Darshan:ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್….! ನಿರ್ದೇಶಕರೇ ಕೊಟ್ರು ಶಾಕ್….!!

ರಾಬರ್ಟ್ ಸಿನಿಮಾ ಬಳಿಕ ಚಾಲೆಂಜಿಂಗ್ ಸ್ಟಾರ್ ರನ್ನು ತೆರೆ ಮೇಲೆ ನೋಡೋಕೆ ಲಕ್ಷಾಂತರ ಅಭಿಮಾನಿಗಳು ಕಾಯ್ತಿದ್ದಾರೆ. ಆದರೆ ಸದ್ಯ ಅಭಿಮಾನಿಗಳ ಕನಸು ಈಡೇರೋದು ಡೌಟ್. ದಚ್ಚುರನ್ನು ರಾಜವೀರಮದಕರಿನಾಯಕನ ಪಾತ್ರದಲ್ಲಿ ನೋಡೋಕೆ ಕಾದಿದ್ದ ಅಭಿಮಾನಿಗಳಿಗೆ ಬ ನಿರ್ದೇಶಕರು ಬ್ಯಾಡ್ ನ್ಯೂಸ್ ನೀಡಿದ್ದಾರೆ.

ಕೊರೋನಾ ಎರಡನೇ ಅಲೆ ಬಳಿಕ ಈಗ ಮೂರನೇ ಅಲೆ ಭೀತಿ ಎದುರಾಗಿದೆ. ಅಲ್ಲಲ್ಲಿ ಚಿತ್ರರಂಗದ ಚಟುವಟಿಕೆಗೂ ನಿಧಾನಕ್ಕೆ ಆರಂಭವಾಗುತ್ತಿದ್ದರೂ ದಚ್ಚು ಬಹುನೀರಿಕ್ಷಿತ ಚಿತ್ರ ರಾಜಾವೀರಮದಕರಿ ನಾಯಕ ತಂಡ ಶೂಟಿಂಗ್ ಆರಂಭಿಸೋದೇ ಅನುಮಾನ ಎನ್ನಲಾಗ್ತಿದೆ.

ಈ ಬಗ್ಗೆ ಸ್ವತಃ ಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರ್ ಸಿಂಗ್ ಬಾಬು ವಿವರಣೆ ನೀಡಿದ್ದಾರೆ. ರಾಜವೀರಮದಕರಿ ನಾಯಕ ಒಂದು ಐತಿಹಾಸಿಕ ಸಿನಿಮಾ ಆಗಿರೋದರಿಂದ ಪ್ರತಿನಿತ್ಯದ ಶೂಟಿಂಗ್ ನಲ್ಲಿ 400-500 ಜನ ಭಾಗವಹಿಸಬೇಕಾಗುತ್ತದೆ. ಸೈನಿಕರ ಪಾತ್ರಕ್ಕೆ ನೂರಾರು ಜನ ಕಲಾವಿದರು ಬೇಕಾಗುತ್ತದೆ.

ಕೊರೋನಾ ಸಂಕಷ್ಟದ ಹೊತ್ತಿನಲ್ಲಿ ಅಷ್ಟೊಂದು ಜನರನ್ನು ಒಂದೆಡೆ ಸೇರಿಸಿ ಶೂಟಿಂಗ್ ನಡೆಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಹೀಗಾಗಿ ಅಷ್ಟು ದೊಡ್ಡ ಮಟ್ಟದಲ್ಲಿ ಪ್ರೊಡಕ್ಷನ್ ಜೊತೆ ಕೆಲಸ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಶೂಟಿಂಗ್ ಮುಂದೂಡಲಾಗಿದೆಯಂತೆ.

ಅಲ್ಲದೇ ಸದ್ಯ ಕೊವೀಡ್ ಪರಿಸ್ಥಿತಿ ಹೇಗೆ  ಮುಂದುವರೆಯುತ್ತಿದೆ ಎಂದು ಅಂದಾಜಿಸಲಾಗುತ್ತಿಲ್ಲ. ವಿದೇಶದಲ್ಲೇ ಮತ್ತೊಮ್ಮೆ ಲಾಕ್ ಡೌನ್ ಮಾಡಲಾಗುತ್ತಿದೆ. ಕೇರಳದಲ್ಲಿ ಕೇಸ್ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹೀಗಾಗಿ ಸದ್ಯ ಶೂಟಿಂಗ್ ಆರಂಭಿಸದಿರಲು ಚಿತ್ರತಂಡ ನಿರ್ಧರಿಸಿದೆಯಂತೆ.

ರಾಜಾವೀರಮದಕರಿ ನಾಯಕ ಸಿನಿಮಾ ಕೇವಲ 20 ಶೇಕಡಾದಷ್ಟು ಶೂಟಿಂಗ್ ಮಾತ್ರ ಮುಗಿಸಿದ್ದು, ಇನ್ನು ಚಿತ್ರಕ್ಕೆ ನಾಯಕಿ ಆಯ್ಕೆಯಾಗಿಲ್ಲ. ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಚಿತ್ರವಾಗಿರೋ ರಾಜಾ ವೀರಮದಕರಿ ನಾಯಕನ್ನು ವಿಭಿನ್ನವಾಗಿ ತೆರೆಗೆ ತರೋ ಕನಸು ನಿರ್ಮಾಪಕ ರಾಕಲೈನ್ ವೆಂಕಟೇಶ್ ಅವರದ್ದು.

ಈ ಸಿನಿಮಾದಲ್ಲಿ ಸುಮಲತಾ ಕೂಡ ಬಣ್ಣ ಹಚ್ಚುತ್ತಿದ್ದು, ಹಂಸಲೇಖ ಸಂಗೀತ ನೀಡಿದ್ದಾರೆ. ದೊಡ್ಡಣ್ಣ ಸೇರಿದಂತೆ ಹಲವು ಹಿರಿಯ ಕಲಾವಿದರು ಸಿನಿಮಾದಲ್ಲಿದ್ದಾರೆ. ಕೊರೋನಾದಿಂದ ಸಿನಿಮಾದ ಶೂಟಿಂಗ್ ಸೇರಿದಂತೆ ಎಲ್ಲವಿಚಾರಗಳಲ್ಲೂ ಹಲವು ಬದಲಾವಣೆಯಾಗಲಿದ್ದು, ಸಿನಿಮಾ ರಿಲೀಸ್ ಕೂಡ ವಿಳಂಬವಾಗಲಿದ್ದು, ಡಿ.ಬಾಸ್ ಅಭಿಮಾನಿಗಳಿಗೆ ಬೇಸರ ತಂದಿದೆ.

Comments are closed.