Brahmavar School bus Accident : ಬ್ರಹ್ಮಾವರ : ಖಾಸಗಿ ಶಾಲಾ ಬಸ್ಸಿಗೆ ಲಾರಿ ಢಿಕ್ಕಿಯಾಗಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ. ಘಟನೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬ್ರಹ್ಮಾವರದ ಧರ್ಮಾವರ ಆಡಿಟೋರಿಯಂ ಸರ್ಕಲ್ ಬಳಿಯಲ್ಲಿ ಈ ಘಟನೆ ನಡೆದಿದೆ. ಬ್ರಹ್ಮಾವರ ಜಿಎಂ ವಿದ್ಯಾನಿಕೇತನ ಆಂಗ್ಲಮಾಧ್ಯಮ ಶಾಲೆಗೆ (G M Vidyaniketan Public School ) ಸೇರಿದ ಬಸ್ಸು, ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಕುಂದಾಪುರದಿಂದ ಬ್ರಹ್ಮಾವರದ ಕಡೆಗೆ ಚಲಿಸುತ್ತಿತ್ತು.

ಬ್ರಹ್ಮಾವರದ ಆಕಾಶವಾಣಿ ಸಮೀಪದಲ್ಲಿರುವ ಧರ್ಮಾವರ ಆಡಿಟೋರಿಯಂ ಮುಂಭಾಗದ ಸರ್ಕಲ್ನಲ್ಲಿ ಬಸ್ಸನ್ನು ಯೂಟರ್ನ್ ಮಾಡುವ ವೇಳೆಯಲ್ಲಿ ಹಿಂದಿನಿಂದ ಇಚರ್ ಲಾರಿ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು.
Also Read : Post Office Recruitment 2025 : 10ನೇ ತರಗತಿ ಉತ್ತೀರ್ಣರಾದ್ರೆ ಅಂಚೆ ಇಲಾಖೆಯಲ್ಲಿ ಉದ್ಯೋಗ : 138 ಹುದ್ದೆ, 30 ಸಾವಿರ ವೇತನ
ಕೂಡಲೇ ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿದ್ಯಾರ್ಥಿಗಳೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಲಾ ಬಸ್ ಚಾಲಕನ ಅಜಾಗರೂಕತೆಯಿಂದಲೇ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಿನ ಅವಧಿಯಲ್ಲಿ ಶಾಲಾ ಮಕ್ಕಳನ್ನು ತುಂಬಿಸಿಕೊಂಡ ಕೆಲವು ಬಸ್ಸುಗಳು ಅತೀ ವೇಗದಿಂದ ಚಲಿಸುತ್ತಿದ್ದು, ಚಾಲಕರು ನಿರ್ಲಕ್ಷ್ಯ ವಹಿಸುತ್ತಾರೆ ಅನ್ನೋ ಆರೋಪ ಕೇಳಿಬರುತ್ತಲೇ ಇದ್ದು, ಇದೀಗ ಶಾಲಾ ಬಸ್ ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತಕ್ಕೀಡಾಗಿದೆ.
Also Read: 5000 ಕಿ.ಮೀ ವೇಗ, ಭೂಮಿ ಸುತ್ತಲು ಕೇವಲ 7 ಗಂಟೆ ! ಏನಿದು ಹೈಪರ್ಸಾನಿಕ್ ವಿಮಾನ
Brahmavar School bus Accident Lorry hits G M Vidyaniketan Public School bus students injured Kannada News