ಬಣ್ಣಗಳ ಹಬ್ಬಕ್ಕೆ ಬಿಎಸ್‌ಎನ್‌ಎಲ್‌ನಿಂದ ವಿಶೇಷ ಕೊಡುಗೆ: 2ಜಿಬಿ ಹೈಸ್ಪೀಡ್ ಡೇಟಾ, 164 ದಿನಗಳ ಮಾನ್ಯತೆ

BSNL Holi Special Offer: ಸರ್ಕಾರದ ಅಧೀನದಲ್ಲಿರುವ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ ಹೋಳಿ ಹಬ್ಬದ ಪ್ರಯುಕ್ತ ತನ್ನ ಪ್ರೀಪೇಡ್‌ ಗ್ರಾಹಕರಿಗಾಗಿ ವಿಶೇಷ ಫೆಸ್ಟಿವಲ್‌ ಆಫರ್‌ ಅನ್ನು ಪರಿಚಯಿಸಿದೆ.

ಇದನ್ನು ಬಿಎಸ್‌ಎನ್‌ಎಲ್‌ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. “ರಂಗೋಂ ಕಾ ಸೆಲೆಬ್ರೇಷನ್, ನಾನ್-ಸ್ಟಾಪ್ ಕನೆಕ್ಷನ್” ಎಂಬ ಟ್ಯಾಗ್‌ಲೈನ್‌ನೊಂದಿಗೆ ಕಂಪನಿಯು ಈ ಕೊಡುಗೆಯನ್ನು ಪ್ರಚಾರ ಮಾಡಿದೆ.

ಹಬ್ಬಗಳ ಸಮಯದಲ್ಲಿ ಜನರು ಹೆಚ್ಚು ಕರೆ ಮತ್ತು ಡೇಟಾವನ್ನು ಬಳಸುತ್ತಾರೆ, ಆದ್ದರಿಂದ ಹೆಚ್ಚುವರಿ ವ್ಯಾಲಿಡಿಟಿ ಮತ್ತು ಹೆಚ್ಚಿನ ಡೇಟಾ ಬಳಸುವ ಬಳಕೆದಾರರಿಗೆ ಇದೊಂದು ಉತ್ತಮ ಕೊಡುಗೆಯಾಗಿದೆ.

ಸೀಮಿತ ಅವಧಿಯ ಕೊಡುಗೆಯಾಗಿರುವ ಈ ಪ್ಲಾನ್‌ ಹೆಚ್ಚಿನ ಡೇಟಾ ಮತ್ತು ದೀರ್ಘಾವಧಿಯ ಮಾನ್ಯತೆಯನ್ನು ನೀಡುತ್ತದೆ. ಬಿಎಸ್‌ಎನ್ಎಲ್‌ನ ಈ ಅದ್ಭುತ ಯೋಜನೆಯು ಹೆಚ್ಚಿನ ಮಾನ್ಯತೆ ಮತ್ತು ಡೇಟಾ ಹುಡುಕುತ್ತಿರುವ ಗ್ರಾಹಕರಿಗೆ ಸೂಕ್ತವಾಗಿದೆ.

ಬಿಎಸ್‌ಎನ್ಎಲ್‌ನ 997 ರೂ.ಗಳ ಜನಪ್ರಿಯ ಯೋಜನೆಯು ಈಗ 14 ದಿನಗಳ ಹೆಚ್ಚುವರಿ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ಬಗ್ಗೆ ತಿಳಿಯೋಣ.

ಬಿಎಸ್‌ಎನ್‌ಎಲ್‌ನ 997 ರೂ. ಯೋಜನೆ ಹೇಗಿದೆ?

ಬಿಎಸ್‌ಎನ್‌ಎಲ್‌ 997 ರೂ. ಗಳ ಪ್ರೀಪೇಯ್ಡ್‌ ಯೋಜನೆಯು ಚಂದಾದಾರರಿಗೆ ದಿನಕ್ಕೆ 2 ಜಿಬಿ ಹೈಸ್ಪೀಡ್‌ ಡೇಟಾವನ್ನು ನೀಡುತ್ತದೆ. ಡೇಟಾ ಖಾಲಿಯಾದ ನಂತರ ವೇಗ ಕಡಿಮೆಯಾಗುತ್ತದೆ. ಆದರೂ ಇಂಟರ್ನೆಟ್‌ ಪ್ರವೇಶ ಲಭ್ಯವಿರುತ್ತದೆ. ಇದರ ಜೊತೆಗೆ ಅನಿಯಮಿತ ಕರೆಗಳನ್ನು ಸಹ ಮಾಡಬಹುದಾದ ವೈಶಿಷ್ಟ್ಯವನ್ನು ನೀಡುತ್ತದೆ.

ಇದನ್ನೂ ಓದಿ: ಬಿಡುಗಡೆಗೆ ಸಜ್ಜಾದ ಐಫೋನ್‌ 17e: 48MP ಕ್ಯಾಮೆರಾ ವೈಶಿಷ್ಟ್ಯವಿರುವ ಫೋನ್‌ ಬೆಲೆ ಎಷ್ಟು?

ಹಬ್ಬದ ಕೊಡುಗೆಯಲ್ಲಿ ಏನಿದೆ?

ಈ ಯೋಜನೆಯು 150 ದಿನಗಳ ಮಾನ್ಯತೆಯೊಂದಿಗೆ ಬರುತ್ತಿತ್ತು. ಆದರೆ ಹೋಳಿ ವಿಶೇಷ ಕೊಡುಗೆಯ ಭಾಗವಾಗಿ ಕಂಪನಿಯು ಇದರ ವ್ಯಾಲಿಡಿಟಿಯನ್ನು ಹೆಚ್ಚುವರಿ 14 ದಿನಗಳನ್ನು ನೀಡುತ್ತದೆ. ಅಂದರೆ ಚಂದಾದರು ಈ ಯೋಜನೆ ಪಡೆದುಕೊಂಡರೆ ಒಟ್ಟು 164 ದಿನಗಳ ಮಾನ್ಯತೆ ಪಡೆದುಕೊಳ್ಳುತ್ತಾರೆ. ಹೆಚ್ಚಿನ ಅವಧಿಯ ಮಾನ್ಯತೆಯನ್ನು ಬಯಸುವ ಬಳಕೆದಾರರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ.

ಈ ಕೊಡುಗೆ ಎಷ್ಟು ದಿನಗಳವರೆಗೆ ಇರಲಿದೆ?

ಕಂಪನಿಯು ಹೇಳಿರುವ ಪ್ರಕಾರ 997 ರೂ. ಗಳ ಈ ಯೋಜನೆಯು ಮಾರ್ಚ್‌ 1 ರಿಂದ ಮಾರ್ಚ್‌ 31, 2026 ರವರೆಗೆ ಸೀಮತವಾಗಿದೆ. ಈ ಅವಧಿಯಲ್ಲಿ ರೀಚಾರ್ಜ್ ಮಾಡುವವರು ಹೆಚ್ಚುವರಿ 14 ದಿನಗಳ ಮಾನ್ಯತೆ ಪಡೆದುಕೊಳ್ಳುತ್ತಾರೆ. ಈ ಆಫರ್‌ ಅವಧಿ ಮುಗಿದ ನಂತರ 997 ರೂ.ಗಳ ಈ ಯೋಜನೆಯು ಮೊದಲಿನಂತೆ 150 ದಿನಗಳ ಮಾನ್ಯತೆಯೊಂದಿಗೆ ಲಭ್ಯವಿರುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories