kodimath shree swamiji :ಕೊರೊನಾ ಇಲ್ಲಿಗೆ ಮುಗಿದಿಲ್ಲ, ರಾಷ್ಟ್ರಮಟ್ಟದಲ್ಲಿ ಅವಘಡ -ಕೋಡಿಮಠದ ಶ್ರೀ ಭವಿಷ್ಯ

ಹಾವೇರಿ :ಸದಾ ಭವಿಷ್ಯವಾಣಿಗಳನ್ನು ನುಡಿಯುವ ಮೂಲಕವೇ ಪ್ರಸಿದ್ಧಿಯನ್ನು ಪಡೆದಿರುವ ಕೋಡಿಮಠದ ಡಾ.ಶಿವಾನಂದ ಶಿವಯೋಗೀಂದ್ರಶ್ರೀ ಇದೀಗ ಮತ್ತೊಂದು ಆಘಾತಕಾರಿ ಭವಿಷ್ಯವಾಣಿಯನ್ನು ನುಡದಿದ್ದಾರೆ. ಆಶ್ವೀಜದಿಂದ ಸಂಕ್ರಾಂತಿಯ ಒಳಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಅವಘಡ ಸಂಭವಿಸಲಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗೀಂದ್ರಶ್ರೀ (kodimath shree swamiji) ಹೇಳಿದ್ದಾರೆ.

ಕೊರೊನಾ ಇನ್ನಷ್ಟು ರೂಪಾಂತರಗಳನ್ನು ಹೊಂದುತ್ತಿದೆ. ಸಂಶಯ, ಅಸಹನೆ, ದ್ವೇಷ ಹಾಗೂ ರಾಜಕೀಯ ಕಲಹಗಳು ಇನ್ನಷ್ಟು ಹೆಚ್ಚಾಗಲಿವೆ ಎಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಕೋಡಿಮಠದ ಡಾ.ಶಿವಾನಂದ ಶಿವಯೋಗೀಂದ್ರಶ್ರೀ ಹೇಳಿದ್ದಾರೆ. ಈ ಹಿಂದೆ ವರುಣನ ಅಬ್ಬರದ ಬಗ್ಗೆಯೂ ಕೋಡಿಮಠದ ಡಾ. ಶಿವಾನಂದ ಶಿವಯೋಗೀಂದ್ರ ಶ್ರೀ ನಿಖರವಾದ ಭವಿಷ್ಯವನ್ನೇ ನುಡಿದಿದ್ದರು.ಧಾರವಾಡದಲ್ಲಿ ಈ ವಿಚಾರವಾಗಿ ಮಾತನಾಡಿದ್ದ ಅವರು ರಾಜ್ಯದಲ್ಲಿ ವರುಣನ ಅಬ್ಬರ ಇಲ್ಲಿಗೆ ಮುಗಿದಿಲ್ಲ. ಮಳೆಯ ಕಾಟ ಇನ್ನೂ ಮುಂದುವರಿಯುತ್ತದೆ.ಪ್ರಕೃತಿ ವಿಕೋಪವಾಗಿದೆ. ಅನಾಹುತಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲುವ ಮಾತೇ ಇಲ್ಲ ಎಂದು ಹೇಳಿದ್ದರು. ಠದ ಸ್ವಾಮೀಜಿ ಭವಿಷ್ಯ ನುಡಿದಿದ್ದರು.

ಕಾರ್ತಿಕ ಕಳೆಯುವವರೆಗೂ ಮಳೆ, ಅನಾಹುತಗಳು ಹೆಚ್ಚಾಗುತ್ತದೆ ಎಂದಿದ್ದ ಕೋಡಿಮಠದ ಶಿವಯೋಗೀಂದ್ರ ಶ್ರೀ ಸಂಕ್ರಾಂತಿಯವರೆಗೂ ಮಳೆ ಇರಲಿದೆ ಎಂದು ಹೇಳಿದ್ದರು.
ಕೋಲಾರ ತಾಲೂಕು ಲಕ್ಷ್ಮೀ ಸಾಗರ ಎಂಬ ಗ್ರಾಮದಲ್ಲಿಯೂ ಈ ಹಿಂದೆ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು ಮುಂದಿನ ಕಾರ್ತಿಕ ಮಾಸದವರೆಗೆ ಜಲಗಂಡಾತರ ಕಾದಿದೆ. ಅಶುಭ ನುಡಿಗಳು ಈಗಲೇ ಬೇಡ. ಕಾರ್ತಿಕ ಮಾಸ ಕಳೆದ ನಂತರ ಎಲ್ಲವನ್ನೂ ಹೇಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದಿದ್ದರು.

ಇದನ್ನು ಓದಿ: Gangrape Instagram Friend: ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ ಗೆಳೆಯ

ಇದನ್ನೂ ಓದಿ : CM Basavaraj Bommai Change : ಸಂಕ್ರಾಂತಿಗೂ ಮುನ್ನ ಸಿಎಂ ಬದಲಾವಣೆ : ಮುಖ್ಯಮಂತ್ರಿ ಆಯ್ಕೆಗೆ ಬರ್ತವ್ರೇ ಅಮಿತ್ ಶಾ

ಇದನ್ನೂ ಓದಿ : student suicide : ಸಹೋದರಿಯರೇ ನನ್ನನ್ನು ಕ್ಷಮಿಸಿ ಎಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ..!

ಇದನ್ನೂ ಓದಿ : Mujungavu temple : ಈ ಕಲ್ಯಾಣಿಯಲ್ಲಿ ಸ್ನಾನ ಮಾಡಿದ್ರೆ ಚರ್ಮ ರೋಗಕ್ಕೆ ಮುಕ್ತಿ !

Rain, Politics and Omicron Prediction from kodimath shree swamiji at Ranebennur

Comments are closed.