ನಿಮ್ಮ ಮಗನಿಗೆ ರೈತ ಮಸೂದೆ ಹಿಂಪಡೆಯಲು ಹೇಳಿ…! ಹಿರಾಬೆನ್ ಗೆ ಭಾವುಕ ಪತ್ರ ಬರೆದ ರೈತ…!!

ಚಂಡಿಗಢ: ರೈತ ಮಸೂದೆ ಹೋರಾಟ ವಿಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಪ್ರತಿಭಟನಾನಿರತ ರೈತರೊಬ್ಬರು ಪ್ರಧಾನಿ ತಾಯಿಗೆ ಭಾವುಕ ಪತ್ರ ಬರೆದು ಅಚ್ಚರಿ ಮೂಡಿಸಿದ್ದಾರೆ. ರೈತ ಮಸೂದೆಯನ್ನು ಹಿಂಪಡೆಯಲು ಮಗನ ಮನವೊಲಿಸುವಂತೆ ಮನವಿ ಮಾಡಿದ್ದಾರೆ.

ರೈತ ಮಸೂದೆ ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿರುವ  ಫೀರೋಜಪುರದ ಹರ್ ಪ್ರೀತ್ ಸಿಂಗ ಮೋದಿಯವರ ತಾಯಿ  ಹಿರಾಬೆನ್ ಗೆ ಪತ್ರ ಬರೆದಿದ್ದಾರೆ.  ಹಿಂದಿಯಲ್ಲಿ ಪತ್ರ ಬರೆದ  ರೈತ ಹರ್ ಪ್ರೀತ್ ಸಿಂಗ್ ರೈತ ಮಸೂದೆಯಲ್ಲಿ ರೈತರಿಗೆ ಮಾರಕವಾಗುವ ಅಂಶಗಳಿದ್ದು, ಇದನ್ನು  ಮೋದಿಯವರಿಗೆ ಮನವರಿಕೆ ಮಾಡಿಸಿ ಮಸೂದೆ ಹಿಂಪಡೆಯಲು ಮನವೊಲಿಸುವಂತೆ ಕೋರಿದ್ದಾರೆ.

ಭಾರತೀಯರು ತಾಯಿಯನ್ನು ದೇವರಾಗಿ ಕಾಣುತ್ತಾರೆ. ಹೀಗಾಗಿ ನಿಮ್ಮ ಮಾತು ಕೇಳಿಯಾದರೂ ಪ್ರಧಾನಿ ಮೋದಿಯವರು ತಮ್ಮ ನಿರ್ಧಾರ ಬದಲಿಸಬಹುದು. ಕೊರೆಯುವ ಚಳಿಯಲ್ಲಿ ದೇಶದ ರಾಜಧಾನಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ಇದರಿಂದ ಪರಿಹಾರ ಸಿಕ್ಕಂತಾಗಲಿದೆ ಎಂದು ಬರೆದಿದ್ದಾರೆ.

ಹಿರಾಬೆನ್ ಗೆ ಪತ್ರ ಬರೆದ ಹರಪ್ರೀತ್ ಶಿಮ್ಲಾದಲ್ಲಿ  ಅನುಮತಿ ಇಲ್ಲದೇ ರೈತ ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕೆ  ಪಂಜಾಬ್ ಪೊಲೀಸರಿಂದ ಬಂಧನಕ್ಕೊಳಗಾಗಿ ಬಿಡುಗಡೆಗೊಂಡಿದ್ದರು.

Comments are closed.