ಕೊರೋನಾ ಸಂಕಷ್ಟದಿಂದ ಜನಸಾಮಾನ್ಯರು ಸಹಾಯಹಸ್ತಕ್ಕೆ ಕಾಯುವಂತಾಗಿದ್ದರೇ, ಸೆಲೆಬ್ರೆಟಿಗಳು ಮಾನವೀಯತೆ ತೋರುತ್ತ ಅಗತ್ಯ ಉಳ್ಳವರಿಗೆ ನೆರವಾಗುತ್ತಿದ್ದಾರೆ. ಇದೀಗ ಆ ಸಾಲಿಗೆ ವಿಜಯ್ ಕಿರಗಂದೂರು ಹೊಸ ಸೇರ್ಪಡೆಯಾಗಿದ್ದು, ಹುಟ್ಟೂರಿಗೆ ನೆರವಾಗಲು ಸಿದ್ಧವಾಗಿದ್ದಾರೆ ಕೆಜಿಎಫ್ ನಿರ್ಮಾಪಕ.
ಕೊರೋನಾ ಸಂಕಷ್ಟದಿಂದ ಜನರು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಕಂಗಾಲಾಗಿದ್ದಾರೆ. ಹೀಗಾಗಿ ಹುಟ್ಟೂರಿನ ಜನರ ಸಂಕಷ್ಟಕ್ಕೆ ಸ್ಪಂದಿಸಲು ಮುಂಧಾಗಿರುವ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು .
ಮಂಡ್ಯ ಜಿಲ್ಲೆಯ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ 500 ಎಲ್ ಪಿಎಂ ಸಾಮರ್ಥ್ಯದ ಸಕಲ ವ್ಯವಸ್ಥೆಗಳನ್ನೊಳಗೊಂಡ 50 ಐಸಿಯು ಬೆಡ್ ಒದಗಿಸಲು ವಿಜಯ್ ನಿರ್ಧರಿಸಿದ್ದಾರೆ.
ತಮ್ಮ ಸಿನಿಮಾ ನಿರ್ಮಾಣದ ಹೊಂಬಾಳೆ ಫಿಲ್ಮಂ ಸಂಸ್ಥೆಯಡಿಯಲ್ಲಿ ನೆರವಾಗುವುದಾಗಿ ವಿಜಯ್ ಘೋಷಿಸಿದ್ದು, ಸೌಲಭ್ಯವನ್ನು ಅಗತ್ಯ ಉಳ್ಳವರು ಬಳಸಿಕೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಹಿಂದೆಯೂ ವಿಜಯ್ ಕೊರೋನಾ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಲ್ಲಿ ಶ್ರಮಿಸಿದ್ದು, ತಮ್ಮ ನಿರ್ಮಾಣ ಸಂಸ್ಥೆಯ ಎಲ್ಲ ಉದ್ಯೋಗಿಗಳಿಗೆ ಉಚಿತವಾಗಿ ಕೊರೋನಾ ಲಸಿಕೆ ಕೊಡಿಸಿದ್ದರು.
ಕೇವಲ ವಿಜಯ್ ಕಿರಗಂದೂರು ಮಾತ್ರವಲ್ಲ ಸ್ಯಾಂಡಲ್ ವುಡ್ ನ ಸುದೀಪ್, ಉಪೇಂದ್ರ್, ಶ್ರೀಮುರುಳಿ,ರಾಗಿಣಿ,ಶೋಭರಾಜ್ ಸೇರಿದಂತೆ ಹಲವರು ಕೊರೋನಾ ಸೋಂಕಿತರ ಸಂಕಷ್ಟಕ್ಕೆ ನೆರವಾಗಿದ್ದಾರೆ.
Comments are closed.