Crime News : ಪತ್ನಿಗೆ ಕನ್ಯತ್ವ ಪರೀಕ್ಷೆ; ತಂದೆ, ಸ್ನೇಹಿತನ ಜೊತೆ ಸಹಕರಿಸು ಎಂದ ಪತಿ !

ಬೆಂಗಳೂರು : ತಂದೆ ಹಾಗೂ ಸ್ನೇಹಿತನ ಜೊತೆಗೆ ಲೈಂಗಿಕವಾಗಿ ಸಹಕರಿಸು ಎಂದು ಒತ್ತಾಯ ಮಾಡಿದ ಪತಿಯ ವಿರುದ್ದ ಪತ್ನಿಯೋರ್ವರು ಪೊಲೀಸರಿಗೆ ದೂರು ನೀಡಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ನಡೆದಿದೆ. ಪತಿ ಬಲವಂತವಾಗಿ ತನಗೆ ಕನ್ಯತ್ವ ಪರೀಕ್ಷೆ ಮಾಡಿಸಿದ್ದಾರೆ ಅಂತಾ ಆರೋಪಿಸಿದ್ದಾರೆ.

ಬೆಂಗಳೂರಿನ ನಿವಾಸಿಯಾಗಿರುವ ವಿವೇಕ್‌ ಎಂಬಾತನ ಜೊತೆಗೆ ಮಹಿಳೆಗೆ ಕಳೆದ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ಮದುವೆಯ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಚಿನ್ನ, ಬೆಳ್ಳಿ ಹಾಗೂ ಒಂದು ಲಕ್ಷ ರೂಪಾಯಿ ಹಣವನ್ನು ನೀಡಲಾಗಿತ್ತು. ಮದುವೆಯಾದ ನಂತರದಲ್ಲಿ ಹೆಚ್ಚಿನ ಹಣವನ್ನು ತರುವಂತೆ ಆರೋಪಿಗಳು ಬೇಡಿಕೆಯಿಟ್ಟಿದ್ದಾರೆ. ಅಲ್ಲದೇ ತನಗೆ ಪತಿ ಹಾಗೂ ಮನೆಯವರು ಸೇರಿಕೊಂಡು ದೈಹಿಕ ಹಾಗೂ ಮಾನಸಿಕ ಹಲ್ಲೆಯನ್ನು ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ : ಮಸಾಜ್‌ ಸೆಂಟರ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ : ಮಾಲೀಕ ಅರೆಸ್ಟ್‌

ಇನ್ನು ಪತಿ ದೀಪಕ್‌ ಹಾಗೂ ಹೇಮ ವಿಜಯಕುಮಾರ್‌ ಎಂಬವರು ತನಗೆ ಬಲವಂತವಾಗಿ ತನಗೆ ಕನ್ಯತ್ವ ಪರೀಕ್ಷೆಯನ್ನು ಮಾಡಿಸಿದ್ದಾರೆ. ಇದರಿಂದಾಗಿ ನನಗೆ ಮಾನಸಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ವಿಚಾರವನ್ನು ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇನ್ನು ತನ್ನ ಮಾವ ಕೂಡ ತನ್ನೊಂದಿಗೆ ಖಾಸಗಿಯಾಗಿ ಇರಬೇಕೆಂದು ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ಪತಿ ದೀಪಕ್‌ ತನ್ನ ಸ್ನೇಹಿತ ಸತೀಶ್‌ ಜೊತೆಗೂ ಸಹಕರಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಒಂದೇ ಕುಟುಂಬದ ಐವರ ಸಾವು ಪ್ರಕರಣ : ಹಲ್ಲೆಗೆರೆ ಶಂಕರ್‌, ಅಳಿಯ ಶ್ರೀನಾಥ್‌ ಪೊಲೀಸ್‌ ವಶಕ್ಕೆ

ಪತಿಯ ಸಹೋದರ ತಾನು ಸ್ನಾನ ಮಾಡಿ ಬರುವಾಗ ತನ್ನ ಪೋಟೋ ಹಾಗೂ ವಿಡಿಯೋಗಳನ್ನು ಮಾಡುವ ಕೃತ್ಯವೆಸಗಿದ್ದಾನೆ. ಅಲ್ಲದೇ ತನಗೆ ಗಾಂಜಾ ಸೇದುವಂತೆಯೂ ಮಾನಸಿಕ ಕಿರುಕುಳವನ್ನು ನೀಡಿದ್ದಾನೆ. ನಾನು ಮನೆಯಿಂದ ಹೊರ ಹೋಗದಂತೆ ಮನೆಯೊಳಗೆ ಕೂಡಿ ಹಾಕಿ ಐದು ಲಕ್ಷ ರೂಪಾಯಿ ಹಣವನ್ನು ತರುವಂತೆ ಒತ್ತಾಯಿಸಿದ್ದು, ಹಣ ತರದೇ ಇದ್ದಾಗ ಕಾಫಿಯನ್ನು ಕೈಗೆ ಚೆಲ್ಲಿ ಗಾಯ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ಬ್ಲೇಡ್‌ ನಿಂದ ತಿವಿದು ಗಾಯಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಹನುಮಂತ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : Facebook ಗೆಳತಿಯ ಮನೆಗೆ ಹೋದಾಕೆಗೆ ಲೈಂಗಿಕ ಕಿರುಕುಳ : ನಗ್ನ ವಿಡಿಯೋ, ಪೋಟೋ ತೆಗೆದು ದಂಪತಿಯಿಂದ ಬ್ಲ್ಯಾಕ್ ಮೇಲ್

Comments are closed.