84 ದಿನಗಳ ವ್ಯಾಲಿಡಿಟಿ, 450 ರೂ.ಗಿಂತ ಕಡಿಮೆ ಬೆಲೆಯ ಜಿಯೋ ಹೊಸ ಪ್ರಿಪೇಯ್ಡ್‌ ಪ್ಲಾನ್‌! ಡೇಟಾ ಬಳಸದವರಿಗೆ ಈ ಪ್ಲಾನ್‌ ಬೆಸ್ಟ್‌

ರಿಲಯನ್ಸ್‌ ಜಿಯೋ ತನ್ನ ಗ್ರಾಹಕರ ವಿಭಿನ್ನ ಅಗತ್ಯಗಳಿಗೆ ಸರಿಹೊಂದುವಂತೆ ವಿವಿಧ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತದೆ. ಇದೀಗ 450 ರೂ. ಗಿಂತ ಕಡಿಮೆ ಬೆಲೆಯ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಅನ್ನು ಪರಿಚಯಿಸಿದೆ.

ಭಾರತದ ಅತಿ ದೊಡ್ಡ ಟೆಲಿಕಾಂ ಆಪರೇಟರ್‌ ಕಂಪನಿ ರಿಲಯನ್ಸ್‌ ಜಿಯೋ ತನ್ನ ಗ್ರಾಹಕರ ವಿಭಿನ್ನ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಪ್ರೀಪೇಯ್ಡ್‌ ಯೋಜನೆಗಳನ್ನು ನೀಡುತ್ತಿದೆ. ಸಾಮಾನ್ಯವಾಗಿ ಪ್ರೀಪೇಯ್ಡ್ ಯೋಜನೆಗಳನ್ನು ಪಡೆಯಲು ಗ್ರಾಹಕರು ದಿನವೊಂದಕ್ಕೆ ಸುಮಾರು ₹10 ಪಾವತಿಸುತ್ತಾರೆ ಎಂಬುದನ್ನು ಮನಗೊಂಡು ಕಂಪನಿಯು ಇದೀಗ ಕಡಿಮೆ ಬೆಲೆಯ ಗರಿಷ್ಠ ಮಾನ್ಯತೆಯ ರೀಚಾರ್ಜ್‌ ಯೋಜನೆಯೊಂದನ್ನು ಪರಿಚಯಿಸಿದೆ. ಈ ಹೊಸ ಯೋಜನೆಯ ಪ್ರಕಾರ ದಿನವೊಂದಕ್ಕೆ ಗ್ರಾಹಕರು ಖರ್ಚು ಮಾಡುವ ದುಡ್ಡು ಕೇವಲ ₹ 5.3 ಆಗಿದೆ. ಜೊತೆಗೆ ಈ ಪ್ಲಾನ್‌ನ ಸೇವಾ ಮಾನ್ಯತೆಯು 84 ದಿನಗಳದ್ದಾಗಿದೆ. ಹಾಗಾಗಿ ಇದು ಕೈಗೆಟುಕುವ ಪ್ಲಾನ್‌ ಎನ್ನಬಹುದಾಗಿದೆ. ಇದರಲ್ಲಿ ಗ್ರಾಹಕರಿಗೆ ಯಾವುದೇ ಡೇಟಾ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲವಾದರೂ ಪ್ರೀಪೇಡ್‌ ಡೇಟಾ ವೋಚರ್‌ನ ಎಲ್ಲಾ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋನ ಈ ಪ್ಲಾನ್‌ ಬೆಲೆ 448 ರೂ.ಗಳು. ನೀವು ಈ ಪ್ಲಾನ್‌ನಲ್ಲಿ MyJio ಅಪ್ಲಿಕೇಷನ್‌ ಅನ್ನು ಟೆಲಿಕಾಂ ಆಪರೇಟರ್‌ನ ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದಾಗಿದೆ. ಈ ಪ್ಲಾನ್‌ ಹೇಗೆ ಲಾಭದಾಯಕವಾಗಿದೆ ಎಂದು ತಿಳಿಯೋಣ.

