ಕೊಡಗಿನ ಕುವರಿಯ ಕೈ ಹಿಡಿದ ಮಾಯಾನಗರಿ ಮುಂಬೈ…! ಎರಡು ಸಿನಿಮಾ ಮುಗಿಯುವ ಮುನ್ನವೇ ಮೂರನೇ ಸಿನಿಮಾಗೆ ಸೈಎಂದ ರಶ್ಮಿಕಾ…!!

ಜಗತ್ತೇ ಕರೋನಾದಿಂದ ನಲುಗಿ ಹೋಗಿದ್ದರೇ, ಕೊಡಗಿನ ಕುವರಿ  ರಶ್ಮಿಕಾ ಮಾತ್ರ ಕಳೆದೆರಡು ವರ್ಷದಿಂದ ಚಿನ್ನದ ಬೇಟೆ  ನಡೆಸಿದ್ದಾರೆ. ಸ್ಯಾಂಡಲ್ ವುಡ್ ನಿಂದ ಆರಂಭಿಸಿ ತೆಲುಗು,ತಮಿಳು  ಚಿತ್ರರಂಗದಲ್ಲೂ ದಿಗ್ವಿಜಯ ಮುಗಿಸಿ ಈಗ ಬಾಲಿವುಡ್ ಗೆ ಹೆಜ್ಜೆ ಇಟ್ಟಿರೋ ಕೊಡಗಿನ ಕಿತ್ತಳೆಯಂತಹ ಬೆಡಗಿ ರಶ್ಮಿಕಾ ಎರಡು ಸಿನಿಮಾ ಮುಗಿಯುವ ಮುನ್ನವೇ ಮೂರನೇ ಸಿನಿಮಾಗೆ ಸಹಿ ಹಾಕಿದ್ದಾರೆ.

ಆಸ್ಪತ್ರೆಗಳ ಕಾರ್ಯವೈಖರಿಗೆ ನಟ ಜಗ್ಗೇಶ್ ಅಸಮಧಾನ…! ವ್ಯವಸ್ಥೆ ಪಾರದರ್ಶಕಗೊಳಿಸುವಂತೆ ಸಿಎಂಗೆ ಮನವಿ…!!

ಈಗಾಗಲೇ ಮಿಷನ್ ಮಜ್ನು ಸಿನಿಮಾದ  ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಮೊದಲ ಚಿತ್ರದಲ್ಲಿ ಸಿದ್ಧಾರ್ಥ್ ,ಮಲ್ಹೋತ್ರಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ರಶ್ಮಿಕಾ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದು, ಎರಡನೇ ಚಿತ್ರವೂ ಚಿತ್ರೀಕರಣದ ಹಂತದಲ್ಲಿದೆ.

ಈ ಮಧ್ಯೆ ಬಾಲಿವುಡ್ ನ ಮತ್ತೊಂದು ಹಿಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗೂ ರಶ್ಮಿಕಾ ಆಯ್ಕೆಯಾಗಿದ್ದು, ಕಥೆ ಒಕೆ ಮಾಡಿರೋ ರಶ್ಮಿಕಾ ನಾಯಕಿ ಪಾತ್ರಕ್ಕೆ ಜೈ ಎಂದಿದ್ದಾರಂತೆ. ಈ ವಿಚಾರವನ್ನು ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ವೇಳೆ ಬಹಿರಂಗ ಪಡಿಸಿದ್ದಾರೆ.

ಮಗಳನ್ನು ತೆರೆಗೆ ತರುವ ಮುನ್ನವೇ ಮರೆಯಾದ ರಾಮು…! ಸ್ಯಾಂಡಲ್ ವುಡ್ ನ ಕೋಟಿನಿರ್ಮಾಪಕ ಕೊರೋನಾಗೆ ಬಲಿ…!!

ಆದರೆ ಮೂರನೇ ಚಿತ್ರಕ್ಕೆ ಯಾರ ನಿರ್ದೇಶನದ ಅಡಿಯಲ್ಲಿ ರಶ್ಮಿಕಾ ಬಣ್ಣ ಹಚ್ಚುತ್ತಿದ್ದಾರೆ? ಹಿರೋ ಯಾರು ಎಂಬ ಗುಟ್ಟು ಬಿಟ್ಟುಕೊಡಲು ರಶ್ಮಿಕಾ ಒಪ್ಪಿಲ್ಲ.  ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ತೆರೆಕಂಡ ಪೊಗರು ಸಿನಿಮಾದಲ್ಲಿ ನಟಿಸಿದ್ದ ರಶ್ಮಿಕಾ ಬಳಿಕ ತೆಲುಗು ಹಾಗೂ ತಮಿಳಿನಲ್ಲಿ ಬ್ಯುಸಿಯಾಗಿದ್ದರು.

ಸೆಲೆಬ್ರೆಟಿಗಳ ಮಾಲ್ಡೀವ್ಸ್ ಕನಸಿಗೆ ಬೀಗ….! ಭಾರತೀಯ ಪ್ರವಾಸಿಗರಿಗೆ ನಿಷೇಧ ಹೇರಿದ ಪ್ರವಾಸಿದ್ವೀಪ…!!

ಸದ್ಯ ತೆಲುಗಿನಲ್ಲಿ ಅಲ್ಲೂ ಅರ್ಜುನ್ ಜೊತೆ ನಟಿಸಿರುವ ಪುಷ್ಪ ಸೇರಿದಂತೆ ಹಲವು ಚಿತ್ರಗಳು ರಿಲೀಸ್ ಗೆ ಸಿದ್ಧವಿದ್ದು, ಇದರೊಂದಿಗೆ ಬಾಲಿವುಡ್ ನಲ್ಲಿ ರಶ್ಮಿಕಾ ಹವಾ ಮುಂದುವರಿದಿದೆ. ಕೊರೋನಾ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತಗೊಂಡಿರೋದರಿಂದ  ರಶ್ಮಿಕಾ ಹೈದ್ರಾಬಾದ್ ನಲ್ಲಿದ್ದು, ಅಭಿಮಾನಿಗಳ ಜೊತೆ ಚಾಟ್ ಮಾಡುತ್ತಾ ಕಾಲಕಳೆಯುತ್ತಿದ್ದಾರೆ.

Comments are closed.