ನಿತ್ಯಭವಿಷ್ಯ :14-08-2020

0

ಮೇಷರಾಶಿ
ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಸ್ವಂತ ವ್ಯವಹಾರದಲ್ಲಿ ಯಶಸ್ಸು, ಆಯುಷ್ಯದ ಭೀತಿ, ಅಧಿಕ ಉಷ್ಣ, ಹೊಟ್ಟೆ ನೋವು, ಅಜೀರ್ಣ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಶುಭಕಾರ್ಯ ಪ್ರಯತ್ನ, ಕೆಟ್ಟವರ ಸಹವಾಸ. ಹಿರಿಯರ ಆರೋಗ್ಯಭಾಗ್ಯ ಸುಧಾರಿಸುತ್ತಾ ಹೋಗಲಿದೆ. ಕಾರ್ಮಿಕ ವರ್ಗದವರಿಗೆ ವೇತನ ಹೆಚ್ಚಲಿದೆ. ಶ್ರೀದೇವರ ಪುಣ್ಯಕಾರ್ಯಗಳಲ್ಲಿ ಭಾಗವಹಿಸುವಿರಿ.

ವೃಷಭರಾಶಿ
ನಿದ್ರಾಭಂಗ, ಒತ್ತಡಗಳು, ಸಂಗಾತಿಯಿಂದ ದೂರ, ಅನಗತ್ಯ ತಿರುಗಾಟ, ಕಾರ್ಯ ವಿಘ್ನ, ಪಾಲುದಾರಿಕೆಯಲ್ಲಿ ನಷ್ಟ, ಆರ್ಥಿಕ ನಷ್ಟ ಯಂತ್ರೋಪಕರಣಗಳಿಂದ ತೊಂದರೆ. ಮನೆಯಲ್ಲಿ ದೇವತಾ ಕಾರ್ಯಗಳಿಂದ ಮನಸ್ಸಿಗೆ ಸಮಾಧಾನ ತಂದೀತು. ಆರ್ಥಿಕ ಸ್ಥಿತಿಯು ಸುಧಾರಿಸುತ್ತಾ ಹೋಗಲಿದೆ. ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ. ಅನಿರೀಕ್ಷಿತವಾಗಿ ಶುಭವಾರ್ತೆ.

ಮಿಥುನರಾಶಿ
ಕಾರ್ಯರಂಗದಲ್ಲಿ ಅಭಿವೃದ್ದಿದಾಯಕ ವಾತಾವರಣ ಸಮಾಧಾನ ತರಲಿದೆ. ಆರ್ಥಿಕವಾಗಿ ಯಾರಿಗೂ ಜಾಮೀನುದಾರರಾಗದಿರಿ. ಹಣಕಾಸಿನ ನೆರವು, ಅನಾರೋಗ್ಯದಿಂದ ಚೇತರಿಕೆ, ಸ್ನೇಹಿತರಿಂದ ಅನುಕೂಲ, ಉದ್ಯೋಗ ಲಾಭ, ಸೇವಕರ ಪ್ರಾಪ್ತಿ, ಮಾನಸಿಕ ಒತ್ತಡ ಮಾತಿನಿಂದ ತೊಂದರೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಬೇಕು. ದಿನಾಂತ್ಯ ಅತಿಥಿಗಳ ಆಗಮನ.

ಕಟಕರಾಶಿ
ಹಿರಿಯರಿಗೆ ಶೀತ, ಕಫ‌ ಬಾಧೆಯಿಂದ ಸಮಸ್ಯೆ ಕಂಡು ಬಂದೀತು. ಸ್ವ ಪ್ರಯತ್ನದಲ್ಲಿ ಸೋಲು, ದೂರದಲ್ಲಿ ಉದ್ಯೋಗ, ಸರ್ಕಾರಿ ಕೆಲಸದಲ್ಲಿ ಜಯ, ಮಕ್ಕಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸಂಶಯದಿಂದ ನಿದ್ರಾಭಂಗ, ಸ್ಪರ್ಧಾತ್ಮಕ ಯಶಸ್ಸು ವಿದ್ಯಾಭ್ಯಾಸ ಪ್ರಗತಿ.ಕೆಲಸಕಾರ್ಯಗಳಲ್ಲಿ ಚುರುಕುತನವಿರಲಿ. ಅನಾವಶ್ಯಕವಾಗಿ ಭಾವುಕರಾಗದಿರಿ. ಬೇರೆಯವರೊಡನೆ ವಾದ, ವಿವಾದವನ್ನು ಮಾಡುವುದು ಬೇಡ.

