಿಂದಲೇ ಪ್ರತಾಪ್ ಸಿಂಹ‌ ಅವರು ತಯಾರಿ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. ತಾವು ಸಂಸದರಾಗಿದ್ದ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಒಳಗೊಂಡ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದರು. “ಚಾಮರಾಜ ಸ್ನೇಹ ಬಳಗ”ದ ಮೂಲಕ ಸಾರ್ವಜನಿಕರನ್ನು ತಲುಪುವ ಕಾರ್ಯಕ್ಕೆ ಅವರು ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಒಟ್ಟಾಗಿ ಕೆಲಸ ಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸರ್ಕಾರದ ವಿರುದ್ಧ ವಾಗ್ದಾಳಿ:
ಸುದ್ದಿಗೋಷ್ಠಿಯಲ್ಲಿ ವಿವಿಧ ಪ್ರಚಲಿತ ವಿದ್ಯಮಾನಗಳ ಕುರಿತು ಪ್ರತಾಪ್ ಸಿಂಹ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು:

ಬಳ್ಳಾರಿ ಘಟನೆ ಮತ್ತು ಗನ್ ಸಂಸ್ಕೃತಿ: ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಶಾಸಕ ಭರತ್ ರೆಡ್ಡಿ ವಿರುದ್ಧ ಕಿಡಿಕಾರಿದರು. “ಹಿರಿಯ ನಾಯಕ ಜನಾರ್ದನ ರೆಡ್ಡಿ ಅವರನ್ನು ಏಕವಚನದಲ್ಲಿ ನಿಂದಿಸುವುದು ಸರಿಯಲ್ಲ. ಮೊದಲ ಬಾರಿ ಶಾಸಕರಾದವರಿಗೆ ದುಡ್ಡಿನ ಮದ ಇರಬಾರದು. ಗನ್ ಮ್ಯಾನ್ ಇರುವುದು ರಕ್ಷಣೆಗೇ ಹೊರತು ಜನರ ಮೇಲೆ ಗುಂಡು ಹಾರಿಸುವುದಕ್ಕಲ್ಲ. ಒಬ್ಬ ಕಾರ್ಯಕರ್ತನ ಸಾವಿಗೆ ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

Exclusive Vedio : ಕುಂದಾಪುರ : ಕೆಎಸ್‌ಆರ್‌ಟಿಸಿ ಬಸ್‌ – ಟಿಪ್ಪರ್‌ ಅಪಘಾತ : ಅಷ್ಟಕ್ಕೂ ಆಗಿದ್ದೇನು ? ಇಲ್ಲಿದೆ ಸಿಸಿ ಕ್ಯಾಮೆರಾ ವಿಡಿಯೋ

ಕೋಗಿಲು ಬಡಾವಣೆ ವಿವಾದ: ಕೆರೆ ಅತಿಕ್ರಮಣ ತೆರವುಗೊಳಿಸಿದ ಜಾಗದಲ್ಲಿ ಮತ್ತೆ ಮನೆ ನೀಡುವ ಸರ್ಕಾರದ ನಿರ್ಧಾರವನ್ನು ಅವರು ಪ್ರಶ್ನಿಸಿದರು. “ಕೇರಳದ ನಾಯಕರಾದ ಕೆ.ಸಿ. ವೇಣುಗೋಪಾಲ್ ಅಥವಾ ಪಿಣರಾಯಿ ವಿಜಯನ್ ಹೇಳಿದರೆಂದು ನಮ್ಮ ರಾಜ್ಯದ ಜಾಗವನ್ನು ಅತಿಕ್ರಮಣಕಾರರಿಗೆ ನೀಡುವುದು ಯಾವ ಕಾನೂನಿನಲ್ಲಿದೆ? ಇದು ಕೇವಲ ವೋಟ್ ಬ್ಯಾಂಕ್ ರಾಜಕಾರಣ,” ಎಂದು ಸಿಂಹ ಟೀಕಿಸಿದರು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories