Minister Prabhu Chavan:‘ಜಾಮೀನಿನ ಮೇಲೆ ಹೊರಗಿರುವವರಿಂದ ಎಂತಹ ಭಾರತ್​ ಜೋಡೋ ನಿರೀಕ್ಷಿಸಬಹುದು’ : ಸಚಿವ ಪ್ರಭು ಚವ್ಹಾಣ್​ ವ್ಯಂಗ್ಯ

ಬೀದರ್​ : Minister Prabhu Chavan :ದೇಶದಲ್ಲಿ ತನ್ನ ಅಸ್ತಿತ್ವ ಕಡಿಮೆಯಾಗುತ್ತಿದೆ ಎಂಬ ಅರಿವಿನಲ್ಲಿರುವ ಕಾಂಗ್ರೆಸ್​ ಪಕ್ಷವು ಹೇಗಾದರೂ ಮಾಡಿ ಮತ್ತೊಮ್ಮೆ ಎಲ್ಲಾ ಕಡೆಗಳಲ್ಲಿ ಅಧಿಕಾರಕ್ಕೆ ಬರಬೇಕೆಂದು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಿದೆ. ಎಐಸಿಸಿ ಅಧ್ಯಕ್ಷ ಚುನಾವಣೆ, ಭಾರತ್​ ಜೋಡೋ ಯಾತ್ರೆ ಹೀಗೆ ಅನೇಕ ಕಾರ್ಯಗಳನ್ನು ಕಾಂಗ್ರೆಸ್ ಮಾಡುತ್ತಿದ್ದು ಬಿಜೆಪಿಗೆ ಠಕ್ಕರ್​ ನೀಡುವ ಹುಮ್ಮಸ್ಸಿನಲ್ಲಿದೆ. ಇಂದು ಸೋನಿಯಾ ಗಾಂಧಿ ಕೂಡ ಮಂಡ್ಯದಲ್ಲಿ ರಾಹುಲ್​ ಗಾಂಧಿಯ ಭಾರತ್​ ಜೋಡೋ ಯಾತ್ರೆಗೆ ಸಾಥ್​ ನೀಡಿದ್ದಾರೆ.ಎರಡು ದಿನಗಳ ವಿರಾಮದ ಬಳಿಕ ರಾಜ್ಯದಲ್ಲಿ ಮತ್ತೆ ಭಾರತ್​ ಜೋಡೋ ಯಾತ್ರೆ ಆರಂಭಗೊಂಡಿದ್ದು 15 ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಈ ಎಲ್ಲದರ ನಡುವೆ ಸಚಿವ ಪ್ರಭು ಚವ್ಹಾಣ್​​ ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ಬಗ್ಗೆ ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಕೂಡ ಭಾಗಿಯಾಗಿರುವ ವಿಚಾರವಾಗಿ ಬೀದರ್​ನಲ್ಲಿ ಮಾತನಾಡಿದ ಸಚಿವ ಪ್ರಭು ಚವ್ಹಾಣ್​, ಇದು ಭಾರತ್​ ಜೋಡೊ ಯಾತ್ರೆಯಲ್ಲ, ಭಾರತ್​ ತೋಡೋ ಯಾತ್ರೆ. ಮೊದಲು ನೀವೆಲ್ಲ ಸೇರಿ ಕಾಂಗ್ರೆಸ್​ ಜೋಡೋ ಯಾತ್ರೆ ಮಾಡಿ. ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಸೋನಿಯಾ, ರಾಹುಲ್​, ಪ್ರಿಯಾಂಕಾ, ಡಿ.ಕೆ ಶಿವಕುಮಾರ್ ಇವರೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಇಂತವರಿಂದ ಎಂತಹ ಭಾರತ್​ ಜೋಡೋ ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ.

ಮೊದಲು ಕಾಂಗ್ರೆಸ್​ ಪಕ್ಷವನ್ನು ಜೋಡಿಸಿಕೊಳ್ಳಿ. ಬಳಿಕ ಭಾರತ್​ ಜೋಡೋ ಯಾತ್ರೆ ಮಾಡಿ. ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಸೋನಿಯಾ ಗಾಂಧಿ ಮೊದಲು ರಾಜ್ಯ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬಂಡಾಯ ಶಮನ ಮಾಡಲಿ. ಕಾಂಗ್ರೆಸ್​ ಪಕ್ಷವು ದೇಶದಲ್ಲಿ ಕೇವಲ 2 ರಾಜ್ಯದಲ್ಲಿ ಮಾತ್ರವಿದೆ. ಗೋವಾ ಸೇರಿದಂತೆ ಎಲ್ಲೆಡೆ ಶಾಸಕರು ಹಾಗೂ ಪಕ್ಷದ ಹಿರಿಯ ಮುಖಂಡರು ಕಾಂಗ್ರೆಸ್​ ಪಕ್ಷಕ್ಕೆ ಗುಡ್​ಬೈ ಹೇಳ್ತಿದ್ದಾರೆ. ಹೀಗಾಗಿ ಮೊದಲು ನಿಮ್ಮ ಪಕ್ಷ ಜೋಡೋ ಯಾತ್ರೆ ಮಾಡಿ. ಇವರ ಭಾರತ್​ ಜೋಡೋ ಯಾತ್ರೆಯಿಂದ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ ಎಂದು ಗುಡುಗಿದ್ದಾರೆ.

ಇದನ್ನು ಓದಿ : Bharat Jodo Yatra : ಮರಿ ಆನೆಗಾಗಿ ಮಿಡಿದ ರಾಹುಲ್ ಗಾಂಧಿ: ಚಿಕಿತ್ಸೆ ಕೊಡಿಸುವಂತೆ ಸಿಎಂ ಗೆ ಪತ್ರ

ಇದನ್ನೂ ಓದಿ : Bharat Jodo Yatra :ಎರಡು ದಿನಗಳ ವಿರಾಮದ ಬಳಿಕ ಮತ್ತೆ ಆರಂಭಗೊಂಡ ಭಾರತ್​ ಜೋಡೋ ಯಾತ್ರೆ : ರಾಹುಲ್​ ಗಾಂಧಿಗೆ ಸೋನಿಯಾ ಸಾಥ್​​

‘What Bharat Jodo can be expected from those who are out on bail’: Minister Prabhu Chavan sarcastically

Comments are closed.