ಬಿಟ್ಯಾಕ್ ಬಂದೇ ಅಂತಿದ್ದಾರೆ ಕಣ್ಣೇ ಅಂದಿರಿಂದಿ ಸುಂದರಿ…! ಸಿದ್ಧವಾಯ್ತು ಮಂಗ್ಲಿ ಮಧುರ ಕಂಠದಲ್ಲಿ ಕನ್ನಡ ಸಾಂಗ್…!!

ರಾಬರ್ಟ್ ಸಿನಿಮಾಗೆ ದರ್ಶನ್ ನಟನೆಯ ಜೊತೆಗೆ ಹೆಸರು ತಂದುಕೊಟ್ಟಿದ್ದು ಕಣ್ಣೇ ಅದಿರಿಂದಿ ಹಾಡು. ಈ ಹಾಡಿನ ಮೂಲಕ ರಾತ್ರಿ ಬೆಳಗಾಗೋದರಲ್ಲಿ ಸಿನರಸಿಕರ ಮನಗೆದ್ದ ಗಾಯಕಿ ಮಂಗ್ಲಿ ಈಗ ಬಿಟ್ಯಾಕ್ ಬಂದೇ ಎನ್ನುತ್ತ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ರಾಬರ್ಟ್ ತೆಲುಗು ಸಿನಿಮಾ ರಿಲೀಸ್ ಆಗೋ ಹೊತ್ತಿಗೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಕಣ್ಣೇ ಅದಿರಿಂದಿ ಹಾಡು ಇನ್ನಿಲ್ಲದ ಪ್ರಸಿದ್ಧಿ ಗಳಿಸಿತು. ಎಲ್ಲಿ ನೋಡಿದರೋ ಕಣ್ಣೇ ಅದಿರಿಂದಿ ಹಾಡಿನ ಟ್ಯೂನ್ ಕೇಳತೊಡಗಿತ್ತು. ಇಂತಹದೊಂದು ಸುಂದರ ಹಾಡನ್ನು ತಮ್ಮ ಮೆಲೋಡಿಯಸ್ ಧ್ವನಿಯ ಮೂಲಕ ಕಟ್ಟಿಕೊಟ್ಟ ಗಾಯಕಿ ಮಂಗ್ಲಿ ಪ್ರೇಕ್ಷಕರನ್ನು ಹಾಗೇ ಆವರಿಸಿಕೊಂಡು ಬಿಟ್ಟಿದ್ದರು.

ಇದೀಗ ತೆಲುಗಿನಿಂದ  ಈ ಮೋಡಿ ಮಾಡೋ ಗಾಯಕಿ ಕನ್ನಡಕ್ಕೆ ಕಾಲಿಟ್ಟಿದ್ದು, ಕರಿಯಾ ಅಯ್ ಲವ್ ಯೂ ಸಿನಿಮಾದ ಬಿಟ್ ಬಂದ ಹಳ್ಳಿಯಿಂದ ಬಿಟ್ಯಾಕೆ ಬಂದೆ ಎಂಬ ಗ್ರಾಮೀಣ ಸೊಗಡಿನ ಹಾಡಿಗೆ ಮಂಗ್ಲಿ ಧ್ವನಿಯಾಗಿದ್ದಾರೆ. ಹಂಸಲೇಖ ಶಿಷ್ಯ ಲೋಕೇಶ್ ಸಂಗೀತ ಸಂಯೋಜಿಸಿದ  ಈ ಹಾಡಿಗೆ ಮಂಗ್ಲಿ ಜೊತೆ ನವೀನ್ ಸಜ್ಜು ಧ್ವನಿ ಸೇರಿಸಿದ್ದಾರೆ.

ಕರಿಯಾ ಆಯ್ ಲವ್ ಯೂ ಸಿನಿಮಾದ ನಾಯಕ ಮಂಜುನಾಥ್ ಮಂಗ್ಲಿಯನ್ನು ಕನ್ನಡಕ್ಕೆ ಕರೆತಂದಿದ್ದು, ಈಗಾಗಲೇ ಹಾಡಿನ ರೆಕಾರ್ಡಿಂಗ್ ಮುಗಿದಿದೆ. ರಾಹುಕಾಲ್ ನಿರ್ದೇಶಿಸಿದ್ದ ತಿಪ್ಪೇಶ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಿಯಾ ಅಯ್ ಲವ್ ಯೂ ಸಂಪೂರ್ಣ ಹೊಸಬರ ಸಿನಿಮಾ.

ಹಳ್ಳಿಯ ಪ್ರೇಮ ಕತೆ ಹೊಂದಿರುವ  ಈ ಸಿನಿಮಾದಲ್ಲಿ ಮಂಜುನಾಥ ನಾಯಕರಾಗಿ ನಟಿಸಿದ್ದು, ಶಕುಂತಲಾ ನಾಯಕಿಯಾಗಿದ್ದಾರೆ. ಹೊಸಬರ ಸಿನಿಮಾದ ಮೂಲಕ ಕಂಚಿನಕಂಠದ ಗಾಯಕಿ ಮಂಗ್ಲಿ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಕನ್ನಡಿಗರು ಕನ್ನಡಹಾಡನ್ನು ಮಂಗ್ಲಿ ಧ್ವನಿಯಲ್ಲ ಎಷ್ಟು ಮೆಚ್ಚುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Comments are closed.