ಬುಧವಾರ, ಜೂನ್ 18, 2025
HomeBreakingಕಾರು-ಬೈಕ್ ಭೀಕರ ಅಪಘಾತ : ಕಾಂಟ್ರಾಕ್ಟರ್ ಸ್ಥಳದಲ್ಲೇ ಸಾವು

ಕಾರು-ಬೈಕ್ ಭೀಕರ ಅಪಘಾತ : ಕಾಂಟ್ರಾಕ್ಟರ್ ಸ್ಥಳದಲ್ಲೇ ಸಾವು

- Advertisement -

ಕಾಪು : ಕಾರು – ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಪೈಂಟಿಂಗ್ ಕಂಟ್ರಾಕ್ಟರ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಮೂಡಬೆಟ್ಟುವಿನಲ್ಲಿ ನಡೆದಿದೆ.

Accident Pangala

ಉದ್ಯಾವರ ಕಟ್ಟೆಗುಡ್ಡೆಯ ನಿವಾಸಿ ಸುಧಾಕರ್ (45 ವರ್ಷ) ಎಂಬವರೇ ಮೃತ ದುರ್ದೈವಿ. ಪೈಂಟಿಂಗ್ ಗುತ್ತಿಗೆದಾರರಾಗಿ ಕೆಲಸ ಮಾಡ್ತಿದ್ದ ಸುಧಾಕರ್ ಅವರು ಬೆಳಗ್ಗೆ 9.45ರ ಸಮಯದಲ್ಲಿ ತನ್ನ ಬೈಕಿನಲ್ಲಿ ಕಾಪುವಿಗೆ ಹೊರಟಿದ್ದರು. ಇದೇ ವೇಳೆಯಲ್ಲಿ ಕಾಪುವಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಮಾರುತಿ ಎರ್ಟಿಗಾ ಕಾರು ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ.

Accident Pangala 1

ನಂತರ ಇನ್ನೊಂದು ಬದಿಯ ರಸ್ತೆಗೆ ಹಾರಿ ಸುಧಾಕರ್ ಅವರ ಬೈಕಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುಧಾಕರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರು ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣವೆನ್ನಲಾಗುತ್ತಿದೆ. ಸ್ಥಳಕ್ಕೆ ಕಾಪು ಠಾಣಾಧಿಕಾರಿ ರಾಜಶೇಖರ್ ಬಿ. ಸಾಗನೂರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular