ಕಡಬ : ಕೊನೆಗೂ ಬಲೆಗೆ ಬಿತ್ತು ಆತಂಕ ಸೃಷ್ಟಿಸಿದ್ದ ಚಿರತೆ

ಕಡಬ : ಕಳೆದೊಂದು ವಾರದಿಂದಲೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದೆ.

ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಸ್ಪ್ರಿಂಕ್ಲರ್ ಜೆಟ್ ಬದಲಾಯಿಸಲು ತೋಟಕ್ಕೆ ರಾತ್ರಿ ತೆರಳಿದ್ದ ವೇಳೆ ಚಿರತೆಯಿಂದ ದಾಳಿ ನಡೆದಿತ್ತು ಚಿರತೆ ತೋಟದೊಳಗಿನ ಮರವನ್ನೇರಿ ಕುಳಿತಿತ್ತು. ಸ್ಥಳಿಯರು ಕೊಟ್ಟ ಮಾಹಿತಿಯು ಅರಣ್ಯ ಇಲಾಖೆಯ ಗಮನಕ್ಕೆ ಬಂದ ತಕ್ಷಣ ಕಾರ್ಯಪ್ರವೃತ್ತರಾಗಿ ಕಾರ್ಯಾಚರಣೆಗೆ ಇಳಿದರು. ಚಿರತೆ ಸೆರೆ ಹಿಡಿಯಲು ವಿವಿಧ ತಯಾರಿ ನಡೆಸಿ ಕೊನೆಗೂ ಬಂಧಿಸಿದ್ದಾರೆ.

ಕಳೆದ ವಾರ ಕೈಕಂಬ ಬಳಿ ಮನೆಯೊಂದರ ಶೌಚಾಲಯ ದಲ್ಲಿ ಬಂಧಿಯಾಗಿತ್ತು. ಹಿಡಿಯುವ ಕೆಲವೇ ನಿಮಿಷಗಳಲ್ಲಿ ಅರಣ್ಯಾಧಿಕಾರಿಗಳ ಅಚಾತುರ್ಯದಿಂದಾಗಿ ತಪ್ಪಿಸಿಕೊಂಡಿತ್ತು. ಅದೇ ಚಿರತೆ ಇದೀಗ ಇಬ್ಬರ ಮೇಲೆ ದಾಳಿ ಮಾಡಿದೆ ಎನ್ನುವ ಅನುಮಾನ ಹುಟ್ಟಿದೆ.

ಸ್ಥಳಕ್ಕೆ ಎಸಿಎಫ್ ಆಸ್ಟೀನ್ ಪಿ. ಸೋನ್ಸ್, ರೇಂಜರ್ ರಾಘವೇಂದ್ರ, ಮಂಜುನಾಥ್, ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಇದೀಗ ಚಿರತೆಯ ಬಂಧನ ಬಳಿಕ ಸ್ಥಳಿಯರು ಚಿರತೆಯ ಭಯದಿಂದ ನಿರಾಳರಾಗಿದ್ದಾರೆ.

Comments are closed.