ಇದನ್ನೂ ಓದಿ: iPhone 18 Pro ಫೀಚರ್‌ಗಳು ಲೀಕ್: ಕ್ಯಾಮೆರಾ ನೋಡಿ ಟೆಕ್ ಪ್ರಿಯರು ಫಿದಾ! ಸೂಪರ್ ಅಪ್‌ಗ್ರೇಡ್

ಜಿಯೋ ನ 448 ರೂ. ಗಳ ಪ್ರೀಪೇಯ್ಡ್‌ ಪ್ಲಾನ್‌

ರಿಲಯನ್ಸ್‌ ಜಿಯೋದ ಹೊಸ 448 ರೂ.ಗಳ ಪ್ರೀಪೇಯ್ಡ್‌ ಪ್ಲಾನ್‌ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳು ಮತ್ತು 1000 ಎಸ್‌ಎಮ್‌ಎಸ್‌ ಇರಲಿದೆ. ಟೆಲಿಕಾಂ ಕಂಪನಿಯು ಈ ಪ್ಲಾನ್‌ನೊಂದಿಗೆ JioAICloud ಮತ್ತು JioTV ಯ ಸಬ್ಸ್‌ಕ್ರಿಪ್ಷನ್‌ ಅನ್ನು ನೀಡುತ್ತದೆ. ಈ ಪ್ಲಾನ್‌ ಸಂಪೂರ್ಣವಾಗಿ ವಾಯ್ಸ್‌ ಓನ್ಲಿ ಪ್ರೀಪೇಯ್ಡ್‌ ಪ್ಲಾನ್‌ ಆಗಿದೆ. ಈ ಪ್ಲಾನ್‌ ಅನ್ನು ಕಂಪನಿಯು ಪ್ರೀಪೇಯ್ಡ್‌ ಪ್ಲಾನ್‌ನ ಜೊತೆಗೆ ಡೇಟಾದ ಅಗತ್ಯವಿಲ್ಲದವರಿಗಾಗಿ ಪರಿಚಯಿಸಲಾಗಿದೆ.

ಜಿಯೋ 448 ರೂ. ಪ್ಲಾನ್‌ನಲ್ಲಿ ಇರುವ ಏಕೈಕ್‌ ನ್ಯೂನತೆಯೆಂದರೆ ಇದರಲ್ಲಿ 5G ಅಥವಾ ಒಟಿಟಿಯಂಥಹ ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಪ್ಲಾನ್‌ ಡೇಟಾ ಬಳಕೆ ಮಾಡದ ಗ್ರಾಹಕರಿಗೆ ಉತ್ತಮವಾಗಿದೆ. ಜಿಯೋದಲ್ಲಿ ಇಂತಹುದ್ದೇ ಮತ್ತೊಂದು ಪ್ಲಾನ್‌ ಇದೆ. ಅದು 1748 ರೂ. ಗಳ ಪ್ಲಾನ್‌. ಈ ಪ್ಲಾನ್‌ನಲ್ಲಿಯೂ ಅನ್‌ಲಿಮಿಟೆಡ್‌ ಕರೆ ಮತ್ತು 336 ದಿನಗಳ ವ್ಯಾಲಿಡಿಟಿಯಿದೆ. ಜೊತೆಗೆ 3600 ಎಸ್‌ಎಮ್‌ಎಸ್‌ ಪ್ರಯೋಜನವೂ ಇದೆ. ನೀವು ಕೇವಲ ವಾಯ್ಸ್‌ ಕರೆ ಮತ್ತು ಎಸ್‌ಎಮ್‌ಎಸ್‌ಗಳನ್ನು ಮಾತ್ರ ಬಳಕೆ ಮಾಡುತ್ತಿದ್ದರೆ ಈ ಯೋಜನೆ ಲಾಭದಾಯಕವಾಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories