ಹೆದ್ದಾರಿಯಲ್ಲಿ ವಾಹನ ತಡೆದು ದರೋಡೆ : ನಾಲ್ವರು ವಿದ್ಯಾರ್ಥಿಗಳ ಬಂಧನ

ಹಾಸನ : ಅವ್ರೆಲ್ಲಾ ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ರು. ಆದರೆ ಕತ್ತಲಾದ್ರೆ ಸಾಕು ಹೆದ್ದಾರಿಗೆ ಇಳಿದು ದರೋಡೆ ನಡೆಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿಯ ವೇಳೆ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಿತಿನ್‌ ಗೌಡ ( 19 ವರ್ಷ), ಹೃತಿಕ್‌ (19 ವರ್ಷ ), ಯಲಹಂಕದ ಮಲ್ಲಿಕಾರ್ಜುನ (19 ವರ್ಷ ) ಮತ್ತು ಬೆಂಗಳೂರು ಅಮೃತಹಳ್ಳಿ ಹರ್ಷಿತ್‌ (22 ವರ್ಷ ) ಬಂಧಿತರರು. ತಂಡದಲ್ಲಿದ್ದ ಅಮೃತಹಳ್ಳಿಯ ನಿವಾಸಿ ರಾಜವರ್ಧರ್ ಎಂಬಾತ ಪರಾರಿಯಾಗಿದ್ದಾನೆ.

ರಾತ್ರಿಯಾಗುತ್ತಿದ್ದಂತೆಯೇ ಹೆದ್ದಾರಿಗೆ ಎಂಟ್ರಿಕೊಡ್ತಾ ಇದ್ದ ಯುವಕರ ತಂಡ ರಸ್ತೆಯಲ್ಲಿ ತೆರಳುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿತ್ತು. ಅಂತೆಯೇ ಕೊಣನೂರು- ಕುಶಾಲನಗರ ರಾಜ್ಯ ಹೆದ್ದಾರಿಯ ಸಿದ್ದಾಪುರದ ಬಳಿ ಎಡ ಭಾಗದಲ್ಲಿ ಐವರು ಯುವಕರು ಮಾರಕಾಸ್ತ್ರಗಳನ್ನು ತೋರಿಸಿ ದರೋಡೆಗೆ ಯತ್ನಿಸುತ್ತಿದ್ದ ವೇಳೆಯಲ್ಲಿ ಕೊಣನೂರು ಪೊಲೀಸ್ ಠಾಣೆಯ ಪಿಎಸ್ ಐ ಅಜಯ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.

ಆರೋಪಿಗಳಿಂದ ಬ್ಲೇಟ್, ಕಬ್ಬಿಣದ ರಾಡ್ ಸೇರಿದಂತೆ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದು, ಪರಾರಿಯಾಗಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.

Comments are closed.