ಚಾಮರಾಜನಗರ ಆಮ್ಲಜನಕ ದುರಂತ….! ಮೃತರ ಕುಟುಂಬಗಳಿಗೆ ನೆರವಾದ ಕಿಚ್ಚ ಸುದೀಪ್ ಟ್ರಸ್ಟ್….!!

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ದುರಂತ  ನಡೆದು ವಾರಗಳೇ ಕಳೆದಿದ್ದರೂ ಸರ್ಕಾರ ಮೃತರ ಕುಟುಂಬಗಳಿಗೆ ನೆರವಾಗುವ ಸೌಜನ್ಯ ತೋರಿಲ್ಲ. ಆದರೆ ಸರ್ಕಾರ ನೆರವಾಗದಿದ್ದರೂ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು, ಕಿಚ್ಚ ಟ್ರಸ್ಟ್ ವತಿಯಿಂದ ನೆರವು ನೀಡಲಾಗಿದೆ.

https://kannada.newsnext.live/bed-blocking-mafiya-big-shock-highcourt/

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಿಂದ ಸಾವನ್ನಪ್ಪಿದರ ಸಹಾಯಕ್ಕೆ ಸರ್ಕಾರ ಧಾವಿಸಿಲ್ಲ. ಕೊರೋನಾ ಎರಡನೆ ಅಲೆ ನಿಯಂತ್ರಣದಲ್ಲಿ ವಿಫಲಾಗಿರುವ ಸರ್ಕಾರ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬದ ಕಣ್ಣೀರು ಒರೆಸಲು ಮರೆತಿದ್ದು, ತನಿಖೆಗೆ ತಂಡ ರಚಿಸಿ ಕೈತೊಳೆದುಕೊಂಡಿದೆ.

https://kannada.newsnext.live/chanarajanagar-continue-death-series-today-death-7-persons/

ಆದರೆ ತಮ್ಮ ಸಮಾಜಸೇವಾ ಟ್ರಸ್ಟ್ ಮೂಲಕ ಅಗತ್ಯ ಉಳ್ಳವರಿಗೆ ಸಹಾಯ ಹಸ್ತ ಚಾಚುತ್ತಿರುವ ಕಿಚ್ಚ ಸುದೀಪ್ ಮಾತ್ರ ತಮ್ಮಅನಾರೋಗ್ಯದ ನಡುವೆಯೂ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ನೆರವಾಗಲು ಮರೆತಿಲ್ಲ. ಸುದೀಪ್ ಪರವಾಗಿ ಟ್ರಸ್ಟ್ ನ ಸದಸ್ಯರು ದುರಂತದಲ್ಲಿ ಸಾವನ್ನಪ್ಪಿದವರ ಮನೆಗಳಿಗೆ ಭೇಟಿ ನೀಡಿದ್ದು, ಸಾಂತ್ವನ ಹೇಳಿದ್ದಾರೆ.

https://kannada.newsnext.live/10killed-in-gelatin-stick-blast-in-andhra-pradesh-kadapa/

ಅಷ್ಟೇ ದುಡಿಯುವ ಕೈಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದಲ್ಲದೇ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಭರವಸೆಯನ್ನು ನೀಡಿದ್ದಾರೆ. ಈಗಾಗಲೇ ಅಗತ್ಯ ಇರುವ ರೋಗಿಗಳಿಗೆ ಆಕ್ಸಿಜನ್ ಒದಗಿಸುವುದು ಸೇರಿದಂತೆ ಹಲವು ಸಮಾಜಸೇವೆಯ ಕೆಲಸದಲ್ಲಿ ತೊಡಗಿಕೊಂಡಿರುವ ಕಿಚ್ಚ ಸುದೀಪ್ ಟ್ರಸ್ಟ್ ನೊಂದವರ ಪಾಲಿಗೆ ಆಶಾಕಿರಣವಾಗಿದೆ.

ಸ್ವತಃ ಅನಾರೋಗ್ಯಕ್ಕಿಡಾಗಿದ್ದ ಕಿಚ್ಚ ಸುದೀಪ್, ಎರಡು ವಾರಗಳ ಕಾಲ ಬಿಗ್ ಬಾಸ್ ನಿರೂಪಣೆಯಿಂದ ದೂರ ಉಳಿದಿದ್ದು, ಮನೆಯಲ್ಲೇ ವಿಶ್ರಾಂತಿ ಪಡೆದಿದ್ದರು. ಆದರೂ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವುದನ್ನು ಮಾತ್ರ ಮರೆಯದ ಸುದೀಪ್ ಮಾನವೀಯತೆಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

Comments are closed.