ಸಿಂಹರಾಶಿ
ತಂದೆಯಿಂದ ಅನುಕೂಲ, ಸ್ವಂತ ಉದ್ಯೋಗದಲ್ಲಿ ಯಶಸ್ಸು, ಕಾರ್ಯ ಅನುಕೂಲ, ಮಿತ್ರರಿಂದ ಲಾಭ ಅಧಿಕ, ರಕ್ತಸಂಬಂಧಿಗಳಿಂದ ನೋವು, ಉನ್ನತ ವಿದ್ಯಾಭ್ಯಾಸದ ಒಲವು. ಕಲ್ಲು, ಮರುಳು ವ್ಯವಹಾರದಲ್ಲಿ ಚೇತರಿಕೆ ಕಂಡು ಬರುತ್ತದೆ. ಕೃಷಿ, ಪಶು ವ್ಯವಹಾರಸ್ಥರಿಗೆ ಆದಾಯವು ಹೆಚ್ಚಲಿದೆ. ಪ್ರವಾಸದಿಂದ ಸಂತಸ. ಸರಕಾರಿ ನೌಕರ ವರ್ಗಕ್ಕೆ ಮುಂಭಡ್ತಿಯಿಂದ ಸಂತಸವಿದೆ.

ಕನ್ಯಾರಾಶಿ
ಧನದಾಯಕ್ಕೆ ಕೊರತೆ ಇಲ್ಲವಾದರೂ ಚಿಂತೆ ಕಾಡದೆ ಬಿಡದು. ಅನಿರೀಕ್ಷಿತ ನಷ್ಟ, ಕೋರ್ಟ್ ಕೇಸ್‍ಗಳಿಗೆ ಅಲೆದಾಟ, ಅನಗತ್ಯ ಪ್ರಯಾಣ,ಕಾರ್ಯ ವಿಘ್ನ, ಅತಿ ಕಷ್ಟದ ಸನ್ನಿವೇಶ, ದಾಯಾದಿ ಕಲಹ, ಉದ್ಯೋಗದಲ್ಲಿ ತೊಂದರೆ, ಮಾನಸಿಕ ಒತ್ತಡಗಳು. ದುಡುಕು ಬುದ್ಧಿಯಿಂದ ಕಾರ್ಯಹಾನಿ ಮಾತು ಮಾತಿಗೂ ಮುನಿಯುವ ನಿಮಗೆ ಶಾಂತಿ, ಸಮಾಧಾನದ ಅಗತ್ಯವಿದೆ. ನ್ಯಾಯಾಲಯದಲ್ಲಿ ಅಪಜಯ.

ತುಲಾರಾಶಿ
ಆರೋಗ್ಯದಲ್ಲಿ ಎಚ್ಚರವಿರಲಿ. ದುಡುಕಿನ ನಿರ್ಣಯದಿಂದ ಅನಾವಶ್ಯಕ ಕಾರ್ಯಹಾನಿಯಾಗಲಿದೆ. ದಾಂಪತ್ಯ ಕಲಹ, ಪಾಲುದಾರಿಕೆಯಲ್ಲಿ ಅನುಕೂಲ, ಉದ್ಯೋಗದಲ್ಲಿ ಯಶಸ್ಸು, ಮಕ್ಕಳ ಜೀವನದ ಚಿಂತೆ, ಗೊಂದಲಗಳು ಗಾಬರಿ ಅಧಿಕ ಸಿಟ್ಟು.ಬಂಧುಗಳ ಆಕಸ್ಮಿಕ ಅವಘಡವು ಕ್ಲೇಶ ತಂದೀತು. ಕಫ‌ ಬಾಧೆಯಿಂದ ಪತ್ನಿಯ ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕರಾಶಿ
ಉದ್ಯೋಗದಲ್ಲಿ ಯಶಸ್ಸು, ಸಾಲದ ಕಾಟ,ಶತ್ರು ದಮನ, ಕೋಪತಾಪಗಳು ತಲೆನೋವು, ತಿಂಗಳ ದೋಷ, ತಂದೆಯೊಂದಿಗೆ ಅಸಮಾಧಾನ. ಸ್ವಾಭಿಮಾನವನ್ನು ಬದಿಗೊತ್ತಿ ಮೇಲಾಧಿಕಾರಿಗಳ ಕೃಪೆ ಪಡೆಯಿರಿ. ಧರ್ಮದೇವತಾ ಕಾರ್ಯಗಳು ನಡೆಯಲಿವೆ. ಐಕ್ಯಮತದ ಕೊರತೆ ಇದ್ದು ಭಿನ್ನಾಭಿಪ್ರಾಯ ತಂದೀತು. ಪ್ರವಾಸದಿಂದ ಮನಸ್ಸಿಗೆ ಸಂತಸ.

