ಕೊರೊನಾಘಾತ : ರಾಜ್ಯದಲ್ಲಿ 2 ಲಕ್ಷದ ಗಡಿದಾಟಿದ ಸೋಂಕಿತರ ಸಂಖ್ಯೆ !

0

ಬೆಂಗಳೂರು : ಕೊರೋನಾ ವೈರಸ್ ಸೋಂಕಿನ ಆರ್ಭಟ ರಾಜ್ಯದಲ್ಲಿ ಮುಂದುವರಿದಿದ್ದು ಕೊರೊನಾ ಸೋಂಕಿತರ ಸಂಖ್ಯೆ ಬರೋಬ್ಬರಿ 2 ಲಕ್ಷಕ್ಕೆ ಏರಿಕೆಯಾಗಿದೆ.. ಬೆಂಗಳೂರು, ಉಡುಪಿ, ಮೂಸೂರು, ಬಳ್ಳಾರಿ ಜಿಲ್ಲೆಗಳಲ್ಲಿ ಕೊರೊನಾ ಸ್ಪೋಟ ಸಂಭವಿಸಿದ್ದು, ರಾಜ್ಯದಲ್ಲಿಂದು 6706 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿಂದು 1893 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಮೈಸೂರಿನಲ್ಲಿ 522, ಬಳ್ಳಾರಿ 445, ಉಡುಪಿ 402, ದಾವಣಗೆರೆ 328, ಬೆಳಗಾವಿ 288, ಕಲಬುರ್ಗಿ 285, ಧಾರವಾಡ 257, ದಕ್ಷಿಣ ಕನ್ನಡ 246, ರಾಯಚೂರು 181, ಕೊಪ್ಪಳ 148, ಬಾಗಲಕೋಟೆ ಮತ್ತು ಬೀದರ್ 143, ಮಂಡ್ಯ 130, ಹಾಸನ 129, ವಿಜಯಪುರ 121, ಚಿಕ್ಕಮಗಳೂರು 111, ಶಿವಮೊಗ್ಗ 105 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಉಳಿದಂತೆ ಗದಗ 98, ಹಾವೇರಿ 96, ತುಮಕೂರು 85, ಯಾದಗಿರಿ 83, ಕೋಲಾರ 77, ಬೆಂಗಳೂರು ಗ್ರಾಮಾಂತರ 70, ಚಿತ್ರದುರ್ಗ 67, ಉತ್ತರ ಕನ್ನಡ 64, ಚಾಮರಾಜನಗರ 56, ಕೊಡಗು 55, ರಾಮನಗರ 53 ಮತ್ತು ಚಿಕ್ಕಬಳ್ಳಾಪುರ 25 ಸೇರಿದಂತೆ ಒಟ್ಟು 6706 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಇದುವರೆಗೆ 2,03,200ಕ್ಕೆ ಏರಿಕೆಯಾಗಿದ್ದು, 1,21,242 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಉಳಿದಂತೆ ರಾಜ್ಯದಲ್ಲಿ 78,337 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಇಂದೂ ಕೂಡ ಶತಕ ದಾಟಿದ್ದು, ಇದುವರೆಗೆ ರಾಜ್ಯದಲ್ಲಿ 3,613 ಮಂದಿ ಕೊರೊನಾ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ.

Leave A Reply

Your email address will not be published.