ಗೋಡೆ ಕೊರೆದು ಚಿನ್ನದಂಗಡಿಗೆ ನುಗ್ಗಿದ ಕಳ್ಳರು : ಮಾಲೀಕರ ಜಾಣ್ಮೆಯಿಂದ ತಪ್ಪಿದ್ದ ಬಾರೀ ಕಳವು..!!!

ಮಂಗಳೂರು : ಕಳ್ಳರು ರಾತ್ರಿ ಗೋಡೆ ಕೊರೆದು ಚಿನ್ನದಂಗಡಿಯೊಳಗೆ ನುಗ್ಗಿದ್ದಾರೆ. ಇನ್ನೇನು ಬೆಳ್ಳಿಯ ಸಾಮಗ್ರಿಗಳನ್ನು ದೋಚಿದ್ದಾರೆ. ಆದರೆ ಮಾಲೀಕ ಅಂಗಡಿ ರಕ್ಷಣೆಗೆ ಅಳವಡಿಸಿದ್ದ ತಂತ್ರಜ್ಞಾನಕ್ಕೆ ಬೆದರಿದ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪುವಿನಲ್ಲಿರುವ ಗೋಲ್ಡ್‌ ಕಿಂಗ್‌ ಜ್ಯುವೆಲ್ಲರಿ ಮಾಲೀಕ ಇಬ್ರಾಹಿಂ ಅವರು ಎಂದಿನಂತೆ ಅಂಗಡಿಗೆ ಬೀಗ ಹಾಕಿ ಕುರ್ನಾಡುವಿನಲ್ಲಿರುವ ಮನೆಗೆ ತೆರಳಿದ್ದಾರೆ. ರಾತ್ರಿ ಕಳ್ಳರ ಗ್ಯಾಂಗ್‌ ಗೋಲ್ಡ್‌ ಕಿಂಗ್‌ ಜ್ಯುವೆಲ್ಲರಿಗೆ ಕನ್ನ ಹಾಕಿದ್ದಾರೆ. ಗೋಡೆಯನ್ನು ಕೊರೆದು ಒಳ ನುಗ್ಗಿದ ಕಳ್ಳರು ಅಂಗಡಿಯಲ್ಲಿಆಭರಣಕ್ಕಾಗಿ ಶೋಧ ಕಾರ್ಯ ಮಾಡಿದ್ದಾರೆ.

ಇತ್ತ ಅಂಗಡಿಗೆ ಕಳ್ಳರು ನುಗ್ಗುತ್ತಿದ್ದಂತೆಯೇ ಅಂಗಡಿಯಲ್ಲಿ ಸೈರನ್‌ ಮೊಳಗಿದೆ. ಅಂಗಡಿಯಲ್ಲಿ ಸೈರನ್‌ ಆದ್ರೆ ತನ್ನ ಮೊಬೈಲ್‌ನಲ್ಲಿ ಅಲರ್ಟ್‌ ಬರುವಂತಹ ಟೆಕ್ನಾಲಜಿಯನ್ನು ಇಬ್ರಾಹಿಂ ಅಳವಡಿಸಿಕೊಂಡಿದ್ದರು. ಅಂಗಡಿಯಲ್ಲಿ ಕಳವು ನಡೆದಿದೆ ಅನ್ನೋದು ಇಬ್ರಾಹಿಂ ಅವರಿಗೆ ತಿಳಿಯುತ್ತಿದ್ದಂತೆಯೇ ಇಬ್ರಾಹಿಂ ಅಂಗಡಿಗೆ ಬಂದಿದ್ದಾರೆ. ಆದರೆ ಸೈರನ್‌ ಸದ್ದಿಗೆ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.

ಅಂಗಡಿಯಲ್ಲಿದ್ದ ಬೆಳ್ಳಿಯ ಸಾಮಗ್ರಿಗಳೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರ ಕೃತ್ಯ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಆದರೆ ಮಾಲೀಕ ಇಬ್ರಾಹಿಂ ಜಾಣ್ಮೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಣಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :

 ಡ್ರಿಂಕ್ಸ್‌ ಕುಡಿಸಿ ಬಾರ್‌ ಬಿಲ್ ನೀಡದ ಸ್ನೇಹಿತನ ಮೇಲೆ ಹಲ್ಲೆ

ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಪತ್ನಿ ಎದುರೇ ಸಿಕ್ಕಿ ಬಿದ್ದ ಕಾಮುಕ ಪ್ರಾಧ್ಯಾಪಕ

(The thieves who drilled into the wall and stole the gold shop were the owner's ingenious thieves mangalore near mudipu)

Comments are closed.