ಮಿಸ್ ಯೂ ಮಗನೇ…! ಎಲ್ಲಿದ್ದರೂ ನಿನ್ನ ನಗು ಜೀವಂತ…! ಅರ್ಜುನ್ ಸರ್ಜಾ ಭಾವುಕ ಟ್ವೀಟ್…!!

ಮನೆಯ ಮುದ್ದಿನ ಮಗನಾಗಿ, ಮಾವನ ಪ್ರೀತಿಯ ಸೋದರ ಅಳಿಯನಾಗಿ ಮಗನಂತೆ ಇದ್ದ ಚಿರು ಸರ್ಜಾ ಅಗಲಿಕೆ ಅರ್ಜುನ್ ಸರ್ಜಾರನ್ನು ಇನ್ನಿಲ್ಲದಂತೆ ಕಾಡಿದೆ. ಸದಾ ಚಿರು ಪೋಟೋಗಳನ್ನು ಹಂಚಿಕೊಂಡು ಭಾವುಕರಾಗೋ ಅರ್ಜುನ್ ಸರ್ಜಾ, ಚಿರು ಪುಣ್ಯಸ್ಮರಣೆಯಂದು  ಮಿಸ್ ಯೂ ಮಗನೇ ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿ ನೆಲಗುಳಿಯ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಸಮಾಧಿಗೆ ಸರ್ಜಾ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಆದರೆ ಲಾಕ್ ಡೌನ್ ಕಾರಣಕ್ಕೆ ಚಿರು ಪುಣ್ಯಸ್ಮರಣೆಗೆ ಬರಲು ಸಾಧ್ಯವಾಗದೇ ಚೈನೈನಲ್ಲೇ ಉಳಿದುಕೊಂಡಿರುವ ಅರ್ಜುನ್ ಸರ್ಜಾ ಭಾವುಕರಾಗಿ ತಮ್ಮ ನೋವು ಹಂಚಿಕೊಂಡಿದ್ದಾರೆ.

ಈಗಾಗಲೇ ನೀನು ಅಗಲಿ ಒಂದು ವರ್ಷವಾಗಿದೆ.  ಆದರೆ ನಾನು ನನ್ನ ಜೀವನಪೂರ್ತಿ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ ಮಗನೇ, ನೀನು ಎಲ್ಲೇ ಇದ್ದರೂ ನಿನ್ನ ಸುಂದರವಾದ ನಗು ಸದಾ ಮಾಸದಿರಲಿ ಎಂದು ಹಾರೈಸುತ್ತೇನೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

2020 ರ ಜೂನ್ 7 ರಂದು ಚಿರು ಹೃದಯಾಘಾರದ ಸುದ್ದಿ ತಿಳಿದ ಅರ್ಜುನ್ ಧಾವಿಸಿ ಬಂದಿದ್ದರು. ಚಿರು ಅಂತಿಮಯಾತ್ರೆಗೆ ಹೆಗಲುಕೊಟ್ಟು ಕಣ್ಣೀರಾಗಿದ್ದರು. 2005 ರಿಂದ 2009 ರವರೆಗೆ ಅರ್ಜುನ್ ಸರ್ಜಾ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಚಿರು ನಟನಾಗಲು ಅರ್ಜುನ್ ಮೊದಲ ಪ್ರೇರಣೆ ಎಂದಿದ್ದರು.

ಚಿರು ಮಗು ಜನಿಸಿದಾಗಲೂ ಚಿರುವನ್ನು ನೆನೆದು ಭಾವುಕರಾಗಿದ್ದ ಅರ್ಜುನ್ ಸರ್ಜಾ, 20 ವರ್ಷದ ಹಿಂದೆ ಚಿರುವನ್ನು ನಾನೇ ಲಾಂಚ್ ಮಾಡಿದ್ದೆ. ಇನ್ನು 20 ವರ್ಷದ ನಂತರ ಜ್ಯೂನಿಯರ್ ಚಿರುವನ್ನು ನಾನೇ ಲಾಂಚ್ ಮಾಡುತ್ತೇನೆ ಎಂದಿದ್ದರು.

Comments are closed.