ಮಠದ ಕೆರೆಗೆ ಈಜಲು ತೆರಳಿದ್ದ ಯುವಕ ಸಾವು

ಮೂಡಬಿದ್ರೆ :  ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಬೆಳುವಾಯಿ ಎಂಬಲ್ಲಿ ನಡೆದಿದೆ.

ಸುರತ್ಕಲ್‌ನ ಕಾಟಿಪಳ್ಳ ನಿವಾಸಿ ನಿಹಾಲ್ ಶಾ(20) ಮೃತ ಯುವಕ. ಮೂಡಬಿದ್ರೆಯ ಬೆಳುವಾಯಿ ಮಠದಕೆರೆಗೆ ಸ್ನೇಹಿತರ ಜೊತೆಗೆ ಈಜುವುದಕ್ಕೆ ತೆರಳಿದ್ದ ಈ ವೇಳೆಯಲ್ಲಿ ನೀರಲ್ಲಿ ಮುಳುಗಿ ನಿಹಾಲ್ ಶಾ ಸಾವನ್ನಪ್ಪಿದ್ದಾರೆ.

ಕೆರೆಗೆ ಇಳಿದಿದ್ದ ವೇಳೆ ನಿಹಾಲ್ ನೀರುಪಾಲಾಗಿದ್ದು, ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಈಜುಗಾರರು ಮೃತದೇಹವನ್ನು ಕೆರೆಯಿಂದ ಹೊರಗೆ ತೆಗೆದಿದ್ದಾರೆ. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.