ಧನುರಾಶಿ
ಮಕ್ಕಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ವಿದ್ಯಾಭ್ಯಾಸ ಪ್ರಗತಿ, ಕಾರ್ಯಜಯ, ಒತ್ತಡಗಳಿಂದ ನಿದ್ರಾಭಂಗ, ಸಂಶಯಗಳ ಸುಳಿದಾಟ. ಸರಕಾರಿ ಅಧಿಕಾರಿಗಳೊಡನೆ ವಾಗ್ವಾದಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಖರ್ಚುವೆಚ್ಚಗಳು ಅಧಿಕವಾಗದಂತೆ ಜಾಗ್ರತೆ ವಹಿಸಿರಿ. ಆರೋಗ್ಯದಲ್ಲಿ ತುಸು ಸಮಸ್ಯೆ ಬಂದೀತು. ಸಂಚಾರದಲ್ಲಿ ಜಾಗ್ರತೆ.

ಮಕರರಾಶಿ
ನಿಮ್ಮ ಮನೋಕಾಮನೆಗಳು ಒಂದೊಂದಾಗಿ ನೆರವೇರಲಿದೆ. ನೋವು ಸಂಕಟಗಳು, ಭೂಮಿ ವಾಹನ ಯೋಗ, ತಾಯಿಯಿಂದ ಸಹಕಾರ, ಸಂಗಾತಿಯಿಂದ ಸಂಶಯ, ಪಾಲುದಾರಿಕೆ ಲಾಭ, ಗುಪ್ತ ವಿಷಯಗಳಲ್ಲಿ ಯಶಸ್ಸು. ಬಂದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಿರಿ. ಹಿರಿಯರು ನಿಮಗೆ ಸಹಕಾರ ನೀಡಲಿದ್ದಾರೆ. ದಿನಾಂತ್ಯದಲ್ಲಿ ಶುಭವಾರ್ತೆ.

ಕುಂಭರಾಶಿ
ಒಂದೊಂದಾಗಿ ಕಾರ್ಯಸಾಧನೆಯಾಗಿ ಮಾನಸಿಕ ಸಮಾಧಾನ ಸಿಗಲಿದೆ. ಹತ್ತಿರದ ಪ್ರಯಾಣ, ಉದ್ಯೋಗ ಬದಲಾವಣೆ, ಕಾರ್ಯಜಯ, ದಾಯಾದಿ ಸಮಸ್ಯೆಗಳು ಭಾವನೆಗಳಿಗೆ ಪೆಟ್ಟು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಯಾವುದೇ ವಿಚಾರವನ್ನು ಋಣಾತ್ಮಕವಾಗಿ ಚಿಂತಿಸಿದೆ ಮುಂದುವರಿದರೆ ಅಭಿವೃದ್ಧಿ ಖಂಡಿತ. ಆರ್ಥಿಕವಾಗಿ ಹೆಚ್ಚು ಚಿಂತೆ ಇರದು.

ಮೀನರಾಶಿ
ಆರ್ಥಿಕ ಅನುಕೂಲ, ಕುಟುಂಬದಲ್ಲಿ ಪ್ರಗತಿ, ಭಾಗ್ಯೋದಯ, ತಂದೆಯಿಂದ ಅನುಕೂಲ, ಮಾತಿನಲ್ಲಿ ಜಾಗ್ರತೆ, ಪ್ರಯಾಣದಲ್ಲಿ ಯಶಸ್ಸು. ಆಗಾಗ ಅಡೆತಡೆಗಳಿಂದಲೇ ಕಾರ್ಯಸಾಧನೆಯಾಗಲಿದೆ. ನಿಮ್ಮ ಪ್ರಯತ್ನಬಲಕ್ಕೆ, ಕ್ರಿಯಾಶೀಲತೆಗೆ ನಿಶ್ಚಿತ ಫ‌ಲ ಸಿಗಲಿದೆ. ನವದಂಪತಿಗಳಿಗೆ ಶುಭವಾರ್ತೆ ಇದೆ. ಸಂಚಾರದಲ್ಲಿ ಜಾಗ್ರತೆ ವಹಿಸುವುದು.

Leave A Reply

Your email address will not